<p><strong>ವಾಷಿಂಗ್ಟನ್:</strong> ‘ಭಾರತ ಹಿಂದೆಂದೂ ಕಂಡಿರದಂತಹ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಾಗಾಗಿ ಅನಿವಾಸಿ ಭಾರತೀಯ ಸಮುದಾಯವು ಕೋವಿಡ್ ಬಿಕ್ಕಟ್ಟಿಗೆ ತುತ್ತಾಗಿರುವ ಭಾರತೀಯರಿಗೆ ಸಹಾಯ ಮಾಡಬೇಕು’ ಎಂದು ಭಾರತ ಮೂಲದ ಅಮೆರಿಕದ ಲೋಕೋಪಕಾರಿ ಹಾಗೂ ಅನಿವಾಸಿ ಭಾರತೀಯ ಸಂಘದ ಸ್ಥಾಪಕ ಎಂ.ಆರ್.ರಂಗಸ್ವಾಮಿ ಹೇಳಿದ್ದಾರೆ.</p>.<p>‘ಭಾರತವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ನಾನು ನಿಮ್ಮ ಬಳಿ ಎರಡು ಮನವಿಗಳನ್ನು ಮಾಡುತ್ತಿದ್ದೇನೆ. ಮೊದಲನೇಯದಾಗಿ ಭಾರತದಲ್ಲಿರುವ ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ನೆರವು ಒದಗಿಸಿ. ಇದರೊಂದಿಗೆ ಭಾರತಕ್ಕೆ ನಿಮ್ಮಿಂದಾಗುವ ಎಲ್ಲಾ ಸಹಾಯವನ್ನು ಮಾಡಿ’ ಎಂದು ಅವರು ಮನವಿ ಮಾಡಿದ್ದಾರೆ.</p>.<p>ಇತ್ತೀಚಿಗೆ ರಂಗಸ್ವಾಮಿ ಅವರ ಅಕ್ಕ ಚೆನ್ನೈನಲ್ಲಿ ಕೋವಿಡ್ನಿಂದ ಮೃತಪಟ್ಟರು.</p>.<p>‘ನಾನು ಭಾರತಕ್ಕೆ ನೆರವು ಒದಗಿಸಲು ಅಮೆರಿಕ ಸೇರಿದಂತೆ ವಿಶ್ವದ ಇತರೆ ಭಾಗಗಳಿಂದ ದೇಣಿಗೆಯನ್ನು ಸಂಗ್ರಹಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. ವಿವಿಧ ಅಭಿಯಾನಗಳಡಿ ₹ 40 ಲಕ್ಷಕ್ಕೂ ಅಧಿಕ ನೆರವು ಸಂಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾಷಿಂಗ್ಟನ್:</strong> ‘ಭಾರತ ಹಿಂದೆಂದೂ ಕಂಡಿರದಂತಹ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಾಗಾಗಿ ಅನಿವಾಸಿ ಭಾರತೀಯ ಸಮುದಾಯವು ಕೋವಿಡ್ ಬಿಕ್ಕಟ್ಟಿಗೆ ತುತ್ತಾಗಿರುವ ಭಾರತೀಯರಿಗೆ ಸಹಾಯ ಮಾಡಬೇಕು’ ಎಂದು ಭಾರತ ಮೂಲದ ಅಮೆರಿಕದ ಲೋಕೋಪಕಾರಿ ಹಾಗೂ ಅನಿವಾಸಿ ಭಾರತೀಯ ಸಂಘದ ಸ್ಥಾಪಕ ಎಂ.ಆರ್.ರಂಗಸ್ವಾಮಿ ಹೇಳಿದ್ದಾರೆ.</p>.<p>‘ಭಾರತವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಸಮಯದಲ್ಲಿ ನಾನು ನಿಮ್ಮ ಬಳಿ ಎರಡು ಮನವಿಗಳನ್ನು ಮಾಡುತ್ತಿದ್ದೇನೆ. ಮೊದಲನೇಯದಾಗಿ ಭಾರತದಲ್ಲಿರುವ ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ನೆರವು ಒದಗಿಸಿ. ಇದರೊಂದಿಗೆ ಭಾರತಕ್ಕೆ ನಿಮ್ಮಿಂದಾಗುವ ಎಲ್ಲಾ ಸಹಾಯವನ್ನು ಮಾಡಿ’ ಎಂದು ಅವರು ಮನವಿ ಮಾಡಿದ್ದಾರೆ.</p>.<p>ಇತ್ತೀಚಿಗೆ ರಂಗಸ್ವಾಮಿ ಅವರ ಅಕ್ಕ ಚೆನ್ನೈನಲ್ಲಿ ಕೋವಿಡ್ನಿಂದ ಮೃತಪಟ್ಟರು.</p>.<p>‘ನಾನು ಭಾರತಕ್ಕೆ ನೆರವು ಒದಗಿಸಲು ಅಮೆರಿಕ ಸೇರಿದಂತೆ ವಿಶ್ವದ ಇತರೆ ಭಾಗಗಳಿಂದ ದೇಣಿಗೆಯನ್ನು ಸಂಗ್ರಹಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. ವಿವಿಧ ಅಭಿಯಾನಗಳಡಿ ₹ 40 ಲಕ್ಷಕ್ಕೂ ಅಧಿಕ ನೆರವು ಸಂಗ್ರಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>