ವಿಡಿಯೊದ ಆರಂಭದಲ್ಲಿ ಆ ಯುಟ್ಯೂಬರ್, ರೈಲ್ವೆ ಹಳಿ ಮೇಲೆ ಪಟಾಕಿಗೆ ಬೆಂಕಿ ಹಚ್ಚಿ, ದಟ್ಟ ಹೊಗೆ ಹೋಗುವುದನ್ನು ನೋಡುತ್ತಾ... ಎಷ್ಟು ಮಜಾ ಬರುತ್ತಿದೆ ನೋಡಿ ಎನ್ನುತ್ತಾನೆ. ನಂತರ, ದಟ್ಟ ಹೊಗೆ ಮಾಲಿನ್ಯವನ್ನು ಹೆಚ್ಚಿಸುತ್ತಿದೆ’ ಎಂದೆನ್ನುತ್ತಾನೆ.
ಇದಕ್ಕೆ ವಾಯವ್ಯ ರೈಲ್ವೆ ಕೂಡ ಪ್ರತಿಕ್ರಿಯಿಸಿದ್ದು, ಪ್ರಕರಣವನ್ನು ತನ್ನ ವ್ಯಾಪ್ತಿಯ ರೈಲ್ವೆ ಪೊಲೀಸರಿಗೆ ವರ್ಗಾಯಿಸಿದೆ.
ಇನ್ನು ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಯುವಕನ ವಿರುದ್ಧ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲು ಅವಘಡಗಳನ್ನು ತಡೆಯಲು ರೈಲ್ವೆ ಇಲಾಖೆ, ರೈಲ್ವೆ ಪೊಲೀಸರು ಎಷ್ಟು ಪ್ರಯತ್ನಪಟ್ಟರೂ ಇಂತಹ ಕೆಲವು ಬುದ್ದಿಗೇಡಿಗಳಿಂದಲೇ ಆಗಾಗ ಅಪಘಾತಗಳು ಸಂಭವಿಸುತ್ತವೆ. ರೈಲ್ವೆ ಪೊಲೀಸರು ಕೂಡಲೇ ಆತನನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಎಂದು ಮನವಿ ಮಾಡಿದ್ದಾರೆ.