<p><strong>ವಿಶ್ವಸಂಸ್ಥೆ:</strong> ‘ಉಕ್ರೇನ್ನ ಪೂರ್ವ ಭಾಗದಲ್ಲಿನ ನಗರಗಳಾದ ಹಾರ್ಕಿವ್ ಹಾಗೂ ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ವಿದೇಶಿ ಪ್ರಜೆಗಳ ತೆರವಿಗೆ ತಾನು ಸಿದ್ಧ’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (ಯುಎನ್ಎಸ್ಸಿ) ರಷ್ಯಾ ತಿಳಿಸಿದೆ.</p>.<p>ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ದೇಶಗಳ ಪ್ರಜೆಗಳ ತೆರವಿಗಾಗಿ ಉಕ್ರೇನ್ ಗಡಿ ಸಮೀಪದ ಆಯ್ದ ಸ್ಥಳಗಳಲ್ಲಿ ಬಸ್ಗಳನ್ನು ನಿಯೋಜಿಸಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ರಷ್ಯಾದ ರಾಯಭಾರಿಯ ಕಾಯಂ ಪ್ರತಿನಿಧಿ ವ್ಯಾಸಿಲಿ ನೆಬೆಂಜಿಯಾ ಅವರು ತಿಳಿಸಿದರು.</p>.<p>ಉಕ್ರೇನ್ನಲ್ಲಿನ ಪರಿಸ್ಥಿತಿ ಹಿನ್ನೆಲೆಯಲ್ಲಿ 15 ದೇಶಗಳ ಸದಸ್ಯ ಬಲದ ಭದ್ರತಾ ಮಂಡಳಿ ತುರ್ತುಸಭೆಯನ್ನು ಆಯೋಜಿಸಿತ್ತು.</p>.<p>‘ವಿದೇಶದ ಪ್ರಜೆಗಳನ್ನು ಯಾವುದೇ ತೊಂದರೆಯಿಲ್ಲದೇ ಉಕ್ರೇನ್ನಿಂದ ಸ್ಥಳಾಂತರಗೊಳಿಸಲು ರಷ್ಯಾ ಮಿಲಿಟರಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದೂ ಅವರು ಹೇಳಿದರು.</p>.<p>‘ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ 130 ಬಸ್ಗಳನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಗಡಿಭಾಗದಲ್ಲಿ ತಾತ್ಕಾಲಿಕ ವಸತಿ, ಆಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಕ್ಲಿನಿಕ್ಗಳು ಹಾಗೂ ಅಗತ್ಯ ಔಷಧಗಳ ದಾಸ್ತಾನು ಸಹ ಇದೆ. ಉಕ್ರೇನ್ನಿಂದ ಕರೆದುಕೊಂಡು ಬಂದವರನ್ನು ಆಯಾ ದೇಶಗಳಿಗೆ ಕಳಿಸುವ ಏರ್ಪಾಡು ಮಾಡಲಾಗಿದೆ’ ಎಂದು ಅವರು ಸಭೆಗೆ ತಿಳಿಸಿದರು.</p>.<p>‘ಉಕ್ರೇನ್ ಪ್ರಜೆಗಳು ಹಾರ್ಕಿವ್ ಹಾಗೂ ಸುಮಿ ನಗರಗಳಲ್ಲಿ 3,700ಕ್ಕೂ ಹೆಚ್ಚು ಭಾರತೀಯರನ್ನು ಒತ್ತೆ ಇರಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ ಅವರು, ‘ಜನರು ನಗರಗಳನ್ನು ತೊರೆಯಲು ಉಗ್ರಗಾಮಿಗಳು ಬಿಡುತ್ತಿಲ್ಲ. ಇದು ಉಕ್ರೇನ್ ಪ್ರಜೆಗಳು ಮಾತ್ರವಲ್ಲ ವಿದೇಶಿಯರ ಮೇಲೂ ಪರಿಣಾಮ ಬೀರುತ್ತದೆ ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ:</strong> ‘ಉಕ್ರೇನ್ನ ಪೂರ್ವ ಭಾಗದಲ್ಲಿನ ನಗರಗಳಾದ ಹಾರ್ಕಿವ್ ಹಾಗೂ ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ವಿದೇಶಿ ಪ್ರಜೆಗಳ ತೆರವಿಗೆ ತಾನು ಸಿದ್ಧ’ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (ಯುಎನ್ಎಸ್ಸಿ) ರಷ್ಯಾ ತಿಳಿಸಿದೆ.</p>.<p>ಭಾರತೀಯ ವಿದ್ಯಾರ್ಥಿಗಳು ಹಾಗೂ ಇತರ ದೇಶಗಳ ಪ್ರಜೆಗಳ ತೆರವಿಗಾಗಿ ಉಕ್ರೇನ್ ಗಡಿ ಸಮೀಪದ ಆಯ್ದ ಸ್ಥಳಗಳಲ್ಲಿ ಬಸ್ಗಳನ್ನು ನಿಯೋಜಿಸಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ರಷ್ಯಾದ ರಾಯಭಾರಿಯ ಕಾಯಂ ಪ್ರತಿನಿಧಿ ವ್ಯಾಸಿಲಿ ನೆಬೆಂಜಿಯಾ ಅವರು ತಿಳಿಸಿದರು.</p>.<p>ಉಕ್ರೇನ್ನಲ್ಲಿನ ಪರಿಸ್ಥಿತಿ ಹಿನ್ನೆಲೆಯಲ್ಲಿ 15 ದೇಶಗಳ ಸದಸ್ಯ ಬಲದ ಭದ್ರತಾ ಮಂಡಳಿ ತುರ್ತುಸಭೆಯನ್ನು ಆಯೋಜಿಸಿತ್ತು.</p>.<p>‘ವಿದೇಶದ ಪ್ರಜೆಗಳನ್ನು ಯಾವುದೇ ತೊಂದರೆಯಿಲ್ಲದೇ ಉಕ್ರೇನ್ನಿಂದ ಸ್ಥಳಾಂತರಗೊಳಿಸಲು ರಷ್ಯಾ ಮಿಲಿಟರಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದೂ ಅವರು ಹೇಳಿದರು.</p>.<p>‘ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ 130 ಬಸ್ಗಳನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಗಡಿಭಾಗದಲ್ಲಿ ತಾತ್ಕಾಲಿಕ ವಸತಿ, ಆಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಕ್ಲಿನಿಕ್ಗಳು ಹಾಗೂ ಅಗತ್ಯ ಔಷಧಗಳ ದಾಸ್ತಾನು ಸಹ ಇದೆ. ಉಕ್ರೇನ್ನಿಂದ ಕರೆದುಕೊಂಡು ಬಂದವರನ್ನು ಆಯಾ ದೇಶಗಳಿಗೆ ಕಳಿಸುವ ಏರ್ಪಾಡು ಮಾಡಲಾಗಿದೆ’ ಎಂದು ಅವರು ಸಭೆಗೆ ತಿಳಿಸಿದರು.</p>.<p>‘ಉಕ್ರೇನ್ ಪ್ರಜೆಗಳು ಹಾರ್ಕಿವ್ ಹಾಗೂ ಸುಮಿ ನಗರಗಳಲ್ಲಿ 3,700ಕ್ಕೂ ಹೆಚ್ಚು ಭಾರತೀಯರನ್ನು ಒತ್ತೆ ಇರಿಸಿಕೊಂಡಿದ್ದಾರೆ’ ಎಂದು ಆರೋಪಿಸಿದ ಅವರು, ‘ಜನರು ನಗರಗಳನ್ನು ತೊರೆಯಲು ಉಗ್ರಗಾಮಿಗಳು ಬಿಡುತ್ತಿಲ್ಲ. ಇದು ಉಕ್ರೇನ್ ಪ್ರಜೆಗಳು ಮಾತ್ರವಲ್ಲ ವಿದೇಶಿಯರ ಮೇಲೂ ಪರಿಣಾಮ ಬೀರುತ್ತದೆ ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>