ಗುರುವಾರ ಕೆ.ಆರ್.ಪುರದಲ್ಲಿ ಸಚಿವ ಭೈರತಿ ಬಸವರಾಜು ಆಹಾರ ಕಿಟ್ ಮತ್ತು ಕೋಳಿಗಳನ್ನು ತಮ್ಮ ಕ್ಷೇತ್ರದ ಜನರಿಗೆ ನೀಡುತ್ತಿರುವುದು. ಈ ಸಮಯದಲ್ಲಿ ಟೋಕನ್ ಪಡೆದು ಕೋಳಿ ಮತ್ತು ಆಹಾರದ ಕಿಟ್ ನೀಡುತ್ತಿದ್ದರು. ಇದನ್ನು ಪಡೆಯಲು ಜನರು ನೂಕು ನುಗ್ಗಲಿನಲ್ಲಿ ಒಬ್ಬರ ಮೇಲೆ ಒಬ್ಬರು ಬಿದ್ದು ಕೋಳಿ ಪಡೆಯಲು ಬರುತ್ತಿದ್ದರು. ಈ ಸಂದರ್ಭದಲ್ಲಿ ಯಾವುದೇ ಅಂತರ ಕಾಯ್ದುಕೊಂಡಿರಲಿಲ್ಲ.