ಬಾಂಬ್ ಸ್ಫೋಟದಲ್ಲಿ ಭಾರತೀಯ ಗುಪ್ತಚರ ಇಲಾಖೆಯ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪಗಳು ’ಸುಳ್ಳು’ ಎಂದು ಭಾರತ ಶುಕ್ರವಾರ ಹೇಳಿತ್ತು. ಅಲ್ಲದೆ, ಇದು ಪ್ರಾದೇಶಿಕ ಅಸ್ಥಿರತೆಯ ಕೇಂದ್ರಬಿಂದುವಾಗಿರುವ, ನಿಷೇಧಿತ ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ಜಾಗ ಒದಗಿಸಿಕೊಟ್ಟಿರುವ ಪಾಕಿಸ್ತಾನದಿಂದ ಜಾಗತಿಕ ಗಮನ ಸೆಳೆಯುವ ಕುತಂತ್ರ ಎಂದು ಭಾರತ ಹೇಳಿತ್ತು.