<p><strong>ಸಿಂದಗಿ:</strong>ಅರವತ್ತೊಂಬತ್ತರ ಹರೆಯದ ಅಬ್ದುಲ್ ರಜಾಕ್ ದುದನಿ ಅವರಿಗೆ ಕೃಷಿಯೇ ಉಸಿರು. ದಿನವಿಡಿ ತೋಟದ ಕೃಷಿ ಚಟುವಟಿಕೆಗಳಲ್ಲೇ ಮಗ್ನ.</p>.<p>ಪಟ್ಟಣದಿಂದ 4 ಕಿ.ಮೀ. ದೂರದ ಇಂಡಿ ರಸ್ತೆಯಲ್ಲಿದೆ ಇವರ ತೋಟ. ಸೋಮವಾರ ಇಲ್ಲಿಗೆ ಭೇಟಿ ನೀಡಿದ ಸಂದರ್ಭ, ಸುಡು ಬಿಸಿಲಲ್ಲೂ ಬೆನ್ನಿಗೆ ಬೆಲ್ಟ್ ಹಾಕಿಕೊಂಡು, ಯಂತ್ರದ ಸಹಾಯದಿಂದ ದ್ರಾಕ್ಷಿ ತೋಟದಲ್ಲಿನ ಕಸ ತೆಗೆಯುವುದರಲ್ಲಿ ಮಗ್ನರಾಗಿದ್ದರು ದುದನಿ.</p>.<p>ಬಿಡುವಿಲ್ಲದ ಕೃಷಿ ಕಾಯಕದ ನಡುವೆಯೇ ‘ಕೃಷಿ ಮಾತು’ ಆರಂಭಗೊಂಡಿತು. ಎಂಟು ಎಕರೆ ಭೂಮಿಯಲ್ಲಿ ದ್ರಾಕ್ಷಿ, ಪಪ್ಪಾಯಿ, ಬಾಳೆ... ಹೀಗೆ ಸಂಪೂರ್ಣ ತೋಟಗಾರಿಕೆ ಬೆಳೆ ಬೆಳೆಯುತ್ತಿರುವುದಾಗಿ ತಿಳಿಸಿದರು ದುದನಿ.</p>.<p>‘ದಶಕದ ಹಿಂದೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸುತ್ತಿದ್ದೆ. ₹ 2 ಲಕ್ಷ ಖರ್ಚಾಗುತ್ತಿತ್ತು. ₹ 6 ಲಕ್ಷ ವರಮಾನ ಸಿಗ್ತಿತ್ತು. ಎರಡು ವರ್ಷದಿಂದ ಸಂಪೂರ್ಣ ಸಾವಯವ ಕೃಷಿ ಕೈಗೊಂಡ ಬಳಿಕ, ಹೊಸ ಅನುಭವದ ಜತೆ ಲಾಭವೂ ಹೆಚ್ಚಿದೆ. ಇದೀಗ ಕೇವಲ ₹ 60,000 ಮಾತ್ರ ಖರ್ಚಾಗುತ್ತಿದೆ. ಆದಾಯ ₹ 10 ಲಕ್ಷಕ್ಕೆ ಹೆಚ್ಚಿದೆ. ಈ ವರ್ಷ ದ್ರಾಕ್ಷಿಯನ್ನು ಮಣೂಕ ಮಾಡಿ, 30 ಟನ್ ಮಣೂಕವನ್ನು ನೆರೆಯ ಮಹಾರಾಷ್ಟ್ರದ ಸಾಂಗಲಿಗೆ ಕಳುಹಿಸಿಕೊಟ್ಟಿರುವೆ’ ಎಂದು ದುದನಿ ತಮ್ಮ ಕೃಷಿ ಯಶೋಗಾಥೆ ಬಿಚ್ಚಿಟ್ಟರು.</p>.<p>‘ಡಿ.ಸಿ.ಸಿ ಬ್ಯಾಂಕ್ನಿಂದ ₹ 8 ಲಕ್ಷ ಸಾಲ ಪಡೆದು, ಕುರಿ ಸಾಕಣೆಗಾಗಿ ಶೆಡ್ ನಿರ್ಮಿಸಿರುವೆ. ಈಗ 50 ಕುರಿಗಳಿವೆ. ಆಕಳು ಇವೆ. ಇವುಗಳ ಗಂಜಲವನ್ನು ಸಾವಯವ ಕೃಷಿಗಾಗಿ ಬಳಸುವೆ. ಇದು ಜೀವಾಮೃತ ಇದ್ದಂತೆ.</p>.<p>ಇದರ ಜತೆಗೆ ಉತ್ತರ ಪ್ರದೇಶದ ಗಾಜಾಬಾದ್ನ ಕೃಷಿ ವಿಜ್ಞಾನಿ ಕೃಷ್ಣಚಂದ್ರ ಸಲಹೆ ಮೇರೆಗೆ ಸಾವಯವ ದ್ರವ ಔಷಧಿ ಬಳಕೆ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ಎರೆ ಹುಳು ಉತ್ಪತ್ತಿಯಾಗಿವೆ.<br /><br />ಭೂಮಿ ಫಲವತ್ತಾಗಿ ಸತ್ವಯುತವಾಗಿ ಉಳಿಯಬೇಕು. ವಿಷಪೂರಿತ ಆಹಾರ ದೂರಿಡಬೇಕು. ಮನುಷ್ಯ ಸದೃಢನಾಗಿರಬೇಕು ಅಂದರೇ ಸಾವಯವ ಕೃಷಿ ಪದ್ಧತಿಯೊಂದೇ ರಾಜಮಾರ್ಗ’ ಎಂದು ಕೃಷಿ ಮಾತು ಹೇಳಿದರು.</p>.<p>12 ವರ್ಷದ ದ್ರಾಕ್ಷಿಗೆ ಸಾವಯವದಿಂದ ಜೀವ ಕಳೆ ಬಂದಿದೆ. ಜಾನುವಾರುಗಳು ತಿನ್ನದ ತಪ್ಪಲಿನಿಂದ ದಷ್ಪರಣಿ ಎಂಬ ಜೀವಾಮೃತ ಸಿದ್ಧಪಡಿಸಿ ಬೆಳೆಗೆ ಸಿಂಪಡಿಸುವುದನ್ನು ದುದನಿ ವಿವರಿಸಿದರು.</p>.<p>‘ಐದು ವರ್ಷದ ಹಿಂದೆ ಸುರಿದ ಆಲಿಕಲ್ಲು ಮಳೆಯಿಂದ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿ, ₹ 15 ಲಕ್ಷ ನಷ್ಟ ಉಂಟಾಗಿತ್ತು. ಆದರೂ ಎದೆಗುಂದದೆ ಮುನ್ನುಗ್ಗಿರುವೆ. ರೈತರಿಗೆ ಸಂಕಷ್ಟಗಳು ಎದುರಾದರೆ, ಆತ್ಮಹತ್ಯೆಯೇ ಪರಿಹಾರ ಎಂಬ ತಪ್ಪು ದಾರಿ ತುಳಿಯದೆ, ಮುಂದೆ ಸಾಗಬೇಕು ಎಂಬುದೇ ನನ್ನ ಆಶಯ.</p>.<p>ಮುಂಬರುವ ದಿನಗಳಲ್ಲಿ ತೋಟದ ಒಂದು ಭಾಗದಲ್ಲಿ, ಶತಾವರಿ ಆಯುರ್ವೇದಿಕ್ ಸಸ್ಯ ಬೆಳೆಸುವ ಉದ್ದೇಶ ಹೊಂದಿರುವೆ. ಕೃಷಿ ಕಾಯಕ ತುಂಬಾ ತೃಪ್ತಿ ತಂದಿದೆ. ಇದೇ ನನಗೆ ಸುಖಿ ಜೀವನ ತರಿಸಿದೆ’ ಎಂದು ತಿಳಿಸಿದರು.</p>.<p>ಸಂಪರ್ಕ ಸಂಖ್ಯೆ-9448711247</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong>ಅರವತ್ತೊಂಬತ್ತರ ಹರೆಯದ ಅಬ್ದುಲ್ ರಜಾಕ್ ದುದನಿ ಅವರಿಗೆ ಕೃಷಿಯೇ ಉಸಿರು. ದಿನವಿಡಿ ತೋಟದ ಕೃಷಿ ಚಟುವಟಿಕೆಗಳಲ್ಲೇ ಮಗ್ನ.</p>.<p>ಪಟ್ಟಣದಿಂದ 4 ಕಿ.ಮೀ. ದೂರದ ಇಂಡಿ ರಸ್ತೆಯಲ್ಲಿದೆ ಇವರ ತೋಟ. ಸೋಮವಾರ ಇಲ್ಲಿಗೆ ಭೇಟಿ ನೀಡಿದ ಸಂದರ್ಭ, ಸುಡು ಬಿಸಿಲಲ್ಲೂ ಬೆನ್ನಿಗೆ ಬೆಲ್ಟ್ ಹಾಕಿಕೊಂಡು, ಯಂತ್ರದ ಸಹಾಯದಿಂದ ದ್ರಾಕ್ಷಿ ತೋಟದಲ್ಲಿನ ಕಸ ತೆಗೆಯುವುದರಲ್ಲಿ ಮಗ್ನರಾಗಿದ್ದರು ದುದನಿ.</p>.<p>ಬಿಡುವಿಲ್ಲದ ಕೃಷಿ ಕಾಯಕದ ನಡುವೆಯೇ ‘ಕೃಷಿ ಮಾತು’ ಆರಂಭಗೊಂಡಿತು. ಎಂಟು ಎಕರೆ ಭೂಮಿಯಲ್ಲಿ ದ್ರಾಕ್ಷಿ, ಪಪ್ಪಾಯಿ, ಬಾಳೆ... ಹೀಗೆ ಸಂಪೂರ್ಣ ತೋಟಗಾರಿಕೆ ಬೆಳೆ ಬೆಳೆಯುತ್ತಿರುವುದಾಗಿ ತಿಳಿಸಿದರು ದುದನಿ.</p>.<p>‘ದಶಕದ ಹಿಂದೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸುತ್ತಿದ್ದೆ. ₹ 2 ಲಕ್ಷ ಖರ್ಚಾಗುತ್ತಿತ್ತು. ₹ 6 ಲಕ್ಷ ವರಮಾನ ಸಿಗ್ತಿತ್ತು. ಎರಡು ವರ್ಷದಿಂದ ಸಂಪೂರ್ಣ ಸಾವಯವ ಕೃಷಿ ಕೈಗೊಂಡ ಬಳಿಕ, ಹೊಸ ಅನುಭವದ ಜತೆ ಲಾಭವೂ ಹೆಚ್ಚಿದೆ. ಇದೀಗ ಕೇವಲ ₹ 60,000 ಮಾತ್ರ ಖರ್ಚಾಗುತ್ತಿದೆ. ಆದಾಯ ₹ 10 ಲಕ್ಷಕ್ಕೆ ಹೆಚ್ಚಿದೆ. ಈ ವರ್ಷ ದ್ರಾಕ್ಷಿಯನ್ನು ಮಣೂಕ ಮಾಡಿ, 30 ಟನ್ ಮಣೂಕವನ್ನು ನೆರೆಯ ಮಹಾರಾಷ್ಟ್ರದ ಸಾಂಗಲಿಗೆ ಕಳುಹಿಸಿಕೊಟ್ಟಿರುವೆ’ ಎಂದು ದುದನಿ ತಮ್ಮ ಕೃಷಿ ಯಶೋಗಾಥೆ ಬಿಚ್ಚಿಟ್ಟರು.</p>.<p>‘ಡಿ.ಸಿ.ಸಿ ಬ್ಯಾಂಕ್ನಿಂದ ₹ 8 ಲಕ್ಷ ಸಾಲ ಪಡೆದು, ಕುರಿ ಸಾಕಣೆಗಾಗಿ ಶೆಡ್ ನಿರ್ಮಿಸಿರುವೆ. ಈಗ 50 ಕುರಿಗಳಿವೆ. ಆಕಳು ಇವೆ. ಇವುಗಳ ಗಂಜಲವನ್ನು ಸಾವಯವ ಕೃಷಿಗಾಗಿ ಬಳಸುವೆ. ಇದು ಜೀವಾಮೃತ ಇದ್ದಂತೆ.</p>.<p>ಇದರ ಜತೆಗೆ ಉತ್ತರ ಪ್ರದೇಶದ ಗಾಜಾಬಾದ್ನ ಕೃಷಿ ವಿಜ್ಞಾನಿ ಕೃಷ್ಣಚಂದ್ರ ಸಲಹೆ ಮೇರೆಗೆ ಸಾವಯವ ದ್ರವ ಔಷಧಿ ಬಳಕೆ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ಎರೆ ಹುಳು ಉತ್ಪತ್ತಿಯಾಗಿವೆ.<br /><br />ಭೂಮಿ ಫಲವತ್ತಾಗಿ ಸತ್ವಯುತವಾಗಿ ಉಳಿಯಬೇಕು. ವಿಷಪೂರಿತ ಆಹಾರ ದೂರಿಡಬೇಕು. ಮನುಷ್ಯ ಸದೃಢನಾಗಿರಬೇಕು ಅಂದರೇ ಸಾವಯವ ಕೃಷಿ ಪದ್ಧತಿಯೊಂದೇ ರಾಜಮಾರ್ಗ’ ಎಂದು ಕೃಷಿ ಮಾತು ಹೇಳಿದರು.</p>.<p>12 ವರ್ಷದ ದ್ರಾಕ್ಷಿಗೆ ಸಾವಯವದಿಂದ ಜೀವ ಕಳೆ ಬಂದಿದೆ. ಜಾನುವಾರುಗಳು ತಿನ್ನದ ತಪ್ಪಲಿನಿಂದ ದಷ್ಪರಣಿ ಎಂಬ ಜೀವಾಮೃತ ಸಿದ್ಧಪಡಿಸಿ ಬೆಳೆಗೆ ಸಿಂಪಡಿಸುವುದನ್ನು ದುದನಿ ವಿವರಿಸಿದರು.</p>.<p>‘ಐದು ವರ್ಷದ ಹಿಂದೆ ಸುರಿದ ಆಲಿಕಲ್ಲು ಮಳೆಯಿಂದ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿ, ₹ 15 ಲಕ್ಷ ನಷ್ಟ ಉಂಟಾಗಿತ್ತು. ಆದರೂ ಎದೆಗುಂದದೆ ಮುನ್ನುಗ್ಗಿರುವೆ. ರೈತರಿಗೆ ಸಂಕಷ್ಟಗಳು ಎದುರಾದರೆ, ಆತ್ಮಹತ್ಯೆಯೇ ಪರಿಹಾರ ಎಂಬ ತಪ್ಪು ದಾರಿ ತುಳಿಯದೆ, ಮುಂದೆ ಸಾಗಬೇಕು ಎಂಬುದೇ ನನ್ನ ಆಶಯ.</p>.<p>ಮುಂಬರುವ ದಿನಗಳಲ್ಲಿ ತೋಟದ ಒಂದು ಭಾಗದಲ್ಲಿ, ಶತಾವರಿ ಆಯುರ್ವೇದಿಕ್ ಸಸ್ಯ ಬೆಳೆಸುವ ಉದ್ದೇಶ ಹೊಂದಿರುವೆ. ಕೃಷಿ ಕಾಯಕ ತುಂಬಾ ತೃಪ್ತಿ ತಂದಿದೆ. ಇದೇ ನನಗೆ ಸುಖಿ ಜೀವನ ತರಿಸಿದೆ’ ಎಂದು ತಿಳಿಸಿದರು.</p>.<p>ಸಂಪರ್ಕ ಸಂಖ್ಯೆ-9448711247</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>