ನ್ಯೂಜಿಲೆಂಡ್ನಲ್ಲಿ ಪ್ರವಾಹ ಇಳಿಮುಖ: ಕೃಷಿ ಭೂಮಿಗೆ ನಗರದ ತ್ಯಾಜ್ಯ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ನಲ್ಲಿ ಮಂಗಳವಾರ ಪ್ರವಾಹದ ತೀವ್ರತೆ ಇಳಿಕೆಯಾಗಿದ್ದು, ಕ್ಯಾಂಟರ್ಬರಿಯಲ್ಲಿರುವ ಕೃಷಿ ಪ್ರದೇಶಗಳಿಗೆ ತೀವ್ರ ಹಾನಿಯಾಗಿದೆ, ಜತೆಗೆ ಪ್ರಮುಖ ಸೇತುವೆಯೊಂದಕ್ಕೆ ಹಾನಿಗೊಂಡಿದೆ.
‘ಪ್ರವಾಹದಿಂದ ಹಾನಿಗೊಳಗಾಗಿರುವ ಆಶ್ಬರ್ಟನ್ ಪಟ್ಟಣವನ್ನು ದಕ್ಷಿಣದ ಮುಖ್ಯ ಹೆದ್ದಾರಿಗೆ ಸಂಪರ್ಕಿಸುವ ಸೇತುವೆ ಸರಿಪಡಿಸಲು ಆದ್ಯತೆ ನೀಡಲಾಗುತ್ತದೆ. ಇದು ಎಷ್ಟು ಸಮಯ ತೆಗೆದುಕೊಳ್ಳುವುದೋ ಗೊತ್ತಿಲ್ಲ. ಆದರೆ, ಸಾರಿಗೆ ಸಂಪರ್ಕಗಳನ್ನು ಸರಿಪಡಿಸಲು ಆದ್ಯತೆ ನೀಡಲಾಗುತ್ತದೆ‘ ಎಂದು ಪ್ರಧಾನಿ ಜಸಿಂಡಾ ಆರ್ಡೆನ್ ಸುದ್ದಿಗಾರರಿಗೆ ತಿಳಿಸಿದರು.
ಪ್ರವಾಹದಿಂದಾಗಿ ಪಶು ಆಹಾರ ಹಾಳಾಗಿದೆ. ಕೃಷಿಭೂಮಿಗೆ ಹಾಕಿದ್ದ ಬೇಲಿಗಳು ಮುರಿದಿವೆ. ಜಮೀನಿನಾದ್ಯಂತ ನಗರದ ಕಟ್ಟಡಗಳ ತ್ಯಾಜ್ಯಗಳು ಹರಡಿಕೊಂಡಿವೆ. ಇದರಿಂದ ಕೃಷಿಕರಿಗೆ ತೀವ್ರ ತೊಂದರೆಯಾಗಿದೆ. ಇವೆಲ್ಲವನ್ನೂ ಗಮನಿಸಲಾಗಿದೆ‘ ಎಂದು ಆರ್ಡೆರ್ನ್ ಹೇಳಿದರು. ‘ಹಾನಿಗೊಳಗಾದ ಕೃಷಿ ಜಮೀನನ್ನು ಸ್ವಚ್ಛಗೊಳಿಸುವ ಮೂಲಕ ರೈತರ ಬೆಂಬಲಕ್ಕೆ ನಿಲ್ಲುತ್ತೇವೆ‘ ಎಂದು ಭರವಸೆ ನೀಡಿದರು.
ನ್ಯೂಜಿಲೆಂಡ್ನ ಕ್ಯಾಂಟರ್ಬರಿ ಪ್ರದೇಶದಲ್ಲಿ ಸೋಮವಾರ ಭಾರಿ ಮಳೆ ಸುರಿದ ಪರಿಣಾಮ ಪ್ರವಾಹ ಸೃಷ್ಟಿಯಾಗಿತ್ತು. ನೂರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಈ ರಾಜ್ಯದಲ್ಲಿ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತ್ತು.
‘ಯಸ್ ಚಂಡಮಾರುತ‘ದಿಂದ 2.21 ಲಕ್ಷ ಹೆಕ್ಟೆರ್ ಬೆಳೆ ಹಾನಿ: ಮಮತಾ ಬ್ಯಾನರ್ಜಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.