ಶ್ವೇತಭವನದಲ್ಲಿ ನಡೆದ ಕ್ರಿಸ್ಮಸ್ ಪಾರ್ಟಿಯಲ್ಲಿ ಮಾತನಾಡಿದ ಅವರು, ‘ಕೆಲವು ರಾಜ್ಯಗಳಲ್ಲಿ ಮತ ಎಣಿಕೆ ಬಾಕಿ ಇದ್ದರೂ, ಅಭ್ಯರ್ಥಿಯೊಬ್ಬರನ್ನು ಚುನಾವಣೆಯಲ್ಲಿ ಗೆದ್ದಿದ್ದಾರೆಂದು ಮೆರವಣಿಗೆ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ, ಸಾಂವಿಧಾನಿಕವಾಗಿ ಪ್ರತಿ ಮತ ಪತ್ರವೂ ಎಣಿಕೆಯಾಗಬೇಕು. ಆನಂತರ ಗೆಲುವು–ಸೋಲು ಖಾತರಿಪಡಿಸಬೇಕು‘ ಎಂದು ಹೇಳಿದರು.