<p><strong>ಇಸ್ಲಾಮಾಬಾದ್</strong>: ಪಾಕಿಸ್ತಾನದ ರಾಜಧಾನಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಇಮ್ರಾನ್ ಖಾನ್ ಸೇರಿದಂತೆ ಪಿಟಿಐ ಪಕ್ಷದ ಇತರ ನಾಯಕರ ವಿರುದ್ಧವೂ ಇಸ್ಲಾಮಾಬಾದ್ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.</p>.<p>ಪಿಟಿಐನ ಅಸಾದ್ ಉಮರ್, ಇಮ್ರಾನ್ ಇಸ್ಮಾಯಿಲ್, ರಾಜಾ ಖುರ್ರಂ ನವಾಜ್, ಅಲಿ ಅಮೀನ್ ಮತ್ತು ಅಲಿ ನವಾಜ್ ಅವನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.</p>.<p>‘ಗಲಭೆ ಮತ್ತು ಬೆಂಕಿ ಹಚ್ಚಿದ’ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ವರೆಗೆ 150 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 39 ಮಂದಿಯನ್ನು ಬಂಧಿಸಲಾಗಿದೆ.</p>.<p>ಪ್ರಧಾನಿ ಹುದ್ದೆ ತೊರೆದಿರುವ ಇಮ್ರಾನ್ ಖಾನ್ ಅವರು ‘ಆಜಾದಿ ಮೆರವಣಿಗೆ’ಗೆ ಕರೆ ನೀಡಿದ್ದರು. ಆ ವೇಳೆ, ಪಿಟಿಐ ಪಕ್ಷದ ಬೆಂಬಲಿಗರು ಗಲಭೆಗೆ ಇಳಿದಿದ್ದರು. ಇಸ್ಲಾಮಾಬಾದ್ನ ಜಿನ್ನಾ ಅವೆನ್ಯೂನಲ್ಲಿ ಮೆಟ್ರೋ ಬಸ್ ನಿಲ್ದಾಣಗಳಿಗೆ ಬೆಂಕಿ ಹಚ್ಚಿದ್ದರು. ಎಕ್ಸ್ಪ್ರೆಸ್ ಚೌಕ್ನಲ್ಲಿ ಸರ್ಕಾರಿ ವಾಹನಗಳಿಗೆ ಹಾನಿ ಮಾಡಿದ್ದರು. ಜಿಯೋ ನ್ಯೂಸ್ ಮತ್ತು ಜಂಗ್ ಕಚೇರಿಯ ಗಾಜಿನ ಕಿಟಕಿಗಳನ್ನು ಒಡೆದಿದ್ದರು. ಈ ಘಟನೆಗಳನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್</strong>: ಪಾಕಿಸ್ತಾನದ ರಾಜಧಾನಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ.</p>.<p>ಇಮ್ರಾನ್ ಖಾನ್ ಸೇರಿದಂತೆ ಪಿಟಿಐ ಪಕ್ಷದ ಇತರ ನಾಯಕರ ವಿರುದ್ಧವೂ ಇಸ್ಲಾಮಾಬಾದ್ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.</p>.<p>ಪಿಟಿಐನ ಅಸಾದ್ ಉಮರ್, ಇಮ್ರಾನ್ ಇಸ್ಮಾಯಿಲ್, ರಾಜಾ ಖುರ್ರಂ ನವಾಜ್, ಅಲಿ ಅಮೀನ್ ಮತ್ತು ಅಲಿ ನವಾಜ್ ಅವನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ‘ಜಿಯೋ ನ್ಯೂಸ್’ ವರದಿ ಮಾಡಿದೆ.</p>.<p>‘ಗಲಭೆ ಮತ್ತು ಬೆಂಕಿ ಹಚ್ಚಿದ’ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಈ ವರೆಗೆ 150 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, 39 ಮಂದಿಯನ್ನು ಬಂಧಿಸಲಾಗಿದೆ.</p>.<p>ಪ್ರಧಾನಿ ಹುದ್ದೆ ತೊರೆದಿರುವ ಇಮ್ರಾನ್ ಖಾನ್ ಅವರು ‘ಆಜಾದಿ ಮೆರವಣಿಗೆ’ಗೆ ಕರೆ ನೀಡಿದ್ದರು. ಆ ವೇಳೆ, ಪಿಟಿಐ ಪಕ್ಷದ ಬೆಂಬಲಿಗರು ಗಲಭೆಗೆ ಇಳಿದಿದ್ದರು. ಇಸ್ಲಾಮಾಬಾದ್ನ ಜಿನ್ನಾ ಅವೆನ್ಯೂನಲ್ಲಿ ಮೆಟ್ರೋ ಬಸ್ ನಿಲ್ದಾಣಗಳಿಗೆ ಬೆಂಕಿ ಹಚ್ಚಿದ್ದರು. ಎಕ್ಸ್ಪ್ರೆಸ್ ಚೌಕ್ನಲ್ಲಿ ಸರ್ಕಾರಿ ವಾಹನಗಳಿಗೆ ಹಾನಿ ಮಾಡಿದ್ದರು. ಜಿಯೋ ನ್ಯೂಸ್ ಮತ್ತು ಜಂಗ್ ಕಚೇರಿಯ ಗಾಜಿನ ಕಿಟಕಿಗಳನ್ನು ಒಡೆದಿದ್ದರು. ಈ ಘಟನೆಗಳನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>