ವಾಣಿಜ್ಯ ನಗರಿ ಹುಬ್ಬಳ್ಳಿಯ ತ್ಯಾಜ್ಯ ನಿರ್ವಹಣೆಯಲ್ಲಿ ಇತ್ತೀಚೆಗೆ ಮಹತ್ತರ ಬದಲಾವಣೆಗಳಾಗಿವೆ. ಕಸ ಒಯ್ಯಲು ನಿತ್ಯ ಮನೆ ಎದುರಿಗೆ ಬಂದು ನಿಲ್ಲುವ ಆಟೊ ಟಿಪ್ಪರ್, ಹಸಿ-ಒಣ ಕಸ ವಿಂಗಡಣೆ, ವಲಯವಾರು ಕಾಂಪ್ಯಾಕ್ಟರ್ ಸ್ಟೇಷನ್, ವ್ಯವಸ್ಥಿತ ವಿಲೇವಾರಿ, ಸಾವಯವ ಗೊಬ್ಬರ ತಯಾರಿಕೆ, ಒಣ ತ್ಯಾಜ್ಯ ಘಟಕ ಸೇರಿದಂತೆ ಹಲವು ಬದಲಾವಣೆಗಳಿಗೆ ನಗರ ಸಾಕ್ಷಿಯಾಗಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ ನಡೆಸುವ ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಕೂ ನಗರ ವರ್ಷದಿಂದ ವರ್ಷಕ್ಕೆ ಉತ್ತಮ ರ್ಯಾಂಕ್ ಪಡೆಯುತ್ತಿದೆ. ಘನ ತ್ಯಾಜ್ಯ ನಿರ್ವಹಣೆಯಲ್ಲಿ ಆಗಿರುವ ಬದಲಾವಣೆಗಳ ಕುರಿತು ಕಣ್ಣಾಡಿಸೋಣ ಬನ್ನಿ.