ಕಠ್ಮಂಡು (ಪಿಟಿಐ): ನೇಪಾಳದ ಸಂಸತ್ತಿನ ಕೆಳಮನೆ (ಜನಪ್ರತಿನಿಧಿಗಳ ಸಭೆ) ವಿಸರ್ಜಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ 30 ರಿಟ್ ಅರ್ಜಿಗಳ ವಿಚಾರಣೆಗೆಮುಖ್ಯ ನ್ಯಾಯಮೂರ್ತಿ ಚೋಳೇಂದ್ರ ಶುಮ್ಶೇರ್ ರಾಣಾ ಅವರು ಸಾಂವಿಧಾನಿಕ ಪೀಠವನ್ನು ರಚಿಸಿದ್ದು, ಅದಕ್ಕೆ ನಾಲ್ವರು ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡಿದ್ದಾರೆ.