ಒಳಚರಂಡಿ ವ್ಯವಸ್ಥೆ ಸುವ್ಯವಸ್ಥಿತವಾಗಿ ಇಲ್ಲದೇ ಇರುವುದು, ರಾಜಕಾಲುವೆಗಳ ಒತ್ತುವರಿ, ರಸ್ತೆಗಳನ್ನೂ ಯೋಜನಾಬದ್ಧವಾಗಿ ನಿರ್ಮಿಸದಿರುವುದು, ಬಿಎಂಆರ್ಸಿಎಲ್, ಜಲಮಂಡಳಿ ಮತ್ತು ಬಿಬಿಎಂಪಿ ನಡುವಿನ ಹೊಂದಾಣಿಕೆಯ ಕೊರತೆ ಇಷ್ಟೆಲ್ಲ ಸಂಕಷ್ಟ ಅನುಭವಿಸಬೇಕಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಜೋರು ಮಳೆ ಬಂದಾಗೆಲ್ಲ ಸಾರ್ವಜನಿಕರ ಈ ಆಕ್ರೋಶ ಮುಂದುವರಿಯುತ್ತಲೇ ಇರುತ್ತದೆ.