1793ರಲ್ಲಿ ಗೂರ್ಖಾ ಆಕ್ರಮಣಕಾರರನ್ನು ಟಿಬೆಟ್ನಿಂದ ಹೊರ ಓಡಿಸಲಾಯಿತು. ಈ ವೇಳೆ ಕ್ವಿಂಗ್ ಸರ್ಕಾರವು ಟಿಬೆಟ್ನ ಉತ್ತಮ ಆಡಳಿತಕ್ಕಾಗಿ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು. ಇದರಡಿ ಕೇಂದ್ರ ಸರ್ಕಾರವು ಟಿಬೆಟ್ ವ್ಯವಸ್ಥೆಯನ್ನು ನೋಡಿಕೊಳ್ಳಲಿದೆ. ಅದೇ ರೀತಿ ದಲೈಲಾಮ ಅವರ ಉತ್ತರಾಧಿಕಾರಿ ಆಯ್ಕೆಗೂ ಚೀನಾದ ಕೇಂದ್ರ ಸರ್ಕಾರ ಅನುಮೋದನೆ ಪಡೆಯಬೇಕಿದೆ ಎಂದು ಶ್ವೇತ ಪತ್ರದಲ್ಲಿ ತಿಳಿಸಲಾಗಿದೆ.