<p><strong>ಬ್ಯಾಂಕಾಕ್:</strong> ಮ್ಯಾನ್ಮಾರ್ನ ಸೇನಾ ಆಡಳಿತವು ಉಚ್ಛಾಟಿತ ಶಾಸಕರು ಮತ್ತು ರಾಜಕೀಯ ನಾಯಕರನ್ನು ‘ಭಯೋತ್ಪಾದಕರು’ ಎಂದು ಕರೆದಿದೆ.</p>.<p>‘ದೇಶದ ಭದ್ರತಾ ಪಡೆಯು ಉಗ್ರರ ಗುಂಪುಗಳನ್ನು ಎದುರಿಸಲು ಸ್ಥಾಪಿಸಲಾಗಿರುವ ರಕ್ಷಣಾ ಪಡೆ’ ಎಂದು ಮ್ಯಾನ್ಮಾರ್ನ ಸೇನೆಯು ಹೇಳಿದೆ.</p>.<p>ಈ ಹಿಂದೆ ಉಚ್ಛಾಟಿತ ನಾಯಕರನ್ನು ದೇಶದ್ರೋಹಿಗಳೆಂದು ಸೇನೆಯು ಆರೋಪಿಸಿತ್ತು. ಇದೀಗ ಸೇನೆಯು ಅವರನ್ನು ‘ಭಯೋತ್ಪಾದಕರು’ ಎಂದು ಕರೆದಿದೆ. ಈ ಬಗ್ಗೆ ಮ್ಯಾನ್ಮಾರ್ನ ಸೇನೆಯು ಸರ್ಕಾರಿ ಟಿವಿಯಲ್ಲಿ ಶನಿವಾರ ಘೋಷಣೆ ಮಾಡಿದ್ದು, ‘ಮಿಲಿಟರಿ ವಿರುದ್ಧದ ನಾಗರಿಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಅವರನ್ನು ಭಯೋತ್ಪಾದಕರು’ ಎಂದು ಕರೆಯಲಾಗುತ್ತಿದೆ ಎಂದು ಹೇಳಿದೆ.</p>.<p>ಫೆಬ್ರವರಿ 1ರಿಂದ ಮ್ಯಾನ್ಮಾರ್ಲ್ಲಿ ಮಿಲಿಟರಿ ಆಡಳಿತ ಆರಂಭವಾಗಿದೆ.ನಾಯಕಿ ಆಂಗ್ ಸಾನ್ ಸೂಕಿ ನೇತೃತ್ವದ ಪ್ರಜಾಪ್ರತಿನಿಧಿ ಸರ್ಕಾರವನ್ನು ಬುಡಮೇಲುಗೊಳಿಸಿ, ಸೇನೆ ತನ್ನ ಆಡಳಿತವನ್ನು ಸ್ಥಾಪಿಸಿತು. ಇದನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿದ್ದು, 700 ಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ಯಾಂಕಾಕ್:</strong> ಮ್ಯಾನ್ಮಾರ್ನ ಸೇನಾ ಆಡಳಿತವು ಉಚ್ಛಾಟಿತ ಶಾಸಕರು ಮತ್ತು ರಾಜಕೀಯ ನಾಯಕರನ್ನು ‘ಭಯೋತ್ಪಾದಕರು’ ಎಂದು ಕರೆದಿದೆ.</p>.<p>‘ದೇಶದ ಭದ್ರತಾ ಪಡೆಯು ಉಗ್ರರ ಗುಂಪುಗಳನ್ನು ಎದುರಿಸಲು ಸ್ಥಾಪಿಸಲಾಗಿರುವ ರಕ್ಷಣಾ ಪಡೆ’ ಎಂದು ಮ್ಯಾನ್ಮಾರ್ನ ಸೇನೆಯು ಹೇಳಿದೆ.</p>.<p>ಈ ಹಿಂದೆ ಉಚ್ಛಾಟಿತ ನಾಯಕರನ್ನು ದೇಶದ್ರೋಹಿಗಳೆಂದು ಸೇನೆಯು ಆರೋಪಿಸಿತ್ತು. ಇದೀಗ ಸೇನೆಯು ಅವರನ್ನು ‘ಭಯೋತ್ಪಾದಕರು’ ಎಂದು ಕರೆದಿದೆ. ಈ ಬಗ್ಗೆ ಮ್ಯಾನ್ಮಾರ್ನ ಸೇನೆಯು ಸರ್ಕಾರಿ ಟಿವಿಯಲ್ಲಿ ಶನಿವಾರ ಘೋಷಣೆ ಮಾಡಿದ್ದು, ‘ಮಿಲಿಟರಿ ವಿರುದ್ಧದ ನಾಗರಿಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಅವರನ್ನು ಭಯೋತ್ಪಾದಕರು’ ಎಂದು ಕರೆಯಲಾಗುತ್ತಿದೆ ಎಂದು ಹೇಳಿದೆ.</p>.<p>ಫೆಬ್ರವರಿ 1ರಿಂದ ಮ್ಯಾನ್ಮಾರ್ಲ್ಲಿ ಮಿಲಿಟರಿ ಆಡಳಿತ ಆರಂಭವಾಗಿದೆ.ನಾಯಕಿ ಆಂಗ್ ಸಾನ್ ಸೂಕಿ ನೇತೃತ್ವದ ಪ್ರಜಾಪ್ರತಿನಿಧಿ ಸರ್ಕಾರವನ್ನು ಬುಡಮೇಲುಗೊಳಿಸಿ, ಸೇನೆ ತನ್ನ ಆಡಳಿತವನ್ನು ಸ್ಥಾಪಿಸಿತು. ಇದನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿದ್ದು, 700 ಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>