<p><strong>ಇಸ್ಲಾಮಾಬಾದ್ (ಎಎಫ್ಪಿ): </strong>ಪಾಕಿಸ್ತಾನದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆ ಸಹಜಸ್ಥಿತಿಗೆ ಮರಳಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ಸತತ ಎರಡನೇ ದಿನವಾದ ಮಂಗಳವಾರವೂ ಬಹುತೇಕ ಕಡೆ ವಿದ್ಯುತ್ ವ್ಯತ್ಯಯ ಸಮಸ್ಯೆ ಕಾಡಿತು.</p>.<p>ಸೋಮವಾರ ರಾಷ್ಟ್ರೀಯ ವಿದ್ಯುತ್ ವಿತರಣಾ ಜಾಲದಲ್ಲಿ ದೋಷ ಕಂಡುಬಂದಿದ್ದು, ರಾತ್ರಿ ದೇಶ ದಾದ್ಯಂತ ವಿದ್ಯುತ್ ಕಡಿತ ಸಮಸ್ಯೆ ಕಾಡಿತ್ತು. ಎರಡನೇ ದಿನವೂ ಪರಿಸ್ಥಿತಿ ಹೀಗೇ ಮುಂದುವರಿಯಿತು.</p>.<p>ಬೆಳಿಗ್ಗೆಯಷ್ಟೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಇಂಧನ ಸಚಿವ ಖುರ್ರಂ ದಸ್ತಗೀರ್ ತಿಳಿಸಿದ್ದರು. ‘ಇನ್ನೊಂದೆಡೆ, ದೇಶದ ಜನರಿಗೆ ಆದ ಅನನುಕೂಲಕ್ಕಾಗಿ ಕ್ಷಮೆ ಕೋರುತ್ತೇನೆ’ ಎಂದು ಪ್ರಧಾನಿ ಶಹಬಾಜ್ ಷರೀಫ್ ತಿಳಿಸಿದ್ದರು.</p>.<p>‘ದೇಶದ 1,112 ಕೇಂದ್ರ ಗಳಲ್ಲಿ ವಿತರಣಾ ವ್ಯವಸ್ಥೆ ಸರಿಪಡಿಸಲಾಗಿದೆ ಪರಿಸ್ಥಿತಿ ಸುಧಾರಿಸಲು ಹೆಚ್ಚಿನ ಹೂಡಿಕೆ ಅಗತ್ಯ. ದಶಕಗಳಿಂದ ವಿದ್ಯುತ್ ವಿತರಣಾ ಜಾಲವನ್ನು ಕಡೆಗಣಿಸಲಾಗಿದೆ’ ಎಂದು ಇಂಧನ ಸಚಿವರು ತಿಳಿಸಿದ್ದರು. </p>.<p> ವಿದ್ಯುತ್ ಕಡಿತದಿಂದ ಸೋಮವಾರ ರಾತ್ರಿ ಕೋಟ್ಯಂತರ ಜನರು ಕಗ್ಗತ್ತಲಲ್ಲಿ ಕಳೆದಿದ್ದರು. ಔದ್ಯಮಿಕ ಕ್ಷೇತ್ರಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ನಷ್ಟವಾಗಿತ್ತು.</p>.<p>ವಿದ್ಯುತ್ ವ್ಯತ್ಯಯ ದಿಂದಾದ ಸಮಸ್ಯೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಪ್ರಧಾನಿ, ಸಮಸ್ಯೆಗೆ ಕಾರಣವಾದ ಅಂಶ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ. ಈ ವಿಷಯದಲ್ಲಿ ಹೊಣೆಗಾರಿಕೆ ನಿಗದಿಪಡಿ ಸಲಾಗುವುದು ಎಂದು ತಿಳಿಸಿದರು.</p>.<p>ಬೇಡಿಕೆಗಿಂತಲೂ ಉತ್ಪಾದನೆ ಕಡಿಮೆ ಇರುವುದು ಈ ಸಮಸ್ಯೆಗೆ ಕಾರಣ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್ (ಎಎಫ್ಪಿ): </strong>ಪಾಕಿಸ್ತಾನದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆ ಸಹಜಸ್ಥಿತಿಗೆ ಮರಳಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ಸತತ ಎರಡನೇ ದಿನವಾದ ಮಂಗಳವಾರವೂ ಬಹುತೇಕ ಕಡೆ ವಿದ್ಯುತ್ ವ್ಯತ್ಯಯ ಸಮಸ್ಯೆ ಕಾಡಿತು.</p>.<p>ಸೋಮವಾರ ರಾಷ್ಟ್ರೀಯ ವಿದ್ಯುತ್ ವಿತರಣಾ ಜಾಲದಲ್ಲಿ ದೋಷ ಕಂಡುಬಂದಿದ್ದು, ರಾತ್ರಿ ದೇಶ ದಾದ್ಯಂತ ವಿದ್ಯುತ್ ಕಡಿತ ಸಮಸ್ಯೆ ಕಾಡಿತ್ತು. ಎರಡನೇ ದಿನವೂ ಪರಿಸ್ಥಿತಿ ಹೀಗೇ ಮುಂದುವರಿಯಿತು.</p>.<p>ಬೆಳಿಗ್ಗೆಯಷ್ಟೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಇಂಧನ ಸಚಿವ ಖುರ್ರಂ ದಸ್ತಗೀರ್ ತಿಳಿಸಿದ್ದರು. ‘ಇನ್ನೊಂದೆಡೆ, ದೇಶದ ಜನರಿಗೆ ಆದ ಅನನುಕೂಲಕ್ಕಾಗಿ ಕ್ಷಮೆ ಕೋರುತ್ತೇನೆ’ ಎಂದು ಪ್ರಧಾನಿ ಶಹಬಾಜ್ ಷರೀಫ್ ತಿಳಿಸಿದ್ದರು.</p>.<p>‘ದೇಶದ 1,112 ಕೇಂದ್ರ ಗಳಲ್ಲಿ ವಿತರಣಾ ವ್ಯವಸ್ಥೆ ಸರಿಪಡಿಸಲಾಗಿದೆ ಪರಿಸ್ಥಿತಿ ಸುಧಾರಿಸಲು ಹೆಚ್ಚಿನ ಹೂಡಿಕೆ ಅಗತ್ಯ. ದಶಕಗಳಿಂದ ವಿದ್ಯುತ್ ವಿತರಣಾ ಜಾಲವನ್ನು ಕಡೆಗಣಿಸಲಾಗಿದೆ’ ಎಂದು ಇಂಧನ ಸಚಿವರು ತಿಳಿಸಿದ್ದರು. </p>.<p> ವಿದ್ಯುತ್ ಕಡಿತದಿಂದ ಸೋಮವಾರ ರಾತ್ರಿ ಕೋಟ್ಯಂತರ ಜನರು ಕಗ್ಗತ್ತಲಲ್ಲಿ ಕಳೆದಿದ್ದರು. ಔದ್ಯಮಿಕ ಕ್ಷೇತ್ರಕ್ಕೆ ಲಕ್ಷಾಂತರ ರೂಪಾಯಿ ವಹಿವಾಟು ನಷ್ಟವಾಗಿತ್ತು.</p>.<p>ವಿದ್ಯುತ್ ವ್ಯತ್ಯಯ ದಿಂದಾದ ಸಮಸ್ಯೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಪ್ರಧಾನಿ, ಸಮಸ್ಯೆಗೆ ಕಾರಣವಾದ ಅಂಶ ಕುರಿತಂತೆ ತನಿಖೆಗೆ ಆದೇಶಿಸಲಾಗಿದೆ. ಈ ವಿಷಯದಲ್ಲಿ ಹೊಣೆಗಾರಿಕೆ ನಿಗದಿಪಡಿ ಸಲಾಗುವುದು ಎಂದು ತಿಳಿಸಿದರು.</p>.<p>ಬೇಡಿಕೆಗಿಂತಲೂ ಉತ್ಪಾದನೆ ಕಡಿಮೆ ಇರುವುದು ಈ ಸಮಸ್ಯೆಗೆ ಕಾರಣ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>