ಈಗ ಮಾವು ಹಂಗಾಮು ಪ್ರಾರಂಭವಾಗಿದೆ. ಮಾವು ಬೆಳೆಯುವ ಪ್ರದೇಶದಲ್ಲಿ ಹೂತೆನೆ ಹೊರಹೊಮ್ಮಿದ್ದು, ಕೆಲವು ಕಡೆ ಕಾಯಿ ಕಚ್ಚಿದೆ. ಆದರೆ ರಾಜ್ಯಾದ್ಯಂತ ವಾತಾವರನ ವೈಪರೀತ್ಯ ಉಂಟಾಗಿದೆ. ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆ ಮಾವಿನ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಇಂಥ ಸಂದರ್ಭದಲ್ಲಿ ಹೂ ಕಪ್ಪಾಗುವುದನ್ನು ತಪ್ಪಿಸಲು, ಬೂದಿರೋಗದಿಂದ ಪಾರುಮಾಡಲು, ಹಾಗೂ ಒಣಗದಂತಿರಲು ರೈತರು ಸಿಲೀಂದ್ರ ನಾಶಕ ಸಿಂಪಡಣೆ ಮಾಡಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.