<blockquote>ಚಿತ್ರಗಳು: ತಾಜುದ್ದೀನ್ ಆಜಾದ್ </blockquote>.<p>ಕಲಬುರಗಿ ಜಿಲ್ಲೆಯ ಮೇಳಕುಂದಾ ಕೆ. ಗ್ರಾಮಕ್ಕೆ ಭೇಟಿ ಕೊಟ್ಟಾಗ ವೈವಿಧ್ಯಮಯ ವಿನ್ಯಾಸದ ಹಣತೆಗಳು ಸ್ವಾಗತ ಕೋರಿದಂತೆ ಭಾಸವಾಯಿತು. ಅಲ್ಲಿ ಒಂದಕ್ಕಿಂತ ಮತ್ತೊಂದು ಹಣತೆ ಆಕರ್ಷಕ, ಅತ್ಯಾಕರ್ಷಕ.</p>.<p>ಈ ಊರಲ್ಲಿ ಮೂವತ್ತಕ್ಕೂ ಅಧಿಕ ಕುಟುಂಬಗಳು ಕುಂಬಾರಿಕೆಯಲ್ಲಿ ತೊಡಗಿವೆ. ಇವರೆಲ್ಲರೂ ಮರಾಠ ಕುಂಬಾರರು. ವರ್ಷವಿಡೀ ಇದೇ ಕಾಯಕ. ಇದರಲ್ಲಿ ಕೈಗೆ ಸಿಗುವ ದುಡಿಮೆಯಲ್ಲೇ ಬದುಕಿನ ಬಂಡಿ ಸಾಗುತ್ತಿದೆ.</p>.<p>ಊರಿನ ಹೃದಯಭಾಗದಲ್ಲೇ ವಾಸವಿರುವ ಈ ಕುಟುಂಬಗಳು ಮಣ್ಣಿನಲ್ಲಿ ಹಣತೆಗಳು, ಮತ್ತಿತರ ಕಲಾಕೃತಿಗಳಿಗೆ ಜೀವ ಕೊಡುತ್ತ, ತಮ್ಮ ಜೀವನವನ್ನೂ ಕಟ್ಟಿಕೊಂಡಿವೆ. ಒಂದಲ್ಲ, ಎರಡಲ್ಲ, ಹತ್ತಾರು ಬಗೆಯ ಹಣತೆಗಳು ಇಲ್ಲಿ ರೂಪ ಪಡೆಯುತ್ತಿವೆ. ಹಣತೆಗಳು ಮಾತ್ರವಲ್ಲ; ಮಣ್ಣಿನ ತಟ್ಟೆಗಳು, ಮಣ್ಣಿನಮೂರ್ತಿಗಳನ್ನೂ ಮಾಡಲಾಗುತ್ತದೆ.</p>.<p>ಇದು ಫ್ಯಾಷನ್ ಯುಗ. ಈ ಕಾಲಘಟ್ಟದಲ್ಲಿ ಕುಂಬಾರಿಕೆ ನೇಪಥ್ಯಕ್ಕೆ ಸರಿಯುತ್ತಿದೆ ಎನ್ನುವುದು ಅಲ್ಲಗಳೆಯಲಾಗದ ಮಾತು. ಹೀಗಿದ್ದರೂ ಅನೇಕ ಸವಾಲುಗಳ ಮಧ್ಯೆಯೂ <br>ಈ ಕುಟುಂಬಗಳು ತಮ್ಮ ಕುಲಕಸುಬು ಮುಂದುವರಿಸಿಕೊಂಡು ಹೊರಟಿವೆ. ಈ ವೃತ್ತಿ ಮಾಡುವವರಲ್ಲಿ ಪುರುಷರಷ್ಟೇ ಅಲ್ಲ; ಮಕ್ಕಳು, ಮಹಿಳೆಯರು ಮತ್ತು ಹಿರಿಯರೂ ಕಾಣಸಿಗುತ್ತಾರೆ. </p>.<p>ಇಲ್ಲಿ ಜೀವತಳೆದ ಮಣ್ಣಿನ ಹಣತೆಗಳು ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳು ಅಲ್ಲದೆ ಮಹಾರಾಷ್ಟ್ರದ ಸೊಲ್ಲಾಪುರ, ಆಂಧ್ರ ಪ್ರದೇಶದಲ್ಲೂ ಮಾರಾಟವಾಗುತ್ತವೆ.<br>ಎಂದಿನಂತೆ ಈ ವರ್ಷವೂ ಲಕ್ಷಾಂತರ ಹಣತೆಗಳು ಇಲ್ಲಿ ಸಿದ್ಧವಾಗಿವೆ. ರಾಜ್ಯ ಮತ್ತು ಹೊರ ರಾಜ್ಯಗಳ ಮನೆ–ಮನಗಳನ್ನು ಬೆಳಗಲು ಸಜ್ಜಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಚಿತ್ರಗಳು: ತಾಜುದ್ದೀನ್ ಆಜಾದ್ </blockquote>.<p>ಕಲಬುರಗಿ ಜಿಲ್ಲೆಯ ಮೇಳಕುಂದಾ ಕೆ. ಗ್ರಾಮಕ್ಕೆ ಭೇಟಿ ಕೊಟ್ಟಾಗ ವೈವಿಧ್ಯಮಯ ವಿನ್ಯಾಸದ ಹಣತೆಗಳು ಸ್ವಾಗತ ಕೋರಿದಂತೆ ಭಾಸವಾಯಿತು. ಅಲ್ಲಿ ಒಂದಕ್ಕಿಂತ ಮತ್ತೊಂದು ಹಣತೆ ಆಕರ್ಷಕ, ಅತ್ಯಾಕರ್ಷಕ.</p>.<p>ಈ ಊರಲ್ಲಿ ಮೂವತ್ತಕ್ಕೂ ಅಧಿಕ ಕುಟುಂಬಗಳು ಕುಂಬಾರಿಕೆಯಲ್ಲಿ ತೊಡಗಿವೆ. ಇವರೆಲ್ಲರೂ ಮರಾಠ ಕುಂಬಾರರು. ವರ್ಷವಿಡೀ ಇದೇ ಕಾಯಕ. ಇದರಲ್ಲಿ ಕೈಗೆ ಸಿಗುವ ದುಡಿಮೆಯಲ್ಲೇ ಬದುಕಿನ ಬಂಡಿ ಸಾಗುತ್ತಿದೆ.</p>.<p>ಊರಿನ ಹೃದಯಭಾಗದಲ್ಲೇ ವಾಸವಿರುವ ಈ ಕುಟುಂಬಗಳು ಮಣ್ಣಿನಲ್ಲಿ ಹಣತೆಗಳು, ಮತ್ತಿತರ ಕಲಾಕೃತಿಗಳಿಗೆ ಜೀವ ಕೊಡುತ್ತ, ತಮ್ಮ ಜೀವನವನ್ನೂ ಕಟ್ಟಿಕೊಂಡಿವೆ. ಒಂದಲ್ಲ, ಎರಡಲ್ಲ, ಹತ್ತಾರು ಬಗೆಯ ಹಣತೆಗಳು ಇಲ್ಲಿ ರೂಪ ಪಡೆಯುತ್ತಿವೆ. ಹಣತೆಗಳು ಮಾತ್ರವಲ್ಲ; ಮಣ್ಣಿನ ತಟ್ಟೆಗಳು, ಮಣ್ಣಿನಮೂರ್ತಿಗಳನ್ನೂ ಮಾಡಲಾಗುತ್ತದೆ.</p>.<p>ಇದು ಫ್ಯಾಷನ್ ಯುಗ. ಈ ಕಾಲಘಟ್ಟದಲ್ಲಿ ಕುಂಬಾರಿಕೆ ನೇಪಥ್ಯಕ್ಕೆ ಸರಿಯುತ್ತಿದೆ ಎನ್ನುವುದು ಅಲ್ಲಗಳೆಯಲಾಗದ ಮಾತು. ಹೀಗಿದ್ದರೂ ಅನೇಕ ಸವಾಲುಗಳ ಮಧ್ಯೆಯೂ <br>ಈ ಕುಟುಂಬಗಳು ತಮ್ಮ ಕುಲಕಸುಬು ಮುಂದುವರಿಸಿಕೊಂಡು ಹೊರಟಿವೆ. ಈ ವೃತ್ತಿ ಮಾಡುವವರಲ್ಲಿ ಪುರುಷರಷ್ಟೇ ಅಲ್ಲ; ಮಕ್ಕಳು, ಮಹಿಳೆಯರು ಮತ್ತು ಹಿರಿಯರೂ ಕಾಣಸಿಗುತ್ತಾರೆ. </p>.<p>ಇಲ್ಲಿ ಜೀವತಳೆದ ಮಣ್ಣಿನ ಹಣತೆಗಳು ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳು ಅಲ್ಲದೆ ಮಹಾರಾಷ್ಟ್ರದ ಸೊಲ್ಲಾಪುರ, ಆಂಧ್ರ ಪ್ರದೇಶದಲ್ಲೂ ಮಾರಾಟವಾಗುತ್ತವೆ.<br>ಎಂದಿನಂತೆ ಈ ವರ್ಷವೂ ಲಕ್ಷಾಂತರ ಹಣತೆಗಳು ಇಲ್ಲಿ ಸಿದ್ಧವಾಗಿವೆ. ರಾಜ್ಯ ಮತ್ತು ಹೊರ ರಾಜ್ಯಗಳ ಮನೆ–ಮನಗಳನ್ನು ಬೆಳಗಲು ಸಜ್ಜಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>