ಹಳೆಗನ್ನಡ ಸಾಹಿತ್ಯದ ಮಣಿಗಳನ್ನು ಒಂದು ಹಾರವಾಗಿ ಪೋಣಿಸುವ ಕೆಲಸ ಮಾಡಿರುವ ಶ್ರೀಮತಿಯವರು, ಸಾಹಿತ್ಯದ ಹಲವು ಮಹತ್ವದ ವಿಷಯಗಳನ್ನು ಚರ್ಚೆ ಮಾಡುತ್ತಾರೆ. ಅಧ್ಯಯನದ ದೃಷ್ಟಿಯಿಂದ ಕನ್ನಡದ ಸಾಹಿತ್ಯೋದಯ, ಪಂಪಪೂರ್ವಯುಗ, ಪಂಪಯುಗ, ಬಸವಯುಗ ಮತ್ತು ಕುಮಾರವ್ಯಾಸ ಯುಗ ಎಂದು ವಿಭಾಗ ಮಾಡಲಾಗಿದ್ದು, ಆಯಾ ಕಾಲಘಟ್ಟದ ಮಹತ್ವದ ಕವಿಗಳ ಕುರಿತು ಮಾಹಿತಿ ನೀಡಲಾಗಿದೆ. ಜನಪದ ಕಾವ್ಯದ ಸೆಳಕುಗಳು ಸಹ ಈ ಕೃತಿಯಲ್ಲಿವೆ.