ನವೆಂಬರ್ ಬರುತ್ತಿದ್ದಂತೆ ರಾಜ್ಯೋತ್ಸವ ನೆನಪಾಗುತ್ತದೆ. ಆದರೆ ಕನ್ನಡ ತಾಯಿ ಭುವನೇಶ್ವರಿಯನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ನಾಡನ್ನು ಆಳಿದ ಕದಂಬರು ಪೂಜಿಸಿದ್ದರು. ತದನಂತರ ವಿಜಯನಗರದ ಅರಸರು ಪೂಜಿಸಿದರು. ಅವರ ಸಾಮಂತರಾಜ ಬಿಳಗಿ ಅರಸ ತಾಯಿ ಭುವನೇಶ್ವರಿಗಾಗಿ ದೇವಾಲಯವೊಂದನ್ನೇ ಕಟ್ಟಿಸಿದ. ನಮ್ಮ ರಾಜ್ಯದಲ್ಲಿಯೇ ತಾಯಿ ಭುವನೇಶ್ವರಿಗಾಗಿ ದೇವಾಲಯವೊಂದಿದ್ದರೆ, ವರ್ಷವಿಡೀ ತ್ರಿಕಾಲದಲ್ಲಿ ಪೂಜೆ ನಡೆಯುತ್ತಿದ್ದರೆ ಅದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಭುವನಗಿರಿಯಲ್ಲಿ ಮಾತ್ರ.