‘ಪಾವಗಡ, ಕೂಡ್ಲಿಗಿ, ಕುಷ್ಟಗಿ, ಚಿಂತಾಮಣಿ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವೆಡೆ ಹುಣಸೆ ಹಣ್ಣಿನ ಉತ್ಪನ್ನ ಹೆಚ್ಚಿದೆ. ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡಿನಲ್ಲೂ ಹುಣಸೆ ಹಣ್ಣಿನ ಕೃಷಿ ಇದೆ. ಹಣ್ಣಿನ ಬೀಜಗಳನ್ನು ಬೇರ್ಪಡಿಸುವ ಸಂದರ್ಭದಲ್ಲಿ, ಬಹುತೇಕ ಬೀಜಗಳು ನಿರುಪಯುಕ್ತವಾಗುತ್ತಿವೆ. ಇದಕ್ಕೆ ಪರಿಹಾರವಾಗಿ ಹೊಸ ಯಂತ್ರ ತಯಾರಿಸಲಾಗಿದ್ದು, ಶೇ 90ರಷ್ಟು ಗುಣಮಟ್ಟದ ಬೀಜಗಳು ದೊರೆಯುತ್ತವೆ’ ಎಂದೂ ತಿಳಿಸಿದರು.