<p><strong>ವಿಶ್ವಸಂಸ್ಥೆ:</strong> ಪ್ರತೀಕಾರದಉದ್ದೇಶಕ್ಕಾಗಿ ವಿಶ್ವಾಸಾರ್ಹ ಪುರಾವೆಗಳಿಲ್ಲದೇ ಅಮಾಯಕ ನಾಗರಿಕರನ್ನು ಭಯೋತ್ಪಾದಕರೆಂದು ಬಿಂಬಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಯಾವ ರಾಷ್ಟ್ರಗಳೂ ದುರುಪಯೋಗ ಮಾಡಿಕೊಳ್ಳಬಾರದು ಎಂದು ಭಾರತ ಹೇಳಿದೆ.</p>.<p>ನಾಲ್ವರು ಭಾರತೀಯರನ್ನು 'ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್ಖೈದಾ ನಿರ್ಬಂಧ ಸಮಿತಿ' ಅಡಿಯಲ್ಲಿ ಭಯೋತ್ಪಾದಕರೆಂದು ಬಿಂಬಿಸುವಲ್ಲಿ ವಿಫಲವಾದ ಪಾಕಿಸ್ತಾನದ ಪ್ರಯತ್ನವನ್ನು ಭಾರತ ಉಲ್ಲೇಖಿಸಿ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.</p>.<p>ಭಾರತೀಯರಾದ ಅಂಗಾರ ಅಪ್ಪಾಜಿ, ಗೊಬಿಂಡ ಪಟ್ನಾಯಕ್, ಅಜಯ್ ಮಿಸ್ತ್ರಿ ಮತ್ತು ವೇಣುಮಾಧವ್ ಡೋಂಗರಅವರ ಹೆಸರನ್ನು '1267 ಅಲ್ಖೈದಾ ನಿರ್ಬಂಧಿತ ಸಮಿತಿ' ಅಡಿಯಲ್ಲಿ ಪಟ್ಟಿ ಮಾಡಿವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿತ್ತು.</p>.<p>ಆದರೆ, ಕಳೆದ ತಿಂಗಳು ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ರಾಷ್ಟ್ರಗಳು ಅಪ್ಪಾಜಿ ಮತ್ತು ಪಟ್ನಾಯಕ್ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿದ್ದವು.ಮೂಲಗಳ ಪ್ರಕಾರ, ಪಾಕಿಸ್ತಾನವು ಈ ಪ್ರಕರಣದಲ್ಲಿ ವ್ಯಕ್ತಿಗಳನ್ನು ಪಟ್ಟಿ ಮಾಡಲು ಯಾವುದೇ ಪುರಾವೆಗಳನ್ನು ನೀಡಿಲ್ಲ. ಅದೇ ರೀತಿ, ಮಿಸ್ತ್ರಿ ಮತ್ತು ಡೊಂಗರ ಅವರನ್ನು ಪಟ್ಟಿ ಮಾಡುವ ಪಾಕಿಸ್ತಾನದ ಹಿಂದಿನ ಪ್ರಯತ್ನವನ್ನೂ ಕೌನ್ಸಿಲ್ ಜೂನ್ / ಜುಲೈ ಆಸುಪಾಸಿನಲ್ಲಿ ನಿರ್ಬಂಧ ವಿಧಿಸಿತ್ತು.</p>.<p>ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್ನ ಮೊದಲ ಕಾರ್ಯದರ್ಶಿ ಮತ್ತು ಕಾನೂನು ಸಲಹೆಗಾರ ಯೆಡ್ಲಾ ಉಮಾಶಂಕರ್ ಯುಎನ್ ಸಾಮಾನ್ಯ ಸಭೆಯ 6ನೇ ಸಮಿತಿ ಸಭೆಯಲ್ಲಿ ‘ಅಂತರರಾಷ್ಟ್ರೀಯ ಭಯೋತ್ಪಾದನೆ ನಿರ್ಮೂಲನೆಗಾಗಿ ಪರಿಹಾರಗಳು‘ ಕುರಿತು ಮಾತನಾಡಿ, ‘ ತಮ್ಮ ಪ್ರತೀಕಾರಕ್ಕಾಗಿ ಯಾವುದೇ ರಾಷ್ಟ್ರಗಳು ಪುರಾವೆಗಳಿಲ್ಲದೇ ಅಮಾಯಕರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು. ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಬೇಕು‘ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ:</strong> ಪ್ರತೀಕಾರದಉದ್ದೇಶಕ್ಕಾಗಿ ವಿಶ್ವಾಸಾರ್ಹ ಪುರಾವೆಗಳಿಲ್ಲದೇ ಅಮಾಯಕ ನಾಗರಿಕರನ್ನು ಭಯೋತ್ಪಾದಕರೆಂದು ಬಿಂಬಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಯಾವ ರಾಷ್ಟ್ರಗಳೂ ದುರುಪಯೋಗ ಮಾಡಿಕೊಳ್ಳಬಾರದು ಎಂದು ಭಾರತ ಹೇಳಿದೆ.</p>.<p>ನಾಲ್ವರು ಭಾರತೀಯರನ್ನು 'ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್ಖೈದಾ ನಿರ್ಬಂಧ ಸಮಿತಿ' ಅಡಿಯಲ್ಲಿ ಭಯೋತ್ಪಾದಕರೆಂದು ಬಿಂಬಿಸುವಲ್ಲಿ ವಿಫಲವಾದ ಪಾಕಿಸ್ತಾನದ ಪ್ರಯತ್ನವನ್ನು ಭಾರತ ಉಲ್ಲೇಖಿಸಿ, ಈ ಅಭಿಪ್ರಾಯ ವ್ಯಕ್ತಪಡಿಸಿದೆ.</p>.<p>ಭಾರತೀಯರಾದ ಅಂಗಾರ ಅಪ್ಪಾಜಿ, ಗೊಬಿಂಡ ಪಟ್ನಾಯಕ್, ಅಜಯ್ ಮಿಸ್ತ್ರಿ ಮತ್ತು ವೇಣುಮಾಧವ್ ಡೋಂಗರಅವರ ಹೆಸರನ್ನು '1267 ಅಲ್ಖೈದಾ ನಿರ್ಬಂಧಿತ ಸಮಿತಿ' ಅಡಿಯಲ್ಲಿ ಪಟ್ಟಿ ಮಾಡಿವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿತ್ತು.</p>.<p>ಆದರೆ, ಕಳೆದ ತಿಂಗಳು ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ರಾಷ್ಟ್ರಗಳು ಅಪ್ಪಾಜಿ ಮತ್ತು ಪಟ್ನಾಯಕ್ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಪಾಕಿಸ್ತಾನದ ಪ್ರಯತ್ನವನ್ನು ವಿಫಲಗೊಳಿಸಿದ್ದವು.ಮೂಲಗಳ ಪ್ರಕಾರ, ಪಾಕಿಸ್ತಾನವು ಈ ಪ್ರಕರಣದಲ್ಲಿ ವ್ಯಕ್ತಿಗಳನ್ನು ಪಟ್ಟಿ ಮಾಡಲು ಯಾವುದೇ ಪುರಾವೆಗಳನ್ನು ನೀಡಿಲ್ಲ. ಅದೇ ರೀತಿ, ಮಿಸ್ತ್ರಿ ಮತ್ತು ಡೊಂಗರ ಅವರನ್ನು ಪಟ್ಟಿ ಮಾಡುವ ಪಾಕಿಸ್ತಾನದ ಹಿಂದಿನ ಪ್ರಯತ್ನವನ್ನೂ ಕೌನ್ಸಿಲ್ ಜೂನ್ / ಜುಲೈ ಆಸುಪಾಸಿನಲ್ಲಿ ನಿರ್ಬಂಧ ವಿಧಿಸಿತ್ತು.</p>.<p>ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್ನ ಮೊದಲ ಕಾರ್ಯದರ್ಶಿ ಮತ್ತು ಕಾನೂನು ಸಲಹೆಗಾರ ಯೆಡ್ಲಾ ಉಮಾಶಂಕರ್ ಯುಎನ್ ಸಾಮಾನ್ಯ ಸಭೆಯ 6ನೇ ಸಮಿತಿ ಸಭೆಯಲ್ಲಿ ‘ಅಂತರರಾಷ್ಟ್ರೀಯ ಭಯೋತ್ಪಾದನೆ ನಿರ್ಮೂಲನೆಗಾಗಿ ಪರಿಹಾರಗಳು‘ ಕುರಿತು ಮಾತನಾಡಿ, ‘ ತಮ್ಮ ಪ್ರತೀಕಾರಕ್ಕಾಗಿ ಯಾವುದೇ ರಾಷ್ಟ್ರಗಳು ಪುರಾವೆಗಳಿಲ್ಲದೇ ಅಮಾಯಕರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು. ಈ ವಿಚಾರದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಬೇಕು‘ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>