‘ಈ ಕುರಿತು ಉದ್ಯೋಗಿ ರಾಜಾ ಆಸೀಫ್ ಇಕ್ಬಾಲ್ ಎಂಬುವವರು, ಸಿಎಎ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಹಣದುಬ್ಬರದಿಂದಾಗಿ ಬಡವರದು ಮಾತ್ರವಲ್ಲ, ಮಧ್ಯಮ ವರ್ಗದವರ ಬೆನ್ನೂ ಮುರಿದಿದೆ. ತೈಲ ಬೆಲೆ ಏರಿಕೆಯಿಂದಾಗಿ ಸಂಸ್ಥೆಯು ಸಾರಿಗೆ ಸೌಲಭ್ಯವನ್ನು ಸ್ಥಗಿತಗೊಳಿಸಿದೆ. ಹಾಗಾಗಿ, ಕತ್ತೆಯ ಗಾಡಿಯಲ್ಲಿ ಕಚೇರಿಗೆ ಬರಲು ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಈ ಗಾಡಿಯನ್ನು ನಿಲ್ಲಿಸಲು ಅನುಮತಿ ನೀಡಬೇಕೆಂದು ಅವರು ಕೋರಿದ್ದಾರೆ’ ಎಂದು ಪತ್ರಿಕೆ ವರದಿ ಮಾಡಿದೆ.