ದೇವಸ್ಥಾನ 100 ವರ್ಷ ಹಳೆಯದಾಗಿದ್ದು, ಮಹಾರಾಜ ಪರಮಹಂಸರ ಸಮಾಧಿಯೂ ಇಲ್ಲಿದೆ. ಕಳೆದ ವರ್ಷ ಜಮಿಯತ್ ಉಲೆಮಾ ಇ–ಇಸ್ಲಾಂ ಪಕ್ಷದ ಬೆಂಬಲಿಗರು ಈ ದೇವಸ್ಥಾನವನ್ನು ಧ್ವಂಸಗೊಳಿಸಿ, ಬೆಂಕಿ ಹಚ್ಚಿದ್ದರು. ಈ ಕೃತ್ಯಕ್ಕೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿತ್ತು. ಪ್ರಾಂತೀಯ ಸರ್ಕಾರವು ಈ ದೇವಸ್ಥಾನವನ್ನು ₹ 3.3 ಕೋಟಿ ವೆಚ್ಚದಲ್ಲಿ ನವೀಕರಿಸಿದೆ.