ಬಹುತೇಕ ದಂಪತಿ ‘ಕುಟುಂಬ ಯೋಜನೆ’ಯ ವಿಷಯದಲ್ಲಿ ಎಡವುತ್ತಾರೆ. ಕೈಗೂಸಿರುವಾಗಲೇ ಮತ್ತೊಮ್ಮೆ ಗರ್ಭ ಧರಿಸುವುದು, ಶಿಶು ‘ಕೈಗೆ ದಕ್ಕಿತು’ ಎನ್ನುವುದು ಖಾತರಿಯಾಗುವ ಮೊದಲೇ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ (ವ್ಯಾಸೆಕ್ಟಮಿ) ಮುಂದಾಗಿ, ಬಳಿಕ ಪರಿತಪಿಸುವಂತಹ ಸಂದರ್ಭಗಳು ಎದುರಾಗುವುದು ಸಾಮಾನ್ಯ ಎಂಬಂತಾಗಿದೆ. ಸೂಕ್ತ ಅರಿವು ಹೊಂದುವುದೇ ಇದಕ್ಕೆಲ್ಲ ಪರಿಹಾರ ಎನ್ನುತ್ತಾರೆ ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್. ಭಟ್.
ಸದಾ ಮಹಿಳೆಯರೇ ಸಂತಾನನಿಯಂತ್ರಣ ಕ್ರಮಕ್ಕೆ ಒಳಗಾಗುವ ಬದಲು, ಪುರುಷರು ಸಾಧ್ಯವಾದಷ್ಟೂ ಕಾಂಡೋಮ್ ಬಳಕೆ ಅಥವಾ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲು ಮುಂದಾಗಬೇಕು