ಕೋವಿಡ್ 19 ಲಸಿಕೆ ವಿತರಣೆ ವೇಳೆ ಆಗುತ್ತಿರುವ ವಿಳಂಬ ಕುರಿತು ಸ್ಥಳೀಯ ಅಧಿಕಾರಿಗಳ ವಿರುದ್ಧ ಟಂಪ್ ಟ್ವೀಟರ್ನಲ್ಲಿ ಹರಿಹಾಯ್ದಿದ್ದಾರೆ. ಜತೆಗೆ, ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ರೋಗ ನಿಯಂತ್ರಣ (ಸಿಡಿಸಿ) ನೀತಿಯನ್ನೇ ದೂಷಿಸಿರುವ ಅವರು, ‘ಸಾವಿನ ಬಗ್ಗೆ ಅನುಮಾನ ಬಂದರೆ, ಅದಕ್ಕೆ ಕೋವಿಡ್ ಸಾವು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಕೊರೊನಾ ಸೋಂಕು ಮತ್ತು ಸಾವಿಗೆ ಕಾರಣ ಪತ್ತೆ ಮಾಡಲು ಸೂಕ್ತ ವಿಧಾನವಿಲ್ಲದಿರುವುದೇ, ಇಂಥ ಉತ್ಪ್ರೇಕ್ಷಿತ ಅಂಕಿ–ಸಂಖ್ಯೆ ನೀಡಲು ಕಾರಣವಾಗಿದೆ‘ ಎಂದು ಅವರು ಟೀಕಿಸಿದ್ದಾರೆ.