<figcaption>""</figcaption>.<p>ರೈತರಿಗೆ ಸುಧಾರಿತ ಕೃಷಿ ಪದ್ಧತಿಗಳ ಬಗ್ಗೆ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ 'ಮಾರ್ಗದರ್ಶಿ ಪುಸ್ತಕ' ವೊಂದನ್ನುಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೊರತಂದಿದೆ.</p>.<p>ಉಪಯುಕ್ತ ಮಾಹಿತಿಗಳ ಕಣಜದಂತಿರುವ ‘ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿ’ ಪ್ರತಿಯೊಬ್ಬ ರೈತರ ಮನೆಯಲ್ಲಿರಬೇಕಾದ ಪುಸ್ತಕ. ರೈತರು ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಉಚಿತವಾಗಿ ಮೊಬೈಲ್ನಲ್ಲಿಯೂ ಡೌನ್ಲೋಡ್ ಮಾಡಿಕೊಂಡು ಓದಬಹುದು.</p>.<p>ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಗಳ ಹವಾಗುಣ, ಮಳೆ ದಿನ ಮತ್ತು ಪ್ರಮಾಣ, ಉಷ್ಣಾಂಶ, ಮಣ್ಣಿನ ಆರೋಗ್ಯ, ಪೋಷಕಾಂಶ, ಬೆಳೆ ನಿರ್ವಹಣೆ, ಇಳುವರಿ, ರೈತರಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ದೊರೆಯುವ ಸೌಲಭ್ಯ ಇತ್ಯಾದಿ ಮಾಹಿತಿಗಳ ಕೃಷಿ ಜ್ಞಾನ ಭಂಡಾರದಂತೆ ಕೆಲಸ ಮಾಡುತ್ತದೆ.</p>.<p>‘ರೈತರ ಆಪ್ತ ಮಾರ್ಗದರ್ಶಿಯಂತಿರುವ ಈ ಪುಸ್ತಕ ಮನೆಯಲ್ಲಿದ್ದರೆ ಸಾಕು, ಸಲಹೆ, ಸೂಚನೆ ಕೇಳಿ ರೈತರು ಯಾರ ಬಳಿಯೂ ಅಲೆದಾಡುವ ಅವಶ್ಯಕತೆ ಇಲ್ಲ. ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಗಳ ರೈತರ ಅವಶ್ಯಕತೆ ಮತ್ತು ಈ ಪ್ರದೇಶದಲ್ಲಿ ಬೆಳೆಯುವ ಬೆಳೆಗಳನ್ನು ಗಮನದಲ್ಲಿರಿಸಿಕೊಂಡು ಈ ಪುಸ್ತಕ ರೂಪಿಸಲಾಗಿದೆ’ ಎನ್ನುತ್ತಾರೆಕುಲಪತಿ ಡಾ.ಎಸ್. ರಾಜೇಂದ್ರಪ್ರಸಾದ್.</p>.<p>220 ಪುಟಗಳ ಪುಸ್ತಕದ ಬೆಲೆ ₹200. ಪಿಡಿಎಫ್ ರೂಪದ ಪುಸ್ತಕ ಪಡೆಯಲು ವಾಟ್ಸ್ಆ್ಯಪ್ ಸಂಖ್ಯೆ9972035456 ಅಥವಾ 9591347043 ಸಂದೇಶ ಕಳಿಸಬಹುದು. ಕೃಷಿ ವಿಶ್ವವಿದ್ಯಾಲಯದ ಅಂತರ್ಜಾಲತಾಣ www.uasbangalore.edu.in ಇದರ e-Krishi AGRI Portal ಭೇಟಿ ನೀಡಬಹುದು.</p>.<p><strong>ಪುಸ್ತಕ ದೊರೆಯುವ ವಿಳಾಸ:</strong> ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಜಿಕೆವಿಕೆ ಕ್ಯಾಂಪಸ್, ಬೆಂಗಳೂರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p>ರೈತರಿಗೆ ಸುಧಾರಿತ ಕೃಷಿ ಪದ್ಧತಿಗಳ ಬಗ್ಗೆ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ 'ಮಾರ್ಗದರ್ಶಿ ಪುಸ್ತಕ' ವೊಂದನ್ನುಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೊರತಂದಿದೆ.</p>.<p>ಉಪಯುಕ್ತ ಮಾಹಿತಿಗಳ ಕಣಜದಂತಿರುವ ‘ಕೃಷಿ ಬೆಳೆಗಳ ಸುಧಾರಿತ ಬೇಸಾಯ ಪದ್ಧತಿ’ ಪ್ರತಿಯೊಬ್ಬ ರೈತರ ಮನೆಯಲ್ಲಿರಬೇಕಾದ ಪುಸ್ತಕ. ರೈತರು ಪುಸ್ತಕವನ್ನು ಪಿಡಿಎಫ್ ರೂಪದಲ್ಲಿ ಉಚಿತವಾಗಿ ಮೊಬೈಲ್ನಲ್ಲಿಯೂ ಡೌನ್ಲೋಡ್ ಮಾಡಿಕೊಂಡು ಓದಬಹುದು.</p>.<p>ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಗಳ ಹವಾಗುಣ, ಮಳೆ ದಿನ ಮತ್ತು ಪ್ರಮಾಣ, ಉಷ್ಣಾಂಶ, ಮಣ್ಣಿನ ಆರೋಗ್ಯ, ಪೋಷಕಾಂಶ, ಬೆಳೆ ನಿರ್ವಹಣೆ, ಇಳುವರಿ, ರೈತರಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ದೊರೆಯುವ ಸೌಲಭ್ಯ ಇತ್ಯಾದಿ ಮಾಹಿತಿಗಳ ಕೃಷಿ ಜ್ಞಾನ ಭಂಡಾರದಂತೆ ಕೆಲಸ ಮಾಡುತ್ತದೆ.</p>.<p>‘ರೈತರ ಆಪ್ತ ಮಾರ್ಗದರ್ಶಿಯಂತಿರುವ ಈ ಪುಸ್ತಕ ಮನೆಯಲ್ಲಿದ್ದರೆ ಸಾಕು, ಸಲಹೆ, ಸೂಚನೆ ಕೇಳಿ ರೈತರು ಯಾರ ಬಳಿಯೂ ಅಲೆದಾಡುವ ಅವಶ್ಯಕತೆ ಇಲ್ಲ. ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ದಕ್ಷಿಣ ಕರ್ನಾಟಕದ ಹತ್ತು ಜಿಲ್ಲೆಗಳ ರೈತರ ಅವಶ್ಯಕತೆ ಮತ್ತು ಈ ಪ್ರದೇಶದಲ್ಲಿ ಬೆಳೆಯುವ ಬೆಳೆಗಳನ್ನು ಗಮನದಲ್ಲಿರಿಸಿಕೊಂಡು ಈ ಪುಸ್ತಕ ರೂಪಿಸಲಾಗಿದೆ’ ಎನ್ನುತ್ತಾರೆಕುಲಪತಿ ಡಾ.ಎಸ್. ರಾಜೇಂದ್ರಪ್ರಸಾದ್.</p>.<p>220 ಪುಟಗಳ ಪುಸ್ತಕದ ಬೆಲೆ ₹200. ಪಿಡಿಎಫ್ ರೂಪದ ಪುಸ್ತಕ ಪಡೆಯಲು ವಾಟ್ಸ್ಆ್ಯಪ್ ಸಂಖ್ಯೆ9972035456 ಅಥವಾ 9591347043 ಸಂದೇಶ ಕಳಿಸಬಹುದು. ಕೃಷಿ ವಿಶ್ವವಿದ್ಯಾಲಯದ ಅಂತರ್ಜಾಲತಾಣ www.uasbangalore.edu.in ಇದರ e-Krishi AGRI Portal ಭೇಟಿ ನೀಡಬಹುದು.</p>.<p><strong>ಪುಸ್ತಕ ದೊರೆಯುವ ವಿಳಾಸ:</strong> ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಜಿಕೆವಿಕೆ ಕ್ಯಾಂಪಸ್, ಬೆಂಗಳೂರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>