<p><strong>ಕಠ್ಮಂಡು</strong>: ನೇಪಾಳದ ಪ್ರಮುಖ ವಿರೋಧ ಪಕ್ಷವಾದ ನೇಪಾಳಿ ಕಾಂಗ್ರೆಸ್ ಪಕ್ಷ, ಸರ್ಕಾರ ರಚನೆ ಸಂಬಂಧ ಹಕ್ಕು ಮಂಡಿಸಲು ನಿರ್ಧರಿಸಿದೆ.</p>.<p>ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಮಂಡಿಸಿದ್ದ ವಿಶ್ವಾಸ ಮತಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ, ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸುವಂತೆ ನೇಪಾಳ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ.</p>.<p>ಸರ್ಕಾರ ರಚನೆಗೆ ಹಕ್ಕು ಮಂಡಿಸಲು ನೀಡಿದ್ದ ಗಡುವು ಗುರುವಾರ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆ ತನಗೆ ನೀಡಬೇಕು ಎಂಬ ಬೇಡಿಕೆಯೊಂದಿಗೆ ನೇಪಾಳಿ ಕಾಂಗ್ರೆಸ್ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಲು ಕಸರತ್ತು ನಡೆಸಿದೆ.</p>.<p>ಪಕ್ಷದ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ನೇತೃತ್ವದಲ್ಲಿ ನೇಪಾಳಿ ಕಾಂಗ್ರೆಸ್ ಮುಖಂಡರು ಮಂಗಳವಾರ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ನಂತರ ಇತರ ಪಕ್ಷಗಳ ಮುಖಂಡ ಸಭೆ ನಡೆಸಿ, ಸರ್ಕಾರ ರಚನೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.</p>.<p><strong>ಸಿಪಿಎನ್ (ಮಾವೋವಾದಿ ಕೇಂದ್ರ):</strong> ಮುಖ್ಯಸ್ಥ ಪುಷ್ಪಕಮಲ್ ದಹಾಲ್ ‘ಪ್ರಚಂಡ’, ಜನತಾ ಸಮಾಜವಾದಿ ಪಾರ್ಟಿ (ಜೆಎಸ್ಪಿ–ಎನ್)ಉಪಾಧ್ಯಕ್ಷ ಉಪೇಂದ್ರ ಯಾದವ್ ಈ ಸಭೆಯಲ್ಲಿ ಉಪಸ್ಥಿತರಿದ್ದರು.</p>.<p>ಶೇರ್ ಬಹದ್ದೂರ್ ದೇವುಬಾ ಅವರು ಪ್ರಧಾನಿಯಾಗುವುದಕ್ಕೆ ಪ್ರಚಂಡ ನೇತೃತ್ವದ ಪಾರ್ಟಿ ಸಮ್ಮತಿಸಿದೆ. ಆದರೆ, ಸಂಸತ್ನಲ್ಲಿ 32 ಜನ ಸಂಸದರನ್ನು ಹೊಂದಿರುವ ಜನತಾ ಸಮಾಜವಾದಿ ಪಾರ್ಟಿಯಲ್ಲಿ ಈ ವಿಷಯ ಕುರಿತು ಒಡಕು ಮೂಡಿದೆ.</p>.<p>271 ಸದಸ್ಯ ಬಲದ ನೇಪಾಳದ ಸಂಸತ್ನಲ್ಲಿ ನೇಪಾಳಿ ಕಾಂಗ್ರೆಸ್ 61 ಸ್ಥಾನ ಹಾಗೂ ಸಿಪಿಎನ್(ಮಾವೋವಾದಿ ಕೇಂದ್ರ) 49 ಸ್ಥಾನಗಳನ್ನು ಹೊಂದಿವೆ. ಹೀಗಾಗಿಜೆಎಸ್ಪಿ–ಎನ್ ಬೆಂಬಲ ಇಲ್ಲದೆಯೇ ನೇಪಾಳಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಾಗುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು</strong>: ನೇಪಾಳದ ಪ್ರಮುಖ ವಿರೋಧ ಪಕ್ಷವಾದ ನೇಪಾಳಿ ಕಾಂಗ್ರೆಸ್ ಪಕ್ಷ, ಸರ್ಕಾರ ರಚನೆ ಸಂಬಂಧ ಹಕ್ಕು ಮಂಡಿಸಲು ನಿರ್ಧರಿಸಿದೆ.</p>.<p>ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು ಮಂಡಿಸಿದ್ದ ವಿಶ್ವಾಸ ಮತಕ್ಕೆ ಸೋಲುಂಟಾದ ಹಿನ್ನೆಲೆಯಲ್ಲಿ, ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸುವಂತೆ ನೇಪಾಳ ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಅವರು ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ.</p>.<p>ಸರ್ಕಾರ ರಚನೆಗೆ ಹಕ್ಕು ಮಂಡಿಸಲು ನೀಡಿದ್ದ ಗಡುವು ಗುರುವಾರ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆ ತನಗೆ ನೀಡಬೇಕು ಎಂಬ ಬೇಡಿಕೆಯೊಂದಿಗೆ ನೇಪಾಳಿ ಕಾಂಗ್ರೆಸ್ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಸಾಧಿಸಲು ಕಸರತ್ತು ನಡೆಸಿದೆ.</p>.<p>ಪಕ್ಷದ ಅಧ್ಯಕ್ಷ ಶೇರ್ ಬಹದ್ದೂರ್ ದೇವುಬಾ ನೇತೃತ್ವದಲ್ಲಿ ನೇಪಾಳಿ ಕಾಂಗ್ರೆಸ್ ಮುಖಂಡರು ಮಂಗಳವಾರ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ನಂತರ ಇತರ ಪಕ್ಷಗಳ ಮುಖಂಡ ಸಭೆ ನಡೆಸಿ, ಸರ್ಕಾರ ರಚನೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.</p>.<p><strong>ಸಿಪಿಎನ್ (ಮಾವೋವಾದಿ ಕೇಂದ್ರ):</strong> ಮುಖ್ಯಸ್ಥ ಪುಷ್ಪಕಮಲ್ ದಹಾಲ್ ‘ಪ್ರಚಂಡ’, ಜನತಾ ಸಮಾಜವಾದಿ ಪಾರ್ಟಿ (ಜೆಎಸ್ಪಿ–ಎನ್)ಉಪಾಧ್ಯಕ್ಷ ಉಪೇಂದ್ರ ಯಾದವ್ ಈ ಸಭೆಯಲ್ಲಿ ಉಪಸ್ಥಿತರಿದ್ದರು.</p>.<p>ಶೇರ್ ಬಹದ್ದೂರ್ ದೇವುಬಾ ಅವರು ಪ್ರಧಾನಿಯಾಗುವುದಕ್ಕೆ ಪ್ರಚಂಡ ನೇತೃತ್ವದ ಪಾರ್ಟಿ ಸಮ್ಮತಿಸಿದೆ. ಆದರೆ, ಸಂಸತ್ನಲ್ಲಿ 32 ಜನ ಸಂಸದರನ್ನು ಹೊಂದಿರುವ ಜನತಾ ಸಮಾಜವಾದಿ ಪಾರ್ಟಿಯಲ್ಲಿ ಈ ವಿಷಯ ಕುರಿತು ಒಡಕು ಮೂಡಿದೆ.</p>.<p>271 ಸದಸ್ಯ ಬಲದ ನೇಪಾಳದ ಸಂಸತ್ನಲ್ಲಿ ನೇಪಾಳಿ ಕಾಂಗ್ರೆಸ್ 61 ಸ್ಥಾನ ಹಾಗೂ ಸಿಪಿಎನ್(ಮಾವೋವಾದಿ ಕೇಂದ್ರ) 49 ಸ್ಥಾನಗಳನ್ನು ಹೊಂದಿವೆ. ಹೀಗಾಗಿಜೆಎಸ್ಪಿ–ಎನ್ ಬೆಂಬಲ ಇಲ್ಲದೆಯೇ ನೇಪಾಳಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಾಗುವುದಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>