<p>ಕಳೆ / ಸತ್ತೆ ಇತ್ಯಾದಿ ಹೆಸರುಗಳಿಂದ ಗುರುತಿಸುವ ಕೆಲವು ಗಿಡಗಳು ಕರೆಯದೆ ಬರುವ ನೆಂಟರಂತೆ. ಹಾಗೆಯೇ ಬಂದು ಜಮೀನಿನಲ್ಲಿ ಠಿಕಾಣಿ ಹಾಕುತ್ತವೆ. ಗೊಬ್ಬರ - ನೀರು ಕೊಡದಿದ್ದರೂ ಪರವಾಗಿಲ್ಲ. ತನಗೆ ಏನೂ ಆಗುವುದಿಲ್ಲ ಎನ್ನುತ್ತಾ ಬಿರುಬಿಸಿಲಿನಲ್ಲೂ ನಳನಳಿಸುತ್ತಾ ಓಲಾಡುತ್ತವೆ. ಮೂಲ ಬೆಳೆಗಳೊಂದಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತವೆ. ಇವನ್ನು ನಾಶ ಮಾಡಲು ರೈತರು ಕಾರ್ಕೋಟಕ ಕಳೆನಾಶಕಗಳನ್ನು ಅಸ್ತ್ರವಾಗಿ ಬಳಸುತ್ತಾರೆ. ಈ ಅಸ್ತ್ರಕ್ಕೆ ಕಳೆಗಳು ಕಣ್ಮರೆಯಾಗುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ ಮಣ್ಣಲ್ಲಿನ ಜೀವಾಣುಗಳ ಮೇಲೆ ದುಷ್ಪರಿಣಾಮ ಬೀಳುವುದಂತೂ ನಿಜ.</p>.<p>ಕಳೆಗಿಡಗಳು, ಮಣ್ಣಿನ ಆರೋಗ್ಯದ ಸ್ಥಿತಿ - ಗತಿಗಳನ್ನು ತಿಳಿಸುವ ಸೂಚಕಗಳು ಎಂಬ ನಂಬಿಕೆ ಸಹಜ ಕೃಷಿ ಪದ್ಧತಿ ಅನುಸರಿಸುವ ಕೃಷಿಕರದ್ದು. ನಮ್ಮ ಮಣ್ಣು ಆರೋಗ್ಯ ಮತ್ತು ಫಲವತ್ತತೆಯಿಂದ ಕೂಡಿದೆ ಎಂಬುದನ್ನು ಈ ಕಳೆಗಿಡಗಳು ತೋರಿಸುತ್ತವಂತೆ.</p>.<p>ಅಂದರೆ, ನಮ್ಮ ಹೊಲ - ತೋಟ - ಗದ್ದೆ - ತೋಪುಗಳಲ್ಲಿನ ಮಣ್ಣಿನಲ್ಲಿ ‘ಏನು ನಡೆಯುತ್ತಿದೆ’ ಎಂಬುದನ್ನು ನಮಗೆ ತಿಳಿಸುವ ಸಲುವಾಗಿಯೇ ಈ ಬಗೆಯ ಕಳೆಗಿಡಗಳು ಹುಟ್ಟುತ್ತವೆಯಂತೆ. ಆದ್ದರಿಂದ ಕಳೆಗಿಡಗಳನ್ನು ನೋಡಿದ ತಕ್ಷಣ ಅದನ್ನು ಬುಡಸಮೇತ ಕಿತ್ತೆಸೆಯುವತ್ತ ಯೋಚನೆ ಮಾಡಬೇಡಿ. ಹಾಗೆಯೇ ಕಳೆನಾಶಕ ಸಿಂಪಡಿಸಿ, ಸಾಯಿಸಲೂ ಬೇಡಿ.</p>.<p>ಹಾಗಾದರೆ ಅವುಗಳನ್ನು ಏನು ಮಾಡಬೇಕು ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಇಂಥ ಪರೋಪಕಾರಿ ಕಳೆಗಿಡಗಳನ್ನು ಉಪಯುಕ್ತವಾಗಿ ಬಳಸಲು ಹಲವು ವಿಧಾನಗಳಿವೆ. ಅವುಗಳಲ್ಲಿ ಒಂದು, ಕಳೆಗಿಡಗಳಿಂದ ಚಹಾ ತಯಾರಿಸುವುದು. ಅಂದರೆ ‘ವೀಡ್ ಟೀ’ (Weed Tea) ತಯಾರಿಕೆ. ಇದೊಂದು ದ್ರವರೂಪಿ ಗೊಬ್ಬರ ತಯಾರಿಸುವ ವಿಧಾನ.</p>.<p><strong>ತಯಾರಿಕೆ ವಿಧಾನ</strong></p>.<p>1. ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಕಳೆಗಿಡಗಳನ್ನು - ಅಂದರೆ ಎಲೆ ಮತ್ತು ಕಾಂಡ ಭಾಗವನ್ನು ಮಾತ್ರ ಕತ್ತರಿಸಿ.</p>.<p>2. ಅದನ್ನು ಇನ್ನಷ್ಟು ಸಣ್ಣಗೆ ಕತ್ತರಿಸಿ, ಒಂದು ಗೋಣೀಚೀಲದಲ್ಲಿ ಹಾಕಿ.</p>.<p>3. ಕಳೆಗಿಡಗಳಿಂದ ತುಂಬಿದ ಗೋಣೀಚೀಲವನ್ನು ಬಿಗಿಯಾಗಿ ಕಟ್ಟಿ, 200 ಲೀಟರ್ ಸಾಮರ್ಥ್ಯದ ಡ್ರಮ್ನಲ್ಲಿ ಇಡಿ. ಆ ಡ್ರಮ್ಗೆ ಮುಕ್ಕಾಲು ಭಾಗ ನೀರು ತುಂಬಿಸಿ.</p>.<p>5. ಗೋಣಿಚೀಲದ ಮೇಲೆ ಭಾರವಾದ ಕಲ್ಲೊಂದನ್ನು ಇಡಿ. ಏಕೆಂದರೆ ನೀರಲ್ಲಿರುವ ಗೋಣೀಚೀಲ ಮೇಲಕ್ಕೆ ತೇಲತೊಡಗುತ್ತದೆ. ಅದನ್ನು ತಪ್ಪಿಸಲು ಈ ವಿಧಾನ ಅನುಸರಿಸಬೇಕು.</p>.<p>6. ಡ್ರಮ್ ಹಾಗೆಯೇ ತೆರೆದಿರಲಿ.</p>.<p>7. ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಡ್ರಮ್ನಲ್ಲಿರುವ ಕಳೆಗಿಡಗಳನ್ನು ತುಂಬಿದ ಗೋಣೀಚೀಲವನ್ನು ಕೋಲಿನಿಂದ ಚುಚ್ಚಿ. ಹೀಗೆ ಮಾಡುವಾಗ, ಗೋಣೀಚೀಲದೊಳಗಿರುವ ಕಳೆಗಿಡಗಳಲ್ಲಿನ ಸಾರ ನೀರಲ್ಲಿ ನಿಧಾನವಾಗಿ ಬೆರೆಯುತ್ತದೆ. ನೀರಿನ ಬಣ್ಣವೂ ಕ್ರಮೇಣ ಕಪ್ಪಾಗುತ್ತದೆ.</p>.<p>8. ಹದಿನೈದು ದಿನಗಳ ನಂತರ ಈ ನೀರನ್ನು, ನೀವು ಎಲ್ಲಿಂದ ಕಳೆಗಿಡಗಳನ್ನು ಕಿತ್ತು ಸಂಗ್ರಹಿಸಿ ತಂದಿರುತ್ತೀರೋ ಆ ಜಮೀನಿನ ಮಣ್ಣಿನ ಮೇಲೆ ಹಾಕಿ. ಮಣ್ಣು ನೇರಬಿಸಿಲಿಗೆ ತಾಗದಂತೆ ಮುಚ್ಚಿಗೆ ಮಾಡಿ.</p>.<p>9. ಚಿಮುಕಿಸಿದ ನೀರಿನ ಮೂಲಕ ಕಳೆಗಿಡಗಳಲ್ಲಿನ ಹಲವು ಬಗೆಯ ಪೋಷಕಾಂಶಗಳು ಮಣ್ಣಿಗೆ ಸೇರಿ ಮಣ್ಣಲ್ಲಿ ಜೀವಾಣುಗಳ ಸಂಖ್ಯೆ ಹೆಚ್ಚಾಗುವುದನ್ನು ಹಾಗೂ ಅಲ್ಲಿ ಬೆಳೆಯುವ ಗಿಡಗಳು ಆರೋಗ್ಯವಾಗಿರುವುದನ್ನು ನೀವು ಗಮನಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳೆ / ಸತ್ತೆ ಇತ್ಯಾದಿ ಹೆಸರುಗಳಿಂದ ಗುರುತಿಸುವ ಕೆಲವು ಗಿಡಗಳು ಕರೆಯದೆ ಬರುವ ನೆಂಟರಂತೆ. ಹಾಗೆಯೇ ಬಂದು ಜಮೀನಿನಲ್ಲಿ ಠಿಕಾಣಿ ಹಾಕುತ್ತವೆ. ಗೊಬ್ಬರ - ನೀರು ಕೊಡದಿದ್ದರೂ ಪರವಾಗಿಲ್ಲ. ತನಗೆ ಏನೂ ಆಗುವುದಿಲ್ಲ ಎನ್ನುತ್ತಾ ಬಿರುಬಿಸಿಲಿನಲ್ಲೂ ನಳನಳಿಸುತ್ತಾ ಓಲಾಡುತ್ತವೆ. ಮೂಲ ಬೆಳೆಗಳೊಂದಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತವೆ. ಇವನ್ನು ನಾಶ ಮಾಡಲು ರೈತರು ಕಾರ್ಕೋಟಕ ಕಳೆನಾಶಕಗಳನ್ನು ಅಸ್ತ್ರವಾಗಿ ಬಳಸುತ್ತಾರೆ. ಈ ಅಸ್ತ್ರಕ್ಕೆ ಕಳೆಗಳು ಕಣ್ಮರೆಯಾಗುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ ಮಣ್ಣಲ್ಲಿನ ಜೀವಾಣುಗಳ ಮೇಲೆ ದುಷ್ಪರಿಣಾಮ ಬೀಳುವುದಂತೂ ನಿಜ.</p>.<p>ಕಳೆಗಿಡಗಳು, ಮಣ್ಣಿನ ಆರೋಗ್ಯದ ಸ್ಥಿತಿ - ಗತಿಗಳನ್ನು ತಿಳಿಸುವ ಸೂಚಕಗಳು ಎಂಬ ನಂಬಿಕೆ ಸಹಜ ಕೃಷಿ ಪದ್ಧತಿ ಅನುಸರಿಸುವ ಕೃಷಿಕರದ್ದು. ನಮ್ಮ ಮಣ್ಣು ಆರೋಗ್ಯ ಮತ್ತು ಫಲವತ್ತತೆಯಿಂದ ಕೂಡಿದೆ ಎಂಬುದನ್ನು ಈ ಕಳೆಗಿಡಗಳು ತೋರಿಸುತ್ತವಂತೆ.</p>.<p>ಅಂದರೆ, ನಮ್ಮ ಹೊಲ - ತೋಟ - ಗದ್ದೆ - ತೋಪುಗಳಲ್ಲಿನ ಮಣ್ಣಿನಲ್ಲಿ ‘ಏನು ನಡೆಯುತ್ತಿದೆ’ ಎಂಬುದನ್ನು ನಮಗೆ ತಿಳಿಸುವ ಸಲುವಾಗಿಯೇ ಈ ಬಗೆಯ ಕಳೆಗಿಡಗಳು ಹುಟ್ಟುತ್ತವೆಯಂತೆ. ಆದ್ದರಿಂದ ಕಳೆಗಿಡಗಳನ್ನು ನೋಡಿದ ತಕ್ಷಣ ಅದನ್ನು ಬುಡಸಮೇತ ಕಿತ್ತೆಸೆಯುವತ್ತ ಯೋಚನೆ ಮಾಡಬೇಡಿ. ಹಾಗೆಯೇ ಕಳೆನಾಶಕ ಸಿಂಪಡಿಸಿ, ಸಾಯಿಸಲೂ ಬೇಡಿ.</p>.<p>ಹಾಗಾದರೆ ಅವುಗಳನ್ನು ಏನು ಮಾಡಬೇಕು ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಇಂಥ ಪರೋಪಕಾರಿ ಕಳೆಗಿಡಗಳನ್ನು ಉಪಯುಕ್ತವಾಗಿ ಬಳಸಲು ಹಲವು ವಿಧಾನಗಳಿವೆ. ಅವುಗಳಲ್ಲಿ ಒಂದು, ಕಳೆಗಿಡಗಳಿಂದ ಚಹಾ ತಯಾರಿಸುವುದು. ಅಂದರೆ ‘ವೀಡ್ ಟೀ’ (Weed Tea) ತಯಾರಿಕೆ. ಇದೊಂದು ದ್ರವರೂಪಿ ಗೊಬ್ಬರ ತಯಾರಿಸುವ ವಿಧಾನ.</p>.<p><strong>ತಯಾರಿಕೆ ವಿಧಾನ</strong></p>.<p>1. ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಕಳೆಗಿಡಗಳನ್ನು - ಅಂದರೆ ಎಲೆ ಮತ್ತು ಕಾಂಡ ಭಾಗವನ್ನು ಮಾತ್ರ ಕತ್ತರಿಸಿ.</p>.<p>2. ಅದನ್ನು ಇನ್ನಷ್ಟು ಸಣ್ಣಗೆ ಕತ್ತರಿಸಿ, ಒಂದು ಗೋಣೀಚೀಲದಲ್ಲಿ ಹಾಕಿ.</p>.<p>3. ಕಳೆಗಿಡಗಳಿಂದ ತುಂಬಿದ ಗೋಣೀಚೀಲವನ್ನು ಬಿಗಿಯಾಗಿ ಕಟ್ಟಿ, 200 ಲೀಟರ್ ಸಾಮರ್ಥ್ಯದ ಡ್ರಮ್ನಲ್ಲಿ ಇಡಿ. ಆ ಡ್ರಮ್ಗೆ ಮುಕ್ಕಾಲು ಭಾಗ ನೀರು ತುಂಬಿಸಿ.</p>.<p>5. ಗೋಣಿಚೀಲದ ಮೇಲೆ ಭಾರವಾದ ಕಲ್ಲೊಂದನ್ನು ಇಡಿ. ಏಕೆಂದರೆ ನೀರಲ್ಲಿರುವ ಗೋಣೀಚೀಲ ಮೇಲಕ್ಕೆ ತೇಲತೊಡಗುತ್ತದೆ. ಅದನ್ನು ತಪ್ಪಿಸಲು ಈ ವಿಧಾನ ಅನುಸರಿಸಬೇಕು.</p>.<p>6. ಡ್ರಮ್ ಹಾಗೆಯೇ ತೆರೆದಿರಲಿ.</p>.<p>7. ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಡ್ರಮ್ನಲ್ಲಿರುವ ಕಳೆಗಿಡಗಳನ್ನು ತುಂಬಿದ ಗೋಣೀಚೀಲವನ್ನು ಕೋಲಿನಿಂದ ಚುಚ್ಚಿ. ಹೀಗೆ ಮಾಡುವಾಗ, ಗೋಣೀಚೀಲದೊಳಗಿರುವ ಕಳೆಗಿಡಗಳಲ್ಲಿನ ಸಾರ ನೀರಲ್ಲಿ ನಿಧಾನವಾಗಿ ಬೆರೆಯುತ್ತದೆ. ನೀರಿನ ಬಣ್ಣವೂ ಕ್ರಮೇಣ ಕಪ್ಪಾಗುತ್ತದೆ.</p>.<p>8. ಹದಿನೈದು ದಿನಗಳ ನಂತರ ಈ ನೀರನ್ನು, ನೀವು ಎಲ್ಲಿಂದ ಕಳೆಗಿಡಗಳನ್ನು ಕಿತ್ತು ಸಂಗ್ರಹಿಸಿ ತಂದಿರುತ್ತೀರೋ ಆ ಜಮೀನಿನ ಮಣ್ಣಿನ ಮೇಲೆ ಹಾಕಿ. ಮಣ್ಣು ನೇರಬಿಸಿಲಿಗೆ ತಾಗದಂತೆ ಮುಚ್ಚಿಗೆ ಮಾಡಿ.</p>.<p>9. ಚಿಮುಕಿಸಿದ ನೀರಿನ ಮೂಲಕ ಕಳೆಗಿಡಗಳಲ್ಲಿನ ಹಲವು ಬಗೆಯ ಪೋಷಕಾಂಶಗಳು ಮಣ್ಣಿಗೆ ಸೇರಿ ಮಣ್ಣಲ್ಲಿ ಜೀವಾಣುಗಳ ಸಂಖ್ಯೆ ಹೆಚ್ಚಾಗುವುದನ್ನು ಹಾಗೂ ಅಲ್ಲಿ ಬೆಳೆಯುವ ಗಿಡಗಳು ಆರೋಗ್ಯವಾಗಿರುವುದನ್ನು ನೀವು ಗಮನಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>