ಕ್ಲಾಮತ್ ನದಿ ಪಾತ್ರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಈ ಹಿಂದೆ ನಡೆದ ಹಲವು ಕಾನೂನಾತ್ಮಕ ಪ್ರಯತ್ನಗಳು ವಿಫಲವಾದವು. ಜತೆಗೆ ನದಿ ಪಾತ್ರದಲ್ಲಿದ್ದ ಬುಡಕಟ್ಟು ಸಮುದಾಯದವರು, ಮೀನುಗಾರರ ಗುಂಪು, ರೈತರು ಮತ್ತು ಪರಿಸರವಾದಿಗಳಲ್ಲಿ ಅಪನಂಬಿಕೆ ಉಂಟಾಗುವಂತೆ ಮಾಡಿತು. ಅಣೆಕಟ್ಟು ತೆರವು ವಿರೋಧಿಗಳು, ‘ಜಲಾಶಯ ತೆರವಿನಿಂದ ತಮ್ಮ ಆಸ್ತಿ ಮೌಲ್ಯಗಳು ಮತ್ತು ಕಾಳ್ಗಿಚ್ಚುಗಳ ವಿರುದ್ಧ ಹೋರಾಡಲು ನೀರಿನ ಮೂಲವನ್ನು ಕಳೆದುಕೊಳ್ಳುವ ಬಗ್ಗೆ ಚಿಂತೆ ಮಾಡಿದ್ದರು.