<p><strong>ಬೆಂಗಳೂರು</strong>: ಕರ್ನಾಟಕ ಹಾಕಿ ಕ್ರೀಡೆಯ ವಲಯದಲ್ಲಿ ಚಿರಪರಿಚಿತ ತರಬೇತುದಾರರಾಗಿದ್ದ ಎ.ಇ. ಬ್ರಿಂಟ್ ಗುರುವಾರ ಬೆಳಿಗ್ಗೆ ಹೃದಯಸ್ತಂಭನದಿಂದ ನಿಧನರಾದರು. </p>.<p>1970–80ರ ಅವಧಿಯಲ್ಲಿ ಕರ್ನಾಟಕ ಹಾಕಿ ತಂಡದ ಪ್ರಮುಖ ಆಟಗಾರರಾಗಿದ್ದರು. ನಿವೃತ್ತಿಯ ನಂತರ ಅವರು ಭಾರತ ಜೂನಿಯರ್ ಪುರುಷರ ತಂಡ ಹಾಗೂ ಸೀನಿಯರ್ ಮಹಿಳಾ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.</p>.<p>‘2001ರಲ್ಲಿ ಸಬ್ ಜೂನಿಯರ್ ಏಷ್ಯಾ ಕಪ್ ಗೆದ್ದ ಭಾರತ ತಂಡಕ್ಕೆ ಬ್ರಿಂಟ್ ಅವರು ಸಹಾಯಕ ಕೋಚ್ ಆಗಿದ್ದರು’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ. </p>.<p>ರಾಷ್ಟ್ರೀಯ ತಂಡದಿಂದ ಮರಳಿದ ನಂತರ ಅವರು ಬೆಂಗಳೂರಿನಲ್ಲಿ ರಾಜ್ಯ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದರು.</p>.<p>‘ಬ್ರಿಂಟ್ ಅವರಿಗೆ ಹಾಕಿ ಕ್ರೀಡೆಯೇ ಸರ್ವಸ್ವವಾಗಿತ್ತು. ಏನೇ ಆಗಲಿ ಪ್ರತಿದಿನ ಮುಂಜಾನೆ 5.30ಕ್ಕೆ ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ ಹಾಜರಾಗಿರುತ್ತಿದ್ದರು. ಮಕ್ಕಳಿಗೆ ಹಾಕಿ ಆಟದ ಮಾರ್ಗದರ್ಶನ ನೀಡುತ್ತಿದ್ದರು’ ಎಂದು ಕೆಎಸ್ಎಚ್ಎ ಪದಾಧಿಕಾರಿ ಕೆ. ಕೃಷ್ಣಮೂರ್ತಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ಹಾಕಿ ಕ್ರೀಡೆಯ ವಲಯದಲ್ಲಿ ಚಿರಪರಿಚಿತ ತರಬೇತುದಾರರಾಗಿದ್ದ ಎ.ಇ. ಬ್ರಿಂಟ್ ಗುರುವಾರ ಬೆಳಿಗ್ಗೆ ಹೃದಯಸ್ತಂಭನದಿಂದ ನಿಧನರಾದರು. </p>.<p>1970–80ರ ಅವಧಿಯಲ್ಲಿ ಕರ್ನಾಟಕ ಹಾಕಿ ತಂಡದ ಪ್ರಮುಖ ಆಟಗಾರರಾಗಿದ್ದರು. ನಿವೃತ್ತಿಯ ನಂತರ ಅವರು ಭಾರತ ಜೂನಿಯರ್ ಪುರುಷರ ತಂಡ ಹಾಗೂ ಸೀನಿಯರ್ ಮಹಿಳಾ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.</p>.<p>‘2001ರಲ್ಲಿ ಸಬ್ ಜೂನಿಯರ್ ಏಷ್ಯಾ ಕಪ್ ಗೆದ್ದ ಭಾರತ ತಂಡಕ್ಕೆ ಬ್ರಿಂಟ್ ಅವರು ಸಹಾಯಕ ಕೋಚ್ ಆಗಿದ್ದರು’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ. </p>.<p>ರಾಷ್ಟ್ರೀಯ ತಂಡದಿಂದ ಮರಳಿದ ನಂತರ ಅವರು ಬೆಂಗಳೂರಿನಲ್ಲಿ ರಾಜ್ಯ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದರು.</p>.<p>‘ಬ್ರಿಂಟ್ ಅವರಿಗೆ ಹಾಕಿ ಕ್ರೀಡೆಯೇ ಸರ್ವಸ್ವವಾಗಿತ್ತು. ಏನೇ ಆಗಲಿ ಪ್ರತಿದಿನ ಮುಂಜಾನೆ 5.30ಕ್ಕೆ ಶಾಂತಿನಗರದ ಹಾಕಿ ಕ್ರೀಡಾಂಗಣದಲ್ಲಿ ಹಾಜರಾಗಿರುತ್ತಿದ್ದರು. ಮಕ್ಕಳಿಗೆ ಹಾಕಿ ಆಟದ ಮಾರ್ಗದರ್ಶನ ನೀಡುತ್ತಿದ್ದರು’ ಎಂದು ಕೆಎಸ್ಎಚ್ಎ ಪದಾಧಿಕಾರಿ ಕೆ. ಕೃಷ್ಣಮೂರ್ತಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>