<p><strong>೧</strong></p>.<p><span style="font-size:48px;">ನಾ</span><br /> ಸತ್ತ ಮೇಲೆ ಸಾವು ಕೊನೆಯೇ?<br /> ಸೇರಿ ಬರುವೆ ಬಯಲು<br /> ನನ್ನ ಶವವೇನಾಗಬೇಕೆಂದು ಬರೆಯುವೆ ಉಯಿಲು<br /> ದೇಹದಾನದ ವರದಲಾಗುವೆ ರೋಗಸವಾಲು</p>.<p>ತಜ್ಞರ ಹುಡುಕಾಟದಲ್ಲಿ ರೋಗ ಸೆಲೆಯ ತಿಣುಕಾಟವಿರಲಿ<br /> ವೈದ್ಯರ ಪ್ರಯತ್ನದಲ್ಲಿ ವಿಜ್ಞಾನದ ಯತ್ನವಿರಲಿ<br /> ವಿದ್ಯಾರ್ಥಿ ಹೊಸ ಹುಡುಕಾಟಕ್ಕೂ ಕೊಡುವೆ ಫಲದ ಫಸಲನು</p>.<p>ರೋಗಮೂಲ ನಾಶವಾಗಿ, ಜೀವಮೂಲ ಆತ್ಮವಾಗಿ<br /> ಎಲುಬಿನ ಗೂಡಲೂ ರೋಗದಂಟಿನ ಗಂಟಿದೆ<br /> ನಶ್ವರ ಶರೀರದಲ್ಲೂ ಬದುಕುವಾಸೆ ಚಿಗುರದೇ?</p>.<p>ಆದರೂ ನಾ ಶವ<br /> ಶವವಾದರೂ ಬಯಸೆ ನಾಶವ</p>.<p><strong>೨</strong></p>.<p>ಸಾವಿನಾಚೆ ಆತ್ಮದಾಚೆ, ಜ್ಞಾನವೆಂಬ ದಿಗಂತದಾಚೆ<br /> ವಿಜ್ಞಾನದ ವ್ಯೋಮದಲ್ಲಿ ಈಜು ಹೊಡೆಯುವೆ<br /> ಧೂಮವಲಯದ ಯಮದಲ್ಲಿ, ಮಲಮೂತ್ರದ ಮಜ್ಜನದಲಿ<br /> ಅಣು ಅಣುವಿನ ಕಣದಲ್ಲೂ ಕಣಾದವಾಗುವೆ<br /> ಅಯಾನಿನ ನಿಧನಿಧಾನದ ಯಾನದ ಗುಂಟ<br /> ಚಲನವಲನದ ರುಜುವಾತಾಗಿ<br /> ಋಣಧನ ವಿದ್ಯುತ್ತಿನಲ್ಲೂ ಶಕ್ತಿ ತುಂಬುವೆ<br /> ಜೀವ ಸಂಕುಲದ ಸೆಲೆಯಾಗಿ ಬದುಕಬಯಸುವೆ<br /> ಆದರೂ ನಾ ಶವ<br /> ಶವವಾದರೂ ಬಯಸೆ ನಾಶವ</p>.<p><strong>೩</strong></p>.<p>ವಾದ ಸಂವಾದದಲಿ ಸಂಬಂಧದ ಸೂತ್ರ ಹಿಡಿದು<br /> ನಾದಬಿಂದು ಕಲಾತೀತ ಜೀವ ಬಂದು ಕಳಾತೀತ<br /> ಅಣು ಅಣುವಿನ ಯಾನದ ರಸಾಯನ<br /> ಕೊಳೆತ ಕೊಳೆ ತೊಳೆವ ಜೀವ ಪಾವನ</p>.<p>ಬದುಕು ವಾಂಛೆಯಲಿ ಸಂಚರಿಸಿ<br /> ಹೊಳೆವ ಬೆಳಕೇ ಮಿಂಚಾಗಿ<br /> ಕಣ ಕಣದ ನಾದದಲ್ಲೂ ಕಣಾದನ ಸಂದೇಶ ಸಾರುವೆ</p>.<p>ಅಲ್ಲಿ ಇಲ್ಲಿ ಎಲ್ಲೆಲ್ಲೂ,<br /> ಕಂಡಲ್ಲಿ ಕಾಣದಲ್ಲಿ ಅಂಡಾಂಡ ಪಿಂಡವಾಗಿ<br /> ಜಗದ ಸಿರಿಯ ರೂಪದಲ್ಲಿ, ನೆಲದನಲದ ಉಸಿರಾಗಿ<br /> ಹಸಿರ ಸಿರಿಯ ಕಣ್ಣೋಟದಲ್ಲಿ, ಬೀಜ ಬಸಿರ ಬಿಸುಪಾಗಿ<br /> ವಾದವಿರಲಿ ವಿವಾದವಿರಲಿ, ಬದುಕ ಪಸೆ ಇದೆ ಜೀವದಲ್ಲಿ<br /> ಸಸ್ಯ ಬುಡದ ಬೇರಲ್ಲಿ ಅಂತರಾಳವಾಗುವೆ<br /> ನೀರಿನಾಳದ ದಾರಿಗುಂಟ ಹರಿಯುವೆ</p>.<p>ಕೊಂಬೆ ರೆಂಬೆ ಮೊಗ್ಗಾಗಿ, ಹೂವ ಮಕರಂದ ಸಿಹಿಯಾಗಿ<br /> ದುಂಬಿಗಮೃತವಾಗಿ ಬದುಕುವೆ, ಅಮರತ್ವದ ಸಂದೇಶ ಸಾರುವೆ<br /> ಆದರೂ ನಾ ಶವ<br /> ಶವವಾದರೂ ಬಯಸೆ ನಾಶವ</p>.<p><strong>೪</strong></p>.<p>ಶಿವಶಿವೆಯರ ವಾದದಲ್ಲಿ ಬುದ್ಧನ ಮೌನ ಮಾತಾಗಿ<br /> ಬಸವ ಕಾಯಕ ತತ್ವದಲಿ, ಅಲ್ಲಮನ ಜ್ಞಾನವಾಗಿ<br /> ಮಾರ್ಕ್ಸ್ನ ಸಮತೆಯಲ್ಲಿ ಮನದ ಮಲ್ಲಿಕಾರ್ಜುನನಾಗಿ<br /> ಮಾತಾಗಿ ಕಥೆಯಾಗಿ ಕತೆಯ ಹೇಳುವೆ<br /> ಕೇಳುಗರಿದ್ದಲ್ಲಿಗೆ ಬದುಕಿ ಬರುವೆನಿಲ್ಲಿಗೆ</p>.<p>ಇಹಲೋಕದ ಸ್ವರ್ಗ ಚಂದ<br /> ಇದೇ ಅಂದ ಇದೇ ಚಂದ<br /> ಇದಕೆ ಮಿಗಿಲು ಯಾವುದೆಂದು<br /> ಕೈಲಾಸವೇ ಇಲ್ಲಿದೆಯೆಂದು</p>.<p>ಬದುಕಿ ಬರುವೆನಿಲ್ಲಿಗೆ ಕೇಳುಗರಿದ್ದಲ್ಲಿಗೆ<br /> ಆದರೂ ನಾ ಶವ<br /> ಶವವಾದರೂ ಬಯಸೆ ನಾಶವ<br /> <strong>–ಶಂಕರಯ್ಯ ಆರ್. ಘಂಟಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>೧</strong></p>.<p><span style="font-size:48px;">ನಾ</span><br /> ಸತ್ತ ಮೇಲೆ ಸಾವು ಕೊನೆಯೇ?<br /> ಸೇರಿ ಬರುವೆ ಬಯಲು<br /> ನನ್ನ ಶವವೇನಾಗಬೇಕೆಂದು ಬರೆಯುವೆ ಉಯಿಲು<br /> ದೇಹದಾನದ ವರದಲಾಗುವೆ ರೋಗಸವಾಲು</p>.<p>ತಜ್ಞರ ಹುಡುಕಾಟದಲ್ಲಿ ರೋಗ ಸೆಲೆಯ ತಿಣುಕಾಟವಿರಲಿ<br /> ವೈದ್ಯರ ಪ್ರಯತ್ನದಲ್ಲಿ ವಿಜ್ಞಾನದ ಯತ್ನವಿರಲಿ<br /> ವಿದ್ಯಾರ್ಥಿ ಹೊಸ ಹುಡುಕಾಟಕ್ಕೂ ಕೊಡುವೆ ಫಲದ ಫಸಲನು</p>.<p>ರೋಗಮೂಲ ನಾಶವಾಗಿ, ಜೀವಮೂಲ ಆತ್ಮವಾಗಿ<br /> ಎಲುಬಿನ ಗೂಡಲೂ ರೋಗದಂಟಿನ ಗಂಟಿದೆ<br /> ನಶ್ವರ ಶರೀರದಲ್ಲೂ ಬದುಕುವಾಸೆ ಚಿಗುರದೇ?</p>.<p>ಆದರೂ ನಾ ಶವ<br /> ಶವವಾದರೂ ಬಯಸೆ ನಾಶವ</p>.<p><strong>೨</strong></p>.<p>ಸಾವಿನಾಚೆ ಆತ್ಮದಾಚೆ, ಜ್ಞಾನವೆಂಬ ದಿಗಂತದಾಚೆ<br /> ವಿಜ್ಞಾನದ ವ್ಯೋಮದಲ್ಲಿ ಈಜು ಹೊಡೆಯುವೆ<br /> ಧೂಮವಲಯದ ಯಮದಲ್ಲಿ, ಮಲಮೂತ್ರದ ಮಜ್ಜನದಲಿ<br /> ಅಣು ಅಣುವಿನ ಕಣದಲ್ಲೂ ಕಣಾದವಾಗುವೆ<br /> ಅಯಾನಿನ ನಿಧನಿಧಾನದ ಯಾನದ ಗುಂಟ<br /> ಚಲನವಲನದ ರುಜುವಾತಾಗಿ<br /> ಋಣಧನ ವಿದ್ಯುತ್ತಿನಲ್ಲೂ ಶಕ್ತಿ ತುಂಬುವೆ<br /> ಜೀವ ಸಂಕುಲದ ಸೆಲೆಯಾಗಿ ಬದುಕಬಯಸುವೆ<br /> ಆದರೂ ನಾ ಶವ<br /> ಶವವಾದರೂ ಬಯಸೆ ನಾಶವ</p>.<p><strong>೩</strong></p>.<p>ವಾದ ಸಂವಾದದಲಿ ಸಂಬಂಧದ ಸೂತ್ರ ಹಿಡಿದು<br /> ನಾದಬಿಂದು ಕಲಾತೀತ ಜೀವ ಬಂದು ಕಳಾತೀತ<br /> ಅಣು ಅಣುವಿನ ಯಾನದ ರಸಾಯನ<br /> ಕೊಳೆತ ಕೊಳೆ ತೊಳೆವ ಜೀವ ಪಾವನ</p>.<p>ಬದುಕು ವಾಂಛೆಯಲಿ ಸಂಚರಿಸಿ<br /> ಹೊಳೆವ ಬೆಳಕೇ ಮಿಂಚಾಗಿ<br /> ಕಣ ಕಣದ ನಾದದಲ್ಲೂ ಕಣಾದನ ಸಂದೇಶ ಸಾರುವೆ</p>.<p>ಅಲ್ಲಿ ಇಲ್ಲಿ ಎಲ್ಲೆಲ್ಲೂ,<br /> ಕಂಡಲ್ಲಿ ಕಾಣದಲ್ಲಿ ಅಂಡಾಂಡ ಪಿಂಡವಾಗಿ<br /> ಜಗದ ಸಿರಿಯ ರೂಪದಲ್ಲಿ, ನೆಲದನಲದ ಉಸಿರಾಗಿ<br /> ಹಸಿರ ಸಿರಿಯ ಕಣ್ಣೋಟದಲ್ಲಿ, ಬೀಜ ಬಸಿರ ಬಿಸುಪಾಗಿ<br /> ವಾದವಿರಲಿ ವಿವಾದವಿರಲಿ, ಬದುಕ ಪಸೆ ಇದೆ ಜೀವದಲ್ಲಿ<br /> ಸಸ್ಯ ಬುಡದ ಬೇರಲ್ಲಿ ಅಂತರಾಳವಾಗುವೆ<br /> ನೀರಿನಾಳದ ದಾರಿಗುಂಟ ಹರಿಯುವೆ</p>.<p>ಕೊಂಬೆ ರೆಂಬೆ ಮೊಗ್ಗಾಗಿ, ಹೂವ ಮಕರಂದ ಸಿಹಿಯಾಗಿ<br /> ದುಂಬಿಗಮೃತವಾಗಿ ಬದುಕುವೆ, ಅಮರತ್ವದ ಸಂದೇಶ ಸಾರುವೆ<br /> ಆದರೂ ನಾ ಶವ<br /> ಶವವಾದರೂ ಬಯಸೆ ನಾಶವ</p>.<p><strong>೪</strong></p>.<p>ಶಿವಶಿವೆಯರ ವಾದದಲ್ಲಿ ಬುದ್ಧನ ಮೌನ ಮಾತಾಗಿ<br /> ಬಸವ ಕಾಯಕ ತತ್ವದಲಿ, ಅಲ್ಲಮನ ಜ್ಞಾನವಾಗಿ<br /> ಮಾರ್ಕ್ಸ್ನ ಸಮತೆಯಲ್ಲಿ ಮನದ ಮಲ್ಲಿಕಾರ್ಜುನನಾಗಿ<br /> ಮಾತಾಗಿ ಕಥೆಯಾಗಿ ಕತೆಯ ಹೇಳುವೆ<br /> ಕೇಳುಗರಿದ್ದಲ್ಲಿಗೆ ಬದುಕಿ ಬರುವೆನಿಲ್ಲಿಗೆ</p>.<p>ಇಹಲೋಕದ ಸ್ವರ್ಗ ಚಂದ<br /> ಇದೇ ಅಂದ ಇದೇ ಚಂದ<br /> ಇದಕೆ ಮಿಗಿಲು ಯಾವುದೆಂದು<br /> ಕೈಲಾಸವೇ ಇಲ್ಲಿದೆಯೆಂದು</p>.<p>ಬದುಕಿ ಬರುವೆನಿಲ್ಲಿಗೆ ಕೇಳುಗರಿದ್ದಲ್ಲಿಗೆ<br /> ಆದರೂ ನಾ ಶವ<br /> ಶವವಾದರೂ ಬಯಸೆ ನಾಶವ<br /> <strong>–ಶಂಕರಯ್ಯ ಆರ್. ಘಂಟಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>