‘ಶ್ರೀಲಂಕಾದ ಧನುಷ್ಕೋಡಿಯಿಂದ ದೋಣಿಯಲ್ಲಿ ಇಲ್ಲಿಗೆ ಬಂದಿದ್ದೇವೆ. ಆಹಾರ ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆಯಿಂದಾಗಿ ಮನೆಗಳನ್ನು ತೊರೆದು ಇಲ್ಲಿಗೆ ಬಂದಿದ್ದೇವೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಪ್ರಸ್ತುತ ರಾಜಕೀಯ ಅಸ್ಥಿರತೆಯಿಂದ ತಮ್ಮ ಜೀವನ ನಡೆಸುವುದು ಕಷ್ಟಸಾಧ್ಯ’ ಎಂದು ದೋಣಿಯಲ್ಲಿ ಪುನರ್ವಸತಿ ಬಯಸಿ ಬಂದಿರುವ ತಮಿಳರು ಹೇಳಿದ್ದಾರೆ.