ಪರಿಸ್ಥಿತಿ ನಿಯಂತ್ರಿಸಲು ರಸ್ತೆಗಿಳಿದಿರುವ ಭದ್ರತಾ ಪಡೆಗಳು ಸೋಮವಾರ ಹಲವರನ್ನು ವಶಕ್ಕೆ ಪಡೆದಿವೆ. ದೇಶದಲ್ಲಿ ಅಪರೂಪಕ್ಕೆ ನಡೆಯುತ್ತಿರುವ ನಾಗರಿಕರ ಪ್ರತಿಭಟನೆಗಳನ್ನು ತಡೆಯಲು, ಟಿ.ವಿ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರವಾಗದಂತೆ ನಿರ್ಬಂಧಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ.