ವಿಮಾನ ಹಾರುವ ಮೊದಲಿನ ತಯಾರಿಯಿಂದ ಹಿಡಿದು, ವಿಮಾನಗಳ ಅಂಗವಿಜ್ಞಾನ, ಬಾನಾಡಿಗಳ ರೆಕ್ಕೆ ಕಟ್ಟುವ ಊರುಗಳ ಇತಿಹಾಸ, ವಿಮಾನ ನಿಲ್ದಾಣಗಳಲ್ಲಿನ ವಿಧಿವಿಧಾನಗಳು, ಅಪಘಾತಗಳು, ವಿಮಾನ ಹಾರಾಟದಿಂದ ಹಸಿರು ಹೋರಾಟದಂತಹ ಅಧ್ಯಯನಗಳ ಮಾಹಿತಿಯೂ ಇದರಲ್ಲಿದೆ. ಮಂಗಳೂರು ವಿಮಾನ ಅಪಘಾತದ ಮರುಓದು ಆಸಕ್ತಿಕರವಾಗಿದೆ. ಲೋಹದ ಹಕ್ಕಿಗಳ ಕುರಿತು ಕುತೂಹಲ ಹೊಂದಿರುವವರು ಮತ್ತು ವಾಯುಬಲ ವಿಜ್ಞಾನದಲ್ಲಿ ಆಸಕ್ತಿ ಹೊಂದಿದವರಿಗೆ ಇದೊಂದು ಮಾಹಿತಿಪೂರ್ಣ ಕೃತಿ.
***
ಏರೋ ಪುರಾಣಲೇ: ಯೋಗೀಂದ್ರ ಮರವಂತೆ
ಪ್ರ: ಪ್ರಿಸಮ್ ಬುಕ್ಸ್ ಪ್ರೈ ಲಿ.
ಪು: 128ಬೆಲೆ: ₹195ಸಂ: 080–26714108