<p><strong>ಕಠ್ಮಂಡು:</strong> ನೇಪಾಳ ಕಮ್ಯುನಿಸ್ಟ್ ಪಕ್ಷ ರಾಷ್ಟ್ರದಾದ್ಯಂತ ಗುರುವಾರ ಕರೆ ನೀಡಿದ್ದ ಮುಷ್ಕರದಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು.</p>.<p>ಪ್ರಧಾನಿ ಕೆ. ಪಿ. ಶರ್ಮಾ ಒಲಿ ನೇತೃತ್ವದ ಉಸ್ತುವಾರಿ ಸರ್ಕಾರ ವಿವಿಧ ಸಾಂವಿಧಾನಿಕ ಸಂಸ್ಥೆಗಳಿಗೆ ಸದಸ್ಯರು ಮತ್ತು ಪದಾಧಿಕಾರಿಗಳನ್ನು ನೇಮಿಸಿರುವುದನ್ನು ವಿರೋಧಿಸಿ ಪುಷ್ಪಕಮಲ್ ದಹಾಲ್ ‘ಪ್ರಚಂಡ’ ನೇತೃತ್ವದ ಬಣ ಈ ಮುಷ್ಕರಕ್ಕೆ ಕರೆ ನೀಡಿತ್ತು.</p>.<p>ಹೊಸ ನೇಮಕಾತಿಗಳನ್ನು ಮಾಡಲು ಉಸ್ತುವಾರಿ ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ. ಹೀಗಾಗಿ, ಈ ನೇಮಕಾತಿಗಳು ಸಾಂವಿಧಾನ ಬಾಹಿರವಾಗಿವೆ ಮತ್ತು ಸರ್ಕಾರದ ಸರ್ವಾಧಿಕಾರಿತನವನ್ನು ಪ್ರದರ್ಶಿಸುತ್ತದೆ ಎಂದು ಪ್ರಚಂಡ ನೇತೃತ್ವದ ಬಣ ಆರೋಪಿಸಿತ್ತು.</p>.<p>ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆ ಮತ್ತು ಕಾರ್ಖಾನೆಗಳು ಮುಚ್ಚಿದ್ದವು. ಸಾರಿಗೆ ಸಂಚಾರ ಸೇವೆಯೂ ಸ್ಥಗಿತಗೊಂಡಿತ್ತು. ಭದ್ರತೆ ಕಲ್ಪಿಸಲು ಸರ್ಕಾರ ಐದು ಸಾವಿರ ಪೊಲೀಸರನ್ನು ಕಠ್ಮಂಡು ನಗರದಲ್ಲಿ ನಿಯೋಜಿಸಿತ್ತು.</p>.<p>‘ಪ್ರಚಂಡ’ ನೇತೃತ್ವದ ಬಣಕ್ಕೆ ಸೇರಿದ ಸುಮಾರು 157 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಕಮ್ಯುನಿಸ್ಟ್ ಪಕ್ಷದ ಕೇಂದ್ರೀಯ ಸಮಿತಿ ಸದಸ್ಯರಾದ ಅಷ್ಟ ಲಕ್ಷ್ಮಿ ಶಕ್ಯಾ, ಹಿಮಲ್ ಶರ್ಮಾ ಮತ್ತು ಅಮೃತಾ ಥಾ ಬಂಧನಕ್ಕೆ ಒಳಗಾದವರಲ್ಲಿ ಪ್ರಮುಖರಾಗಿದ್ದಾರೆ. ಪ್ರತಿಭಟನಾಕಾರರು ಮೂರು ವಾಹನಗಳಿಗೆ ಹಾನಿ ಮಾಡಿದ್ದಾರೆ.</p>.<p>ಡಿಸೆಂಬರ್ 20ರಂದು ಒಲಿ ಅವರು ದಿಢೀರನೆ ಸಂಸತ್ ವಿಸರ್ಜಿಸಿದ ಬಳಿಕ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಒಲಿ ಅವರ ನಿರ್ಧಾರಕ್ಕೆ ನೇಪಾಳ ಕಮ್ಯುನಿಸ್ಟ್ ಪಕ್ಷದ ಪ್ರಚಂಡ ನೇತೃತ್ವದ ಬಣ ವಿರೋಧ ವ್ಯಕ್ತಪಡಿಸಿತ್ತು.</p>.<p>ಆದರೆ, ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಚಂಡ ನೇತೃತ್ವದ ಬಣ ಯೋಜನೆ ರೂಪಿಸಿತ್ತು. ಹೀಗಾಗಿಯೇ ಸಂಸತ್ ವಿಸರ್ಜಿಸಲಾಯಿತು ಎಂದು ಒಲಿ ಸಮರ್ಥಿಸಿಕೊಂಡಿದ್ದರು.</p>.<p>2018ರ ಮೇ ತಿಂಗಳಲ್ಲಿ ಒಲಿ ನೇತೃತ್ವದ ಸಿಪಿಎನ್–ಯುಎಂಎಲ್ ಮತ್ತು ಪ್ರಚಂಡ ನೇತೃತ್ವದ ಎನ್ಸಿಪಿ (ಮಾವೋವಾದಿ ಕೇಂದ್ರ) ವಿಲೀನಗೊಂಡು ನೇಪಾಳ ಕಮ್ಯುನಿಸ್ಟ್ ಪಕ್ಷವನ್ನು ರಚಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು:</strong> ನೇಪಾಳ ಕಮ್ಯುನಿಸ್ಟ್ ಪಕ್ಷ ರಾಷ್ಟ್ರದಾದ್ಯಂತ ಗುರುವಾರ ಕರೆ ನೀಡಿದ್ದ ಮುಷ್ಕರದಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು.</p>.<p>ಪ್ರಧಾನಿ ಕೆ. ಪಿ. ಶರ್ಮಾ ಒಲಿ ನೇತೃತ್ವದ ಉಸ್ತುವಾರಿ ಸರ್ಕಾರ ವಿವಿಧ ಸಾಂವಿಧಾನಿಕ ಸಂಸ್ಥೆಗಳಿಗೆ ಸದಸ್ಯರು ಮತ್ತು ಪದಾಧಿಕಾರಿಗಳನ್ನು ನೇಮಿಸಿರುವುದನ್ನು ವಿರೋಧಿಸಿ ಪುಷ್ಪಕಮಲ್ ದಹಾಲ್ ‘ಪ್ರಚಂಡ’ ನೇತೃತ್ವದ ಬಣ ಈ ಮುಷ್ಕರಕ್ಕೆ ಕರೆ ನೀಡಿತ್ತು.</p>.<p>ಹೊಸ ನೇಮಕಾತಿಗಳನ್ನು ಮಾಡಲು ಉಸ್ತುವಾರಿ ಸರ್ಕಾರಕ್ಕೆ ಯಾವುದೇ ಹಕ್ಕು ಇಲ್ಲ. ಹೀಗಾಗಿ, ಈ ನೇಮಕಾತಿಗಳು ಸಾಂವಿಧಾನ ಬಾಹಿರವಾಗಿವೆ ಮತ್ತು ಸರ್ಕಾರದ ಸರ್ವಾಧಿಕಾರಿತನವನ್ನು ಪ್ರದರ್ಶಿಸುತ್ತದೆ ಎಂದು ಪ್ರಚಂಡ ನೇತೃತ್ವದ ಬಣ ಆರೋಪಿಸಿತ್ತು.</p>.<p>ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆ ಮತ್ತು ಕಾರ್ಖಾನೆಗಳು ಮುಚ್ಚಿದ್ದವು. ಸಾರಿಗೆ ಸಂಚಾರ ಸೇವೆಯೂ ಸ್ಥಗಿತಗೊಂಡಿತ್ತು. ಭದ್ರತೆ ಕಲ್ಪಿಸಲು ಸರ್ಕಾರ ಐದು ಸಾವಿರ ಪೊಲೀಸರನ್ನು ಕಠ್ಮಂಡು ನಗರದಲ್ಲಿ ನಿಯೋಜಿಸಿತ್ತು.</p>.<p>‘ಪ್ರಚಂಡ’ ನೇತೃತ್ವದ ಬಣಕ್ಕೆ ಸೇರಿದ ಸುಮಾರು 157 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಕಮ್ಯುನಿಸ್ಟ್ ಪಕ್ಷದ ಕೇಂದ್ರೀಯ ಸಮಿತಿ ಸದಸ್ಯರಾದ ಅಷ್ಟ ಲಕ್ಷ್ಮಿ ಶಕ್ಯಾ, ಹಿಮಲ್ ಶರ್ಮಾ ಮತ್ತು ಅಮೃತಾ ಥಾ ಬಂಧನಕ್ಕೆ ಒಳಗಾದವರಲ್ಲಿ ಪ್ರಮುಖರಾಗಿದ್ದಾರೆ. ಪ್ರತಿಭಟನಾಕಾರರು ಮೂರು ವಾಹನಗಳಿಗೆ ಹಾನಿ ಮಾಡಿದ್ದಾರೆ.</p>.<p>ಡಿಸೆಂಬರ್ 20ರಂದು ಒಲಿ ಅವರು ದಿಢೀರನೆ ಸಂಸತ್ ವಿಸರ್ಜಿಸಿದ ಬಳಿಕ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಒಲಿ ಅವರ ನಿರ್ಧಾರಕ್ಕೆ ನೇಪಾಳ ಕಮ್ಯುನಿಸ್ಟ್ ಪಕ್ಷದ ಪ್ರಚಂಡ ನೇತೃತ್ವದ ಬಣ ವಿರೋಧ ವ್ಯಕ್ತಪಡಿಸಿತ್ತು.</p>.<p>ಆದರೆ, ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಪ್ರಚಂಡ ನೇತೃತ್ವದ ಬಣ ಯೋಜನೆ ರೂಪಿಸಿತ್ತು. ಹೀಗಾಗಿಯೇ ಸಂಸತ್ ವಿಸರ್ಜಿಸಲಾಯಿತು ಎಂದು ಒಲಿ ಸಮರ್ಥಿಸಿಕೊಂಡಿದ್ದರು.</p>.<p>2018ರ ಮೇ ತಿಂಗಳಲ್ಲಿ ಒಲಿ ನೇತೃತ್ವದ ಸಿಪಿಎನ್–ಯುಎಂಎಲ್ ಮತ್ತು ಪ್ರಚಂಡ ನೇತೃತ್ವದ ಎನ್ಸಿಪಿ (ಮಾವೋವಾದಿ ಕೇಂದ್ರ) ವಿಲೀನಗೊಂಡು ನೇಪಾಳ ಕಮ್ಯುನಿಸ್ಟ್ ಪಕ್ಷವನ್ನು ರಚಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>