ಪರಿಸರ ರಕ್ಷಣೆ ಹಾಗೂ ಪೋಷಣೆಯಲ್ಲಿ ತೊಡಗಿರುವವರು ತಮ್ಮ ಕೆಲಸದಿಂದಲೇ ಮತ್ತೊಬ್ಬರಿಗೆ ಸ್ಫೂರ್ತಿಯಾಗುತ್ತಾರೆ. ಅವರ ಕೆಲಸ ಇನ್ನೊಬ್ಬರನ್ನು ಆ ಕ್ಷೇತ್ರಕ್ಕೆ ಕರೆತರುತ್ತದೆ. ಇಂತಹ ಸ್ಫೂರ್ತಿಪಡೆದ ಸಾಲಿನಲ್ಲಿ ನಿಲ್ಲುವವರು ಪರಿಸರ ಮಂಜು. ಇವರ ಸ್ಫೂರ್ತಿಸೆಲೆ ಸಾಲುಮರದ ತಿಮ್ಮಕ್ಕ. ಕನ್ನಡ ಹಬ್ಬ, ಹುಟ್ಟಿದಹಬ್ಬ, ನಾಮಕರಣ, ಮದುವೆ ಮುಂತಾದ ಸಂದರ್ಭಗಳಲ್ಲಿ ಹಣ್ಣು, ಔಷಧ ಸಸಿಗಳನ್ನು ನೀಡುತ್ತಾರೆ. ರೈತರಿಗೆ ಸುಮಾರು ಎರಡು ಸಾವಿರ ಹಣ್ಣಿನ ಸಸಿಯನ್ನು ಉಚಿತವಾಗಿ ನೀಡಿದ್ದಾರೆ ಪರಿಸರ ಮಂಜು. ಇವರ ಈ ಪರಿಸರ ಮಿಡಿತದಿಂದ ಸುಮಾರು 10 ಸಾವಿರ ಸಸಿಗಳು ನಾಗರಿಕರ ಕೈಸೇರಿವೆ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...