<p><strong>ನೋವ್ಗರ</strong></p>.<p>ನೋವ್ಗರ (ನಾ). ನೋವಿನ ವಿಷ</p><p>ಇಂದ್ರಜಿತು ಮರಣ ಹೊಂದಲು ಪತ್ನಿ ತಾರಾಕ್ಷಿ ಅಗ್ನಿ ಪ್ರವೇಶ ಮಾಡಲು ನಿಶ್ಚಯಿಸುವಳು. ಅದನ್ನು ಕೇಳಿ ಅಲ್ಲಿಗೆ ಬಂದ ರಾವಣನನ್ನು ಕುರಿತು ಅನಲೆ ಹೇಳುವ ಮಾತಿನ ಸಂದರ್ಭದಲ್ಲಿ ಕುವೆಂಪು ‘ನೋವ್ಗರ’ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ.</p>.<p>‘ಸಖೀ,</p><p>ಮಾವನದೊ! ಸುತನ ಸಾವಿನ ಸಿಡಿಲ್ ಬಡಿದುಸಿರ್</p><p>ಕಟ್ಟಿದೋಲುಸಿಕನಿರ್ಪನ್, ನಿನ್ನ ನೋವ್ಗರಂ</p><p>ತನಗೆರಗಿದಂತೆ!’ </p>.<p><strong>ಗೆಲ್ವೆಣ್ಣು</strong></p>.<p>ಗೆಲ್ವೆಣ್ಣು (ನಾ). ಜಯವನಿತೆ</p><p>ಯುದ್ಧರಂಗದಲ್ಲಿ ಸ್ನೇಹಿತರಾದ ವಹ್ನಿ ಮತ್ತು ರಂಹರು ಪರಸ್ಪರ ಮಾತನಾಡುತ್ತಿರುತ್ತಾರೆ. ‘ಇಂದು ಏಕೆ ನಮ್ಮವರ ಕೈ ಸೋಲುತ್ತಿದೆ?’ ಎಂಬ ವಹ್ನಿಯ ಪ್ರಶ್ನೆಗೆ ರಂಹ ನೀಡುವ ಉತ್ತರದಲ್ಲಿ ಕುವೆಂಪು ‘ಗೆಲ್ವೆಣ್ಣು’ ಪದರೂಪಿಸಿ ಹೀಗೆ ಪ್ರಯೋಗಿಸಿದ್ದಾರೆ:</p>.<p>‘ಸೋಲೊಮ್ಮೆ ಗೆಲುವೊಮ್ಮೆ, ಗೆಲ್ವೆಣ್ಣಿಗದೆ ಹೆಮ್ಮೆ!’ </p>.<p><strong>ಗೂಬೆಗತ್ತಲು</strong></p>.<p>ಗೂಬೆಗತ್ತಲು (ನಾ). ಗೂಬೆಗಳಿಗೆ ಹಿತವಾಗಿರುವ ಕತ್ತಲು; ಕಗ್ಗತ್ತಲು</p><p>ರಾವಣನು ನಡುರಾತ್ರಿ ಮಹಾದುರ್ಗೆಯ ಧ್ಯಾನದಲ್ಲಿದ್ದಾಗ ಮನೋಮಯ ಸಮಾಧಿಗೆ ಒಳಗಾಗುವನು. ಆ ಕನಸಿನಲ್ಲಿ ಧಾನ್ಯಮಾಲಿಯನ್ನು ಕಂಡು ಪ್ರಶ್ನಿಸುವ ನುಡಿಯಲ್ಲಿ ಕುವೆಂಪು ಅವರು ‘ಗೂಬೆಗತ್ತಲು’ ಪದರಚಿಸಿ ಹೀಗೆ ಪ್ರಯೋಗಿಸಿದ್ದಾರೆ.</p>.<p>‘ಅದಾರಲ್ಲಿ?</p><p>ಧಾನ್ಯಮಾಲಿನಿ! ಅದೇಕಿಲ್ಲಿ ನೀನೀ ಪಾಳು</p><p>ದೇಗುಲದಿ? ಏನ್ಗೆಯ್ವೆಯೀ ಗೂಬೆಗತ್ತಲೊಳ್</p><p>ನೀನೋರ್ವಳೆಯೆ, ಪ್ರಿಯೆ?’ </p>.<p><strong>ಈ ಅಂಕಣ ಇಲ್ಲಿಗೆ ಮುಗಿಯಿತು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೋವ್ಗರ</strong></p>.<p>ನೋವ್ಗರ (ನಾ). ನೋವಿನ ವಿಷ</p><p>ಇಂದ್ರಜಿತು ಮರಣ ಹೊಂದಲು ಪತ್ನಿ ತಾರಾಕ್ಷಿ ಅಗ್ನಿ ಪ್ರವೇಶ ಮಾಡಲು ನಿಶ್ಚಯಿಸುವಳು. ಅದನ್ನು ಕೇಳಿ ಅಲ್ಲಿಗೆ ಬಂದ ರಾವಣನನ್ನು ಕುರಿತು ಅನಲೆ ಹೇಳುವ ಮಾತಿನ ಸಂದರ್ಭದಲ್ಲಿ ಕುವೆಂಪು ‘ನೋವ್ಗರ’ ಪದವನ್ನು ಹೀಗೆ ಪ್ರಯೋಗಿಸಿದ್ದಾರೆ.</p>.<p>‘ಸಖೀ,</p><p>ಮಾವನದೊ! ಸುತನ ಸಾವಿನ ಸಿಡಿಲ್ ಬಡಿದುಸಿರ್</p><p>ಕಟ್ಟಿದೋಲುಸಿಕನಿರ್ಪನ್, ನಿನ್ನ ನೋವ್ಗರಂ</p><p>ತನಗೆರಗಿದಂತೆ!’ </p>.<p><strong>ಗೆಲ್ವೆಣ್ಣು</strong></p>.<p>ಗೆಲ್ವೆಣ್ಣು (ನಾ). ಜಯವನಿತೆ</p><p>ಯುದ್ಧರಂಗದಲ್ಲಿ ಸ್ನೇಹಿತರಾದ ವಹ್ನಿ ಮತ್ತು ರಂಹರು ಪರಸ್ಪರ ಮಾತನಾಡುತ್ತಿರುತ್ತಾರೆ. ‘ಇಂದು ಏಕೆ ನಮ್ಮವರ ಕೈ ಸೋಲುತ್ತಿದೆ?’ ಎಂಬ ವಹ್ನಿಯ ಪ್ರಶ್ನೆಗೆ ರಂಹ ನೀಡುವ ಉತ್ತರದಲ್ಲಿ ಕುವೆಂಪು ‘ಗೆಲ್ವೆಣ್ಣು’ ಪದರೂಪಿಸಿ ಹೀಗೆ ಪ್ರಯೋಗಿಸಿದ್ದಾರೆ:</p>.<p>‘ಸೋಲೊಮ್ಮೆ ಗೆಲುವೊಮ್ಮೆ, ಗೆಲ್ವೆಣ್ಣಿಗದೆ ಹೆಮ್ಮೆ!’ </p>.<p><strong>ಗೂಬೆಗತ್ತಲು</strong></p>.<p>ಗೂಬೆಗತ್ತಲು (ನಾ). ಗೂಬೆಗಳಿಗೆ ಹಿತವಾಗಿರುವ ಕತ್ತಲು; ಕಗ್ಗತ್ತಲು</p><p>ರಾವಣನು ನಡುರಾತ್ರಿ ಮಹಾದುರ್ಗೆಯ ಧ್ಯಾನದಲ್ಲಿದ್ದಾಗ ಮನೋಮಯ ಸಮಾಧಿಗೆ ಒಳಗಾಗುವನು. ಆ ಕನಸಿನಲ್ಲಿ ಧಾನ್ಯಮಾಲಿಯನ್ನು ಕಂಡು ಪ್ರಶ್ನಿಸುವ ನುಡಿಯಲ್ಲಿ ಕುವೆಂಪು ಅವರು ‘ಗೂಬೆಗತ್ತಲು’ ಪದರಚಿಸಿ ಹೀಗೆ ಪ್ರಯೋಗಿಸಿದ್ದಾರೆ.</p>.<p>‘ಅದಾರಲ್ಲಿ?</p><p>ಧಾನ್ಯಮಾಲಿನಿ! ಅದೇಕಿಲ್ಲಿ ನೀನೀ ಪಾಳು</p><p>ದೇಗುಲದಿ? ಏನ್ಗೆಯ್ವೆಯೀ ಗೂಬೆಗತ್ತಲೊಳ್</p><p>ನೀನೋರ್ವಳೆಯೆ, ಪ್ರಿಯೆ?’ </p>.<p><strong>ಈ ಅಂಕಣ ಇಲ್ಲಿಗೆ ಮುಗಿಯಿತು.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>