‘ಶಿಕ್ಷಣ ತಜ್ಞರು ಕೇವಲ ಅಕಾಡೆಮಿಕ್ ಶಿಸ್ತಿನಲ್ಲಿ ಶಿಕ್ಷಣದ ಬಗ್ಗೆ ಮಾತನಾಡಿದರೆ ಸಾಲದು. ಅದು ಬಹುಮುಖೀ ಸಮಾಜಗಳನ್ನು ಒಳಗೊಂಡ ಪರಿಜ್ಞಾನದಲ್ಲಿ ಶಿಕ್ಷಣದ ಅನುಷ್ಠಾನದ ಬಗ್ಗೆ ಯೋಚಿಸಬೇಕು ಎಂಬ ಹೊಣೆಗಾರಿಕೆಯಲ್ಲಿ ಶ್ರೀಪಾದರವರು ಬರಹಕ್ಕೆ ತೊಡಗಿದ್ದಾರೆ... ಇಡೀ ಪುಸ್ತಕ ಮಾಹಿತಿಗಳ ವರದಿ ನಿರೂಪಣೆಯಾಗಿಲ್ಲ; ಯಾವುದೇ ಆಡಳಿತಗಾರರಿಗೆ, ಆಳುವ ಪಕ್ಷಗಳಿಗೆ ಮಾರ್ಗದರ್ಶಿ ಕೈಪಿಡಿಯಂತಿದೆ’ ಎಂದು ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರು ಕೃತಿಯ ಕುರಿತು ಬರೆದಿದ್ದಾರೆ. ಅವರ ಈ ಮಾತಿಗೆ ಪುಷ್ಟಿ ಕೊಡುವ ಅಸಂಖ್ಯ ಮಾಹಿತಿ ಪುಸ್ತಕದಲ್ಲಿ ಇದೆ.