<p class="bodytext"><strong>ಲೆಸ್ ಕೆಯೆಸ್, ಹೈಟಿ: </strong>ಹೈಟಿಯಲ್ಲಿ ಭೀಕರ ಭೂಕಂಪನದಿಂದ ಸುಮಾರು 2,000 ಜನರು ಸಾವಿಗೀಡಾಗಿದ್ದು, ಸಾವಿರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ. ಸರ್ಕಾರದ ನೆರವು ಇಲ್ಲದೆ, ಅನೇಕ ಸಂತ್ರಸ್ತರು ಬುಧವಾರ ನಾಲ್ಕನೇ ರಾತ್ರಿಯನ್ನು ಬಯಲು ಪ್ರದೇಶದಲ್ಲಿ ಶುದ್ಧ ನೀರು ಮತ್ತು ಆಹಾರವೂ ಇಲ್ಲದೆ ಕಳೆದರು.</p>.<p class="bodytext">ನೈರುತ್ಯ ಹೈಟಿಯಲ್ಲಿ ಶನಿವಾರ ಸಂಭವಿಸಿದ 7.2 ರ ತೀವ್ರತೆಯ ಭೂಕಂಪನದ ನಂತರ ಅತಿಹೆಚ್ಚು ಹಾನಿಗೊಳಗಾದ ಪಟ್ಟಣ ಲೆಸ್ ಕೆಯೆಸ್ಗೆ ಭೇಟಿ ನೀಡಿದ ಪ್ರಧಾನಿ ಏರಿಯಲ್ ಹೆನ್ರಿ, ಸಂತ್ರಸ್ತರ ಧೈರ್ಯವನ್ನು ಶ್ಲಾಘಿಸಿದರು. ಸಂತ್ರಸ್ತರಿಗೆ ಶೀಘ್ರ ನೆರವು ಒದಗಿಸುವ ಭರವಸೆ ನೀಡಿದರು.</p>.<p class="bodytext">‘ಸರ್ಕಾರದಿಂದ ಯಾರೂ ಇಲ್ಲಿಗೆ ಬಂದಿಲ್ಲ. ಏನೂ ನೆರವು ನೀಡಿಲ್ಲ’ ಎಂದು ಈ ಪ್ರದೇಶದ ರೇಡಿಯೋ ಮತ್ತು ದೂರದರ್ಶನ ಕೇಂದ್ರಗಳಿಗೆ ಭೇಟಿ ನೀಡಿದ ಪಾದ್ರಿ ರೂಸ್ವೆಲ್ಟ್ ಮಿಲ್ಫೋರ್ಡ್ ಹೇಳಿದರು.</p>.<p>ಭೂಕಂಪನದಿಂದ ನೂರಾರು ಜನರು ಮನೆ ಕಳೆದುಕೊಂಡು ಗದ್ದೆಯಲ್ಲಿ ಬೀಡುಬಿಟ್ಟಿದ್ದಾರೆ. ‘ನಮಗೆ ಸಹಾಯ ಬೇಕು’ ಎಂದು ಮಿಲ್ಫೋರ್ಡ್ ಹೇಳಿದರು.</p>.<p>‘ಹೆಚ್ಚಿನ ಹಿಂಸಾತ್ಮಕ ಅಪರಾಧಗಳು ನಡೆಯುವ ಈ ದೇಶದಲ್ಲಿ, ನಿವಾಸಿಗಳು ರಾತ್ರಿ ಕಾವಲಿಗೆ ತಮ್ಮದೇ ಆದ ಭದ್ರತಾ ತಂಡಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಯ ಬಗ್ಗೆ ಆ ತಂಡಗಳು ನಿರ್ದಿಷ್ಟ ಗಮನ ಹರಿಸುತ್ತವೆ’ ಎಂದು ಅವರು ಹೇಳಿದರು.</p>.<p><strong>ಆಸ್ಪತ್ರೆಗಳಿಗೂ ಹಾನಿ; ತಾತ್ಕಾಲಿಕ ಡೇರೆಗಳಲ್ಲಿ ಚಿಕಿತ್ಸೆ: </strong>ಭೂಕಂಪನದ ಹಾನಿಯಿಂದ ಹಲವು ಪ್ರಮುಖ ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. ತಾತ್ಕಾಲಿಕ ಡೇರೆಗಳಲ್ಲಿರುವ ವೈದ್ಯರು ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಗಾಯಗೊಂಡವರನ್ನು ರಕ್ಷಿಸಲು ಅವಿರತ ಶ್ರಮಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="bodytext"><strong>ಲೆಸ್ ಕೆಯೆಸ್, ಹೈಟಿ: </strong>ಹೈಟಿಯಲ್ಲಿ ಭೀಕರ ಭೂಕಂಪನದಿಂದ ಸುಮಾರು 2,000 ಜನರು ಸಾವಿಗೀಡಾಗಿದ್ದು, ಸಾವಿರಾರು ಮಂದಿ ನೆಲೆ ಕಳೆದುಕೊಂಡಿದ್ದಾರೆ. ಸರ್ಕಾರದ ನೆರವು ಇಲ್ಲದೆ, ಅನೇಕ ಸಂತ್ರಸ್ತರು ಬುಧವಾರ ನಾಲ್ಕನೇ ರಾತ್ರಿಯನ್ನು ಬಯಲು ಪ್ರದೇಶದಲ್ಲಿ ಶುದ್ಧ ನೀರು ಮತ್ತು ಆಹಾರವೂ ಇಲ್ಲದೆ ಕಳೆದರು.</p>.<p class="bodytext">ನೈರುತ್ಯ ಹೈಟಿಯಲ್ಲಿ ಶನಿವಾರ ಸಂಭವಿಸಿದ 7.2 ರ ತೀವ್ರತೆಯ ಭೂಕಂಪನದ ನಂತರ ಅತಿಹೆಚ್ಚು ಹಾನಿಗೊಳಗಾದ ಪಟ್ಟಣ ಲೆಸ್ ಕೆಯೆಸ್ಗೆ ಭೇಟಿ ನೀಡಿದ ಪ್ರಧಾನಿ ಏರಿಯಲ್ ಹೆನ್ರಿ, ಸಂತ್ರಸ್ತರ ಧೈರ್ಯವನ್ನು ಶ್ಲಾಘಿಸಿದರು. ಸಂತ್ರಸ್ತರಿಗೆ ಶೀಘ್ರ ನೆರವು ಒದಗಿಸುವ ಭರವಸೆ ನೀಡಿದರು.</p>.<p class="bodytext">‘ಸರ್ಕಾರದಿಂದ ಯಾರೂ ಇಲ್ಲಿಗೆ ಬಂದಿಲ್ಲ. ಏನೂ ನೆರವು ನೀಡಿಲ್ಲ’ ಎಂದು ಈ ಪ್ರದೇಶದ ರೇಡಿಯೋ ಮತ್ತು ದೂರದರ್ಶನ ಕೇಂದ್ರಗಳಿಗೆ ಭೇಟಿ ನೀಡಿದ ಪಾದ್ರಿ ರೂಸ್ವೆಲ್ಟ್ ಮಿಲ್ಫೋರ್ಡ್ ಹೇಳಿದರು.</p>.<p>ಭೂಕಂಪನದಿಂದ ನೂರಾರು ಜನರು ಮನೆ ಕಳೆದುಕೊಂಡು ಗದ್ದೆಯಲ್ಲಿ ಬೀಡುಬಿಟ್ಟಿದ್ದಾರೆ. ‘ನಮಗೆ ಸಹಾಯ ಬೇಕು’ ಎಂದು ಮಿಲ್ಫೋರ್ಡ್ ಹೇಳಿದರು.</p>.<p>‘ಹೆಚ್ಚಿನ ಹಿಂಸಾತ್ಮಕ ಅಪರಾಧಗಳು ನಡೆಯುವ ಈ ದೇಶದಲ್ಲಿ, ನಿವಾಸಿಗಳು ರಾತ್ರಿ ಕಾವಲಿಗೆ ತಮ್ಮದೇ ಆದ ಭದ್ರತಾ ತಂಡಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಯ ಬಗ್ಗೆ ಆ ತಂಡಗಳು ನಿರ್ದಿಷ್ಟ ಗಮನ ಹರಿಸುತ್ತವೆ’ ಎಂದು ಅವರು ಹೇಳಿದರು.</p>.<p><strong>ಆಸ್ಪತ್ರೆಗಳಿಗೂ ಹಾನಿ; ತಾತ್ಕಾಲಿಕ ಡೇರೆಗಳಲ್ಲಿ ಚಿಕಿತ್ಸೆ: </strong>ಭೂಕಂಪನದ ಹಾನಿಯಿಂದ ಹಲವು ಪ್ರಮುಖ ಆಸ್ಪತ್ರೆಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. ತಾತ್ಕಾಲಿಕ ಡೇರೆಗಳಲ್ಲಿರುವ ವೈದ್ಯರು ಚಿಕ್ಕ ಮಕ್ಕಳಿಂದ ವೃದ್ಧರವರೆಗೆ ಗಾಯಗೊಂಡವರನ್ನು ರಕ್ಷಿಸಲು ಅವಿರತ ಶ್ರಮಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>