ತುಂಬಿದ ಹೊಟ್ಟೆಯಲ್ಲಿ ತುಡುಗು ಮಾಡುವುದಿಲ್ಲ ಎಂಬ ಮಾತಿದೆ. ಸಮಾಜ ಸೇವೆ ಮಾಡುವುದಾದರೆ ಬಡವರ ಹೊಟ್ಟೆತುಂಬಿಸಿ, ಶ್ರಮಿಕರಿಗೆ ಆಹಾರ ನೀಡಿ. ಹೊಟ್ಟೆ ತುಂಬಿದರೆ ಅನಾಚಾರ ಕಡಿಮೆ ಆಗುತ್ತದೆ ಎಂದು ಗುರುಗಳು ಹೇಳಿದ ಮಾತನ್ನು ನಂಬಿದ ಮಹಾವೀರ ಯೂತ್ ಫೆಡರೇಷನ್ನವರು ಒಂದು ರೂಪಾಯಿಗೆ ಹೊಟ್ಟೆತುಂಬ ಊಟ ನೀಡಲು ಆರಂಭಿಸಿದರು. ಉಚಿತವಾಗಿ ನೀಡಿದಾಗ, ಆಹಾರ ವ್ಯರ್ಥ ಆಗುತ್ತಿತ್ತು. ಒಂದು ರೂಪಾಯಿಗೆ ನೀಡಲು ಆರಂಭಿಸಿದೆವು. ರೋಟಿ ಘರ್ ಕತೆ ಹಿಂಗೆ ಶುರು ಆಯ್ತು. ಈ ವಾರದ ಮಿಸಳ್ ಹಾಪ್ಚಾದಲ್ಲಿ ಇನ್ನಷ್ಟು ವಿವರ...