ಹೋರಾಟದ ಹಾಡು, ಕ್ರಾಂತಿಗೀತೆಗಳ ಮೂಲಕ ಚಿರಪರಿಚಿತರಾಗಿರುವ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಅವರು ಕರ್ನಾಟಕದ ಗದ್ದರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಜನಪದ ಗೀತೆಗಳ ಜೊತೆಯಲ್ಲೇ ಬೆಳೆದುಬಂದ ಅವರು ಹೋರಾಟ, ಚಳವಳಿಯ ನಂಟು ಬೆಳೆಸಿಕೊಂಡರು. ದಲಿತ ಹೋರಾಟಗಾರರಾದ ಯರನಾಗನಹಳ್ಳಿ ರಾಮಚಂದ್ರ, ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅವರ ಪ್ರೇರಣೆಯಿಂದ ಹೋರಾಟದತ್ತ ಹೆಜ್ಜೆ ಇಟ್ಟರು.