<p><strong>ನ್ಯೂಯಾರ್ಕ್:</strong> ಭಾರತದ ಖ್ಯಾತ ಬಾಣಸಿಗ ವಿಕಾಸ್ ಖನ್ನಾ ಅವರು ಕೋವಿಡ್–19ಗೆ ಸಂಬಂಧಿಸಿದಂತೆ ಆಮ್ಲಜನಕ <span class="aCOpRe"><span>ಕಾನ್ಸಂಟ್ರೇಟರ್</span></span>ಗಳು ಮತ್ತು ಪಿಪಿಇ ಕಿಟ್ಗಳು ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ಕಳುಹಿಸಿದ್ದಾರೆ.</p>.<p>ಕಳೆದ ವರ್ಷ ಕೋವಿಡ್–19 ಮೊದಲ ಅಲೆಯ ಸಂದರ್ಭದಲ್ಲೂ ಭಾರತದಲ್ಲಿನ ಲಕ್ಷಾಂತರ ಮಂದಿಗೆ ಊಟ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿದ್ದರು.</p>.<p>ಈ ಬಾರಿ ಸುಮಾರು 10 ಸಾವಿರ ಆಮ್ಲಜನಕ ಕಾನ್ಸ್ಂಟ್ರೇಟರ್ಗಳು ಮತ್ತು 50 ಸಾವಿರ ಅಗ್ನಿನಿರೋಧಕ ಪಿಪಿಇ ಕಿಟ್ಗಳನ್ನು ಸಂಗ್ರಹಿಸಿ ಭಾರತಕ್ಕೆ ಕಳುಹಿಸುವುದು ಅವರ ಉದ್ದೇಶವಾಗಿದೆ.</p>.<p>‘ಕೆಲವೇ ದಿನಗಳಲ್ಲಿ 5.25 ಲಕ್ಷ ಡಾಲರ್ (ಸುಮಾರು ₹4ಕೋಟಿ) ದೇಣಿಗೆ ಸಂಗ್ರಹವಾಗಿದೆ. 650 ಆಮ್ಲಜನಕ ಕಾನ್ಸ್ನ್ಟ್ರೇಟರ್ಗಳು ಮತ್ತು 5000 ಪಿಪಿಇ ಕಿಟ್ಗಳು ಈಗಾಗಲೇ ಭಾರತ ತಲುಪಿವೆ’ ಎಂದು ಖನ್ನಾ ಟ್ವೀಟ್ ಮಾಡಿದ್ದಾರೆ.</p>.<p>‘ನಮ್ಮ ತಾಯ್ನಾಡಿನಲ್ಲಿನ ಪರಿಸ್ಥಿತಿ ಹೃದಯವಿದ್ರಾವಕವಾಗಿದೆ. ಎಲ್ಲರೂ ಸುರಕ್ಷಿತವಾಗಿ ಇರುವವರೆಗೂ ನಾವೆಲ್ಲರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಜೀವಗಳನ್ನು ಉಳಿಸಬೇಕು ಎನ್ನುವುದು ನನ್ನ ಆಶಯ. ಹೀಗಾಗಿ, ಪರಿಸ್ಥಿತಿ ಸುಧಾರಿಸುವವರೆಗೂ ನೆರವು ನೀಡುವ ಕಾರ್ಯವನ್ನು ಮುಂದುವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/karnataka-news/karnataka-chief-minister-bs-yediyurappa-on-hinted-that-the-lockdown-like-restrictions-imposed-across-828640.html" target="_blank">ಕರ್ಫ್ಯೂ ನಿರೀಕ್ಷಿತ ಫಲ ನೀಡಿಲ್ಲ, ಲಾಕ್ಡೌನ್ ಮಾಡುವುದು ಅನಿವಾರ್ಯ: ಬಿಎಸ್ವೈ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್:</strong> ಭಾರತದ ಖ್ಯಾತ ಬಾಣಸಿಗ ವಿಕಾಸ್ ಖನ್ನಾ ಅವರು ಕೋವಿಡ್–19ಗೆ ಸಂಬಂಧಿಸಿದಂತೆ ಆಮ್ಲಜನಕ <span class="aCOpRe"><span>ಕಾನ್ಸಂಟ್ರೇಟರ್</span></span>ಗಳು ಮತ್ತು ಪಿಪಿಇ ಕಿಟ್ಗಳು ಸೇರಿದಂತೆ ಹಲವು ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ಕಳುಹಿಸಿದ್ದಾರೆ.</p>.<p>ಕಳೆದ ವರ್ಷ ಕೋವಿಡ್–19 ಮೊದಲ ಅಲೆಯ ಸಂದರ್ಭದಲ್ಲೂ ಭಾರತದಲ್ಲಿನ ಲಕ್ಷಾಂತರ ಮಂದಿಗೆ ಊಟ ಮತ್ತು ಅಗತ್ಯ ವಸ್ತುಗಳನ್ನು ವಿತರಿಸಿದ್ದರು.</p>.<p>ಈ ಬಾರಿ ಸುಮಾರು 10 ಸಾವಿರ ಆಮ್ಲಜನಕ ಕಾನ್ಸ್ಂಟ್ರೇಟರ್ಗಳು ಮತ್ತು 50 ಸಾವಿರ ಅಗ್ನಿನಿರೋಧಕ ಪಿಪಿಇ ಕಿಟ್ಗಳನ್ನು ಸಂಗ್ರಹಿಸಿ ಭಾರತಕ್ಕೆ ಕಳುಹಿಸುವುದು ಅವರ ಉದ್ದೇಶವಾಗಿದೆ.</p>.<p>‘ಕೆಲವೇ ದಿನಗಳಲ್ಲಿ 5.25 ಲಕ್ಷ ಡಾಲರ್ (ಸುಮಾರು ₹4ಕೋಟಿ) ದೇಣಿಗೆ ಸಂಗ್ರಹವಾಗಿದೆ. 650 ಆಮ್ಲಜನಕ ಕಾನ್ಸ್ನ್ಟ್ರೇಟರ್ಗಳು ಮತ್ತು 5000 ಪಿಪಿಇ ಕಿಟ್ಗಳು ಈಗಾಗಲೇ ಭಾರತ ತಲುಪಿವೆ’ ಎಂದು ಖನ್ನಾ ಟ್ವೀಟ್ ಮಾಡಿದ್ದಾರೆ.</p>.<p>‘ನಮ್ಮ ತಾಯ್ನಾಡಿನಲ್ಲಿನ ಪರಿಸ್ಥಿತಿ ಹೃದಯವಿದ್ರಾವಕವಾಗಿದೆ. ಎಲ್ಲರೂ ಸುರಕ್ಷಿತವಾಗಿ ಇರುವವರೆಗೂ ನಾವೆಲ್ಲರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಜೀವಗಳನ್ನು ಉಳಿಸಬೇಕು ಎನ್ನುವುದು ನನ್ನ ಆಶಯ. ಹೀಗಾಗಿ, ಪರಿಸ್ಥಿತಿ ಸುಧಾರಿಸುವವರೆಗೂ ನೆರವು ನೀಡುವ ಕಾರ್ಯವನ್ನು ಮುಂದುವರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.</p>.<p><strong>ಇದನ್ನೂ ಓದಿ... <a href="https://www.prajavani.net/karnataka-news/karnataka-chief-minister-bs-yediyurappa-on-hinted-that-the-lockdown-like-restrictions-imposed-across-828640.html" target="_blank">ಕರ್ಫ್ಯೂ ನಿರೀಕ್ಷಿತ ಫಲ ನೀಡಿಲ್ಲ, ಲಾಕ್ಡೌನ್ ಮಾಡುವುದು ಅನಿವಾರ್ಯ: ಬಿಎಸ್ವೈ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>