<p><strong>ಕೊಲಂಬೊ: </strong>ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾಕ್ಕೆ ಭಾರತ ಸೋಮವಾರ ಸುಮಾರು 40,000 ಮೆಟ್ರಿಕ್ ಟನ್ ಪೆಟ್ರೋಲ್ ರವಾನಿಸಿದೆ.</p>.<p>ಈ ಬಗ್ಗೆ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೋಮವಾರ ಟ್ವೀಟ್ ಮಾಡಿದೆ.</p>.<p>‘ಭಾರತದ ನೆರವಿನ ಅಡಿಯಲ್ಲಿ ಸುಮಾರು 40,000 ಮೆಟ್ರಿಕ್ ಪೆಟ್ರೋಲ್ ಇಂದು ಕೊಲಂಬೊ ತಲುಪಿದೆ’ ಎಂದು ಹೇಳಿದೆ.</p>.<p>ಸಾಲದ ಹೊರೆಯಿಂದ ಬಳಲುತ್ತಿರುವ ನೆರೆ ರಾಷ್ಟ್ರದ, ತೀವ್ರ ಇಂಧನ ಕೊರತೆಯನ್ನು ನೀಗಿಸಲು ಭಾರತ ಮುಂದಾಗಿದೆ. ಈ ಹಿಂದೆ ಭಾರತವು 40,000 ಮೆಟ್ರಿಕ್ ಟನ್ ಡೀಸೆಲ್ ಅನ್ನು ರವಾನಿಸಿತ್ತು. ಭಾರತದ ನೆರವನ್ನು ಶ್ರೀಲಂಕಾದ ಹೊಸ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕೊಂಡಾಡಿದ್ದರು.</p>.<p>ಇತ್ತೀಚೆಗೆ ಶ್ರೀಲಂಕಾದ ಪೆಟ್ರೋಲ್ ಪಂಪ್ಗಳ ಎದುರು ‘ ನೋ ಪೆಟ್ರೋಲ್’ ಫಲಕಗಳು ಕಾಣಿಸಿಕೊಂಡಿದ್ದವು. ದೇಶದಲ್ಲಿ ಇಂಧನ ದಾಸ್ತಾನು ಇಲ್ಲದಿರುವುದನ್ನು ಸ್ವತಃ ಪ್ರಧಾನಿ ವಿಕ್ರಮಸಿಂಘೆ ಅವರೇ ಒಪ್ಪಿಕೊಂಡಿದ್ದರು.</p>.<p>ಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ನಷ್ಟವಾಗಿರುವುದರಿಂದ ಆಮದು ಪದಾರ್ಥಗಳಿಗೆ ಪಾವತಿ ಕಷ್ಟವಾಗಿದೆ. ಅದರ ಕರೆನ್ಸಿ ಅಪಮೌಲ್ಯವು ತೀವ್ರ ಹಣದುಬ್ಬರಕ್ಕೂ ಕಾರಣವಾಗಿದೆ. ಹೀಗಾಗಿ, ದೇಶದಲ್ಲಿ ಆರ್ಥಿಕ, ರಾಜಕೀಯ ಪ್ರಕ್ಷುಬ್ಧತೆ ಆವರಿಸಿದೆ. ಮಹಿಂದ ರಾಜಪಕ್ಸೆ ಸರ್ಕಾರದ ಪತನವೂ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಲಂಬೊ: </strong>ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಶ್ರೀಲಂಕಾಕ್ಕೆ ಭಾರತ ಸೋಮವಾರ ಸುಮಾರು 40,000 ಮೆಟ್ರಿಕ್ ಟನ್ ಪೆಟ್ರೋಲ್ ರವಾನಿಸಿದೆ.</p>.<p>ಈ ಬಗ್ಗೆ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೋಮವಾರ ಟ್ವೀಟ್ ಮಾಡಿದೆ.</p>.<p>‘ಭಾರತದ ನೆರವಿನ ಅಡಿಯಲ್ಲಿ ಸುಮಾರು 40,000 ಮೆಟ್ರಿಕ್ ಪೆಟ್ರೋಲ್ ಇಂದು ಕೊಲಂಬೊ ತಲುಪಿದೆ’ ಎಂದು ಹೇಳಿದೆ.</p>.<p>ಸಾಲದ ಹೊರೆಯಿಂದ ಬಳಲುತ್ತಿರುವ ನೆರೆ ರಾಷ್ಟ್ರದ, ತೀವ್ರ ಇಂಧನ ಕೊರತೆಯನ್ನು ನೀಗಿಸಲು ಭಾರತ ಮುಂದಾಗಿದೆ. ಈ ಹಿಂದೆ ಭಾರತವು 40,000 ಮೆಟ್ರಿಕ್ ಟನ್ ಡೀಸೆಲ್ ಅನ್ನು ರವಾನಿಸಿತ್ತು. ಭಾರತದ ನೆರವನ್ನು ಶ್ರೀಲಂಕಾದ ಹೊಸ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಕೊಂಡಾಡಿದ್ದರು.</p>.<p>ಇತ್ತೀಚೆಗೆ ಶ್ರೀಲಂಕಾದ ಪೆಟ್ರೋಲ್ ಪಂಪ್ಗಳ ಎದುರು ‘ ನೋ ಪೆಟ್ರೋಲ್’ ಫಲಕಗಳು ಕಾಣಿಸಿಕೊಂಡಿದ್ದವು. ದೇಶದಲ್ಲಿ ಇಂಧನ ದಾಸ್ತಾನು ಇಲ್ಲದಿರುವುದನ್ನು ಸ್ವತಃ ಪ್ರಧಾನಿ ವಿಕ್ರಮಸಿಂಘೆ ಅವರೇ ಒಪ್ಪಿಕೊಂಡಿದ್ದರು.</p>.<p>ಶ್ರೀಲಂಕಾದ ವಿದೇಶಿ ವಿನಿಮಯ ಮೀಸಲು ನಷ್ಟವಾಗಿರುವುದರಿಂದ ಆಮದು ಪದಾರ್ಥಗಳಿಗೆ ಪಾವತಿ ಕಷ್ಟವಾಗಿದೆ. ಅದರ ಕರೆನ್ಸಿ ಅಪಮೌಲ್ಯವು ತೀವ್ರ ಹಣದುಬ್ಬರಕ್ಕೂ ಕಾರಣವಾಗಿದೆ. ಹೀಗಾಗಿ, ದೇಶದಲ್ಲಿ ಆರ್ಥಿಕ, ರಾಜಕೀಯ ಪ್ರಕ್ಷುಬ್ಧತೆ ಆವರಿಸಿದೆ. ಮಹಿಂದ ರಾಜಪಕ್ಸೆ ಸರ್ಕಾರದ ಪತನವೂ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>