<p><strong>ಕೊಲೊಂಬೊ:</strong> ಕೋವಿಡ್-19 ಸೋಂಕು ಪ್ರಕರಣಗಳ ಏರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಶ್ರೀಲಂಕಾ ಸರ್ಕಾರ, ಮೇ ಅಂತ್ಯದ ವರೆಗೆಅಂತರರಾಷ್ಟ್ರೀಯವಿಮಾನ ಸಂಚಾರಕ್ಕೆ ನಿರ್ಬಂಧಹೇರುವುದಾಗಿ ಅಲ್ಲಿನ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.</p>.<p>ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ʼಶ್ರೀಲಂಕಾದಲ್ಲಿನ ಎಲ್ಲ ವಿಮಾನ ನಿಲ್ದಾಣಗಳಿಗೆ ವಿದೇಶಿ ಪ್ರಯಾಣಿಕರು ಪ್ರವೇಶಿಸುವುದನ್ನು ಮೇ21ರ ಮಧ್ಯರಾತ್ರಿಯಿಂದ31ರ ಮಧ್ಯರಾತ್ರಿಯ ವರೆಗೆನಿರ್ಬಂಧಿಸಲಾಗುವುದು. ದೇಶದಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಈ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬರಲಿದೆʼ ಎಂದು ತಿಳಿಸಿದೆ.</p>.<p>ಈ ಅವಧಿಯಲ್ಲಿ ದೇಶದಿಂದ ಹೊರ ಹೋಗಲು ಬಯಸುವವರು ಹೋಗಲು ಅವಕಾಶವಿದೆ.ಅಂತರರಾಷ್ಟ್ರೀಯ ವಿಮಾನಗಳ ಮೂಲಕ ವಾಪಸ್ ಆಗುವವರಿದ್ದರೆ(ವಿಮಾನ ಆಗಮಿಸಿದ 12 ಗಂಟೆಯೊಳಗೆ ವಾಪಸ್ ತೆರಳಲು) ಅವಕಾಶವಿದೆ ಎಂದೂ ತಿಳಿಸಿದೆ.</p>.<p>ಶ್ರೀಲಂಕಾದಲ್ಲಿ ಕೋವಿಡ್ ಮೂರನೇ ಅಲೆ ಕಾಣಿಸಿಕೊಂಡಿದ್ದು, ದೇಶದಾದ್ಯಂತ ಸುಮಾರು1,51,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.1,051 ಸೋಂಕಿತರು ಮೃತಪಟ್ಟಿದ್ದು, ಬುಧವಾರ ಒಂದೇದಿನ3,623 ಹೊಸ ಪ್ರಕರಣಗಳು ವರದಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲೊಂಬೊ:</strong> ಕೋವಿಡ್-19 ಸೋಂಕು ಪ್ರಕರಣಗಳ ಏರಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಶ್ರೀಲಂಕಾ ಸರ್ಕಾರ, ಮೇ ಅಂತ್ಯದ ವರೆಗೆಅಂತರರಾಷ್ಟ್ರೀಯವಿಮಾನ ಸಂಚಾರಕ್ಕೆ ನಿರ್ಬಂಧಹೇರುವುದಾಗಿ ಅಲ್ಲಿನ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.</p>.<p>ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ʼಶ್ರೀಲಂಕಾದಲ್ಲಿನ ಎಲ್ಲ ವಿಮಾನ ನಿಲ್ದಾಣಗಳಿಗೆ ವಿದೇಶಿ ಪ್ರಯಾಣಿಕರು ಪ್ರವೇಶಿಸುವುದನ್ನು ಮೇ21ರ ಮಧ್ಯರಾತ್ರಿಯಿಂದ31ರ ಮಧ್ಯರಾತ್ರಿಯ ವರೆಗೆನಿರ್ಬಂಧಿಸಲಾಗುವುದು. ದೇಶದಲ್ಲಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಈ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬರಲಿದೆʼ ಎಂದು ತಿಳಿಸಿದೆ.</p>.<p>ಈ ಅವಧಿಯಲ್ಲಿ ದೇಶದಿಂದ ಹೊರ ಹೋಗಲು ಬಯಸುವವರು ಹೋಗಲು ಅವಕಾಶವಿದೆ.ಅಂತರರಾಷ್ಟ್ರೀಯ ವಿಮಾನಗಳ ಮೂಲಕ ವಾಪಸ್ ಆಗುವವರಿದ್ದರೆ(ವಿಮಾನ ಆಗಮಿಸಿದ 12 ಗಂಟೆಯೊಳಗೆ ವಾಪಸ್ ತೆರಳಲು) ಅವಕಾಶವಿದೆ ಎಂದೂ ತಿಳಿಸಿದೆ.</p>.<p>ಶ್ರೀಲಂಕಾದಲ್ಲಿ ಕೋವಿಡ್ ಮೂರನೇ ಅಲೆ ಕಾಣಿಸಿಕೊಂಡಿದ್ದು, ದೇಶದಾದ್ಯಂತ ಸುಮಾರು1,51,000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.1,051 ಸೋಂಕಿತರು ಮೃತಪಟ್ಟಿದ್ದು, ಬುಧವಾರ ಒಂದೇದಿನ3,623 ಹೊಸ ಪ್ರಕರಣಗಳು ವರದಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>