‘ಇಂದು ಹರಿಲಾಲರ ಹೆಸರು ಯಾರಿಗಾದರೂ ನೆನಪಿದ್ದರೆ ಅದು ಬಹುಶಃ ಅವರ ಅದೃಷ್ಟವೇ ಸರಿ! ರಾಜಾಜಿ ಮತ್ತು ಕಿಶೋರಿಲಾಲರ ಮಾತಿರಲಿ, ಜನ ಬಾಪೂರವರನ್ನೂ ಮರೆತಿದ್ದಾರೆ’ ಎಂದು ದಿನಕರ್ ಜೋಶಿಯವರು ಮುನ್ನುಡಿಯಲ್ಲಿ ಉಲ್ಲೇಖಿಸುತ್ತಾರೆ. ‘ಹರಿಲಾಲರ ಬಗ್ಗೆ ಗ್ರಂಥಗಳಲ್ಲಿ ಅಥವಾ ಬೇರೆ ಕಡೆಗಳಿಂದ ಸಿಕ್ಕ ಸಾಮಾಗ್ರಿಗಳಲ್ಲಿ ನಿರಂತರತೆಯ ಕೊರತೆಯಿದೆ. ಎಲ್ಲ ವಿವರಗಳೂ ಅಸ್ತವ್ಯವಸ್ತವಾದಂತಿವೆ. ಅನೇಕ ಸ್ಥಳಗಳಲ್ಲಿ ವಿರೋಧಾಭಾಸವೂ ಇದೆ’ ಎನ್ನುತ್ತಾ, ಇವನ್ನೆಲ್ಲ ಕಾದಂಬರಿ ಮಿತಿಯೊಳಗೆ ಪ್ರಸ್ತುತಪಡಿಸುವ ಪ್ರಯತ್ನ ಮಾಡಿದ್ದೇನೆ ಎಂದಿದ್ದಾರೆ ಜೋಶಿ.