<p><strong>ಕಡೂರು: </strong>ಪಟ್ಟಣದ ಸಮೀಪವಿರುವ ವಿ.ಎಲ್. ನಗರದ ಕಿರಣ್ ನಾಯ್ಕ ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್. ಕೈತುಂಬಾ ಸಂಬಳ ಪಡೆಯುವ ಅವಕಾಶಗಳು ಇದ್ದರೂ ಮನಸ್ಸು ತುಡಿಯುತ್ತಿದ್ದುದು ಹುಟ್ಟೂರಿನಲ್ಲಿ ಕೃಷಿಗೆ ಪೂರಕವಾಗಿ ಏನಾದರೂ ಮಾಡಬೇಕು ಎಂಬುದರ ಕಡೆಗೆ. ಆ ನಿಟ್ಟಿನಲ್ಲಿ ಚಿಂತನೆ ನಡೆಸಿದಾಗ ಇವರನ್ನು ಆಕರ್ಷಿಸಿದ್ದು ಅಣಬೆ ಕೃಷಿ. ಅದರಲ್ಲೇ ಬದುಕು ಕಟ್ಟಿಕೊಂಡ ಕಿರಣ್, ಅಣಬೆ ಕೃಷಿಯಲ್ಲಿ ಯಶಸ್ಸು ಪಡೆದು ಇತರರಿಗೆ ಮಾದರಿಯಾಗಿದ್ದಾರೆ.</p>.<p>ಕಿರಣ್ ಮೊದಲು ಅಣಬೆ ಕೃಷಿಯ ಸಾಧಕ–ಬಾಧಕಗಳನ್ನು ಅಧ್ಯಯನ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇದ್ದ ಸ್ವಂತ ಜಾಗದಲ್ಲಿ 25×50 ಅಳತೆಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿ ಶೆಡ್ ನಿರ್ಮಿಸಿದರು. ಅಣಬೆ ಬೆಳೆಗೆ ಅಗತ್ಯವಾದ ಭತ್ತದ ಹುಲ್ಲು ಸಂಗ್ರಹಿಸಿ, ಶೆಡ್ನಲ್ಲಿ ವೈಜ್ಞಾನಿಕವಾಗಿ ಅಣಬೆ ಕೃಷಿ ಆರಂಭಿಸಿದರು.</p>.<p>ಸಣ್ಣಮಟ್ಟದಲ್ಲಿ ಆರಂಭಿಸಿದ ಅಣಬೆ ಕೃಷಿ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಪ್ರತಿ ತಿಂಗಳಿಗೆ 40ರಿಂದ 50 ಕೆ.ಜಿ ಅಣಬೆ ಬೀಜ ತರಿಸುತ್ತಾರೆ. ವೈಟ್ ಓಯಿಸ್ಟರ್ (ಚಿಪ್ಪಣಬೆ) ಪ್ರಭೇದದ ಒಂದು ಕೆ.ಜಿ ಅಣಬೆ ಬೀಜಕ್ಕೆ ₹ 70ರಿಂದ 150 ದರವಿದೆ. ಒಂದು ಕೆ.ಜಿ. ಬೀಜದಲ್ಲಿ ಕನಿಷ್ಠ ಎಂಟು, ಗರಿಷ್ಠ 10 ಕೆ.ಜಿ ಹಸಿ ಅಣಬೆ ದೊರೆಯುತ್ತದೆ. ಕೊಯ್ದ ಅಣಬೆಗಳನ್ನು ಪೇಪರ್ ಬ್ಯಾಗ್ನಲ್ಲಿ ಪ್ಯಾಕ್ ಮಾಡಿ ಮಾರಾಟಕ್ಕೆ ಸಿದ್ಧಪಡಿಸುತ್ತಾರೆ. ಒಂದು ಕೆ.ಜಿ ಅಣಬೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ₹ 250 ಬೆಲೆಯಿದೆ. ಒಣಗಿಸಿದ ಅಣಬೆಗೆ ₹ 3000 ತನಕ ಬೆಲೆಯಿದೆ. ಹೊರ ಜಿಲ್ಲೆಗಳಿಗೆ ಮತ್ತು ಕೆಲ ಅರಬ್ ದೇಶಗಳಿಗೆ ಅಣಬೆ ರಫ್ತು ಮಾಡುತ್ತಿರುವ ಕಿರಣ್, ರೈತರು ಗುಣಮಟ್ಟದ ಅಣಬೆ ಬೆಳೆದರೆ, ಅವುಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಸಿ ದೊಡ್ಡ ಮಟ್ಟದಲ್ಲಿ ರಫ್ತು ಉದ್ಯಮ ನಡೆಸುವ ಆಶಯ ಹೊಂದಿದ್ದಾರೆ.</p>.<p>ಅಣಬೆ ಬಹು ಪೌಷ್ಟಿಕ ಆಹಾರ. ರೈತರು ಇರುವಷ್ಟು ಜಾಗದಲ್ಲೇ ಈ ಕೃಷಿ ಮಾಡಿ, ಉಪ ಆದಾಯ ಪಡೆಯಬಹುದು. ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅಣಬೆ ಕೃಷಿ ಸುಲಭದ ದಾರಿ ಎನ್ನುವ ಕಿರಣ್ ನಾಯ್ಕ ಅವರ ಪತ್ನಿ ಯಶಸ್ವಿನಿ ಸಹ ಅಣಬೆ ಕೃಷಿಗೆ ಕೈಜೋಡಿಸಿದ್ದಾರೆ. ಅವರು ಸಹ ಮೆಕ್ಯಾನಿಕಲ್ ಡಿಪ್ಲೊಮಾ ಪದವೀಧರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಡೂರು: </strong>ಪಟ್ಟಣದ ಸಮೀಪವಿರುವ ವಿ.ಎಲ್. ನಗರದ ಕಿರಣ್ ನಾಯ್ಕ ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್. ಕೈತುಂಬಾ ಸಂಬಳ ಪಡೆಯುವ ಅವಕಾಶಗಳು ಇದ್ದರೂ ಮನಸ್ಸು ತುಡಿಯುತ್ತಿದ್ದುದು ಹುಟ್ಟೂರಿನಲ್ಲಿ ಕೃಷಿಗೆ ಪೂರಕವಾಗಿ ಏನಾದರೂ ಮಾಡಬೇಕು ಎಂಬುದರ ಕಡೆಗೆ. ಆ ನಿಟ್ಟಿನಲ್ಲಿ ಚಿಂತನೆ ನಡೆಸಿದಾಗ ಇವರನ್ನು ಆಕರ್ಷಿಸಿದ್ದು ಅಣಬೆ ಕೃಷಿ. ಅದರಲ್ಲೇ ಬದುಕು ಕಟ್ಟಿಕೊಂಡ ಕಿರಣ್, ಅಣಬೆ ಕೃಷಿಯಲ್ಲಿ ಯಶಸ್ಸು ಪಡೆದು ಇತರರಿಗೆ ಮಾದರಿಯಾಗಿದ್ದಾರೆ.</p>.<p>ಕಿರಣ್ ಮೊದಲು ಅಣಬೆ ಕೃಷಿಯ ಸಾಧಕ–ಬಾಧಕಗಳನ್ನು ಅಧ್ಯಯನ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇದ್ದ ಸ್ವಂತ ಜಾಗದಲ್ಲಿ 25×50 ಅಳತೆಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿ ಶೆಡ್ ನಿರ್ಮಿಸಿದರು. ಅಣಬೆ ಬೆಳೆಗೆ ಅಗತ್ಯವಾದ ಭತ್ತದ ಹುಲ್ಲು ಸಂಗ್ರಹಿಸಿ, ಶೆಡ್ನಲ್ಲಿ ವೈಜ್ಞಾನಿಕವಾಗಿ ಅಣಬೆ ಕೃಷಿ ಆರಂಭಿಸಿದರು.</p>.<p>ಸಣ್ಣಮಟ್ಟದಲ್ಲಿ ಆರಂಭಿಸಿದ ಅಣಬೆ ಕೃಷಿ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಪ್ರತಿ ತಿಂಗಳಿಗೆ 40ರಿಂದ 50 ಕೆ.ಜಿ ಅಣಬೆ ಬೀಜ ತರಿಸುತ್ತಾರೆ. ವೈಟ್ ಓಯಿಸ್ಟರ್ (ಚಿಪ್ಪಣಬೆ) ಪ್ರಭೇದದ ಒಂದು ಕೆ.ಜಿ ಅಣಬೆ ಬೀಜಕ್ಕೆ ₹ 70ರಿಂದ 150 ದರವಿದೆ. ಒಂದು ಕೆ.ಜಿ. ಬೀಜದಲ್ಲಿ ಕನಿಷ್ಠ ಎಂಟು, ಗರಿಷ್ಠ 10 ಕೆ.ಜಿ ಹಸಿ ಅಣಬೆ ದೊರೆಯುತ್ತದೆ. ಕೊಯ್ದ ಅಣಬೆಗಳನ್ನು ಪೇಪರ್ ಬ್ಯಾಗ್ನಲ್ಲಿ ಪ್ಯಾಕ್ ಮಾಡಿ ಮಾರಾಟಕ್ಕೆ ಸಿದ್ಧಪಡಿಸುತ್ತಾರೆ. ಒಂದು ಕೆ.ಜಿ ಅಣಬೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ₹ 250 ಬೆಲೆಯಿದೆ. ಒಣಗಿಸಿದ ಅಣಬೆಗೆ ₹ 3000 ತನಕ ಬೆಲೆಯಿದೆ. ಹೊರ ಜಿಲ್ಲೆಗಳಿಗೆ ಮತ್ತು ಕೆಲ ಅರಬ್ ದೇಶಗಳಿಗೆ ಅಣಬೆ ರಫ್ತು ಮಾಡುತ್ತಿರುವ ಕಿರಣ್, ರೈತರು ಗುಣಮಟ್ಟದ ಅಣಬೆ ಬೆಳೆದರೆ, ಅವುಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಸಿ ದೊಡ್ಡ ಮಟ್ಟದಲ್ಲಿ ರಫ್ತು ಉದ್ಯಮ ನಡೆಸುವ ಆಶಯ ಹೊಂದಿದ್ದಾರೆ.</p>.<p>ಅಣಬೆ ಬಹು ಪೌಷ್ಟಿಕ ಆಹಾರ. ರೈತರು ಇರುವಷ್ಟು ಜಾಗದಲ್ಲೇ ಈ ಕೃಷಿ ಮಾಡಿ, ಉಪ ಆದಾಯ ಪಡೆಯಬಹುದು. ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅಣಬೆ ಕೃಷಿ ಸುಲಭದ ದಾರಿ ಎನ್ನುವ ಕಿರಣ್ ನಾಯ್ಕ ಅವರ ಪತ್ನಿ ಯಶಸ್ವಿನಿ ಸಹ ಅಣಬೆ ಕೃಷಿಗೆ ಕೈಜೋಡಿಸಿದ್ದಾರೆ. ಅವರು ಸಹ ಮೆಕ್ಯಾನಿಕಲ್ ಡಿಪ್ಲೊಮಾ ಪದವೀಧರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>