<p>ನಮ್ಮ ನಿಮ್ಮ ಸುತ್ತ ಇರುವ ಚಿತ್ರಗಳನ್ನು ನೋಡಿ ಸುಮ್ಮನಾಗುತ್ತೇವೆ. ಹಾಗೆ ಸುಮ್ಮನಾಗದೇ ತಮ್ಮ ಸುತ್ತಲಿನ ಕಥೆಗಳನ್ನು ಈ ಕಥೆಗಾರ ಅನುಭವಿಸುತ್ತಲೇ ಹೋಗುತ್ತಾರೆ. ಇಲ್ಲಿಯ ಪ್ರತಿಪಾತ್ರಗಳೂ ತಮ್ಮ ಹಿಂದೆ ಹೊಸ ಕಥೆ ಬಚ್ಚಿಟ್ಟುಕೊಂಡಿರುವಂತಿವೆ. ರಾಯಚೂರಿನ ನೆಲದ ಭಾಷೆ, ಬಿಸಿಲಿನ ಬೇಗೆ, ಸಾಲ ಶೂಲವಾಗಿ ಬಲಿ ತೆಗೆದುಕೊಂಡ ಜೀವಗಳು ಎಲ್ಲವೂ ಇಲ್ಲಿ ಕಣ್ಮುಂದೆ ದೃಶ್ಯ ಕಟ್ಟುತ್ತ ಹೋಗುತ್ತವೆ. ಅಂಥ ಚಿತ್ರಕ ಶಕ್ತಿಯ ಕಥೆಗಳು ಈ ಸಂಕಲನದಲ್ಲಿವೆ. ಪ್ರತಿ ಮನುಷ್ಯನಿಗೂ ತುಸು ಪ್ರೀತಿ, ತುಸು ಗುರುತಿಸಿಕೊಳ್ಳುವಿಕೆ ಮತ್ತಿನಿತು ವ್ಯಾಲಿಡೇಷನ್, ಈ ಮೂರು ಗುಣಗಳು ನವಿರಾಗಿ ಕಥೆಗಳಲ್ಲಿ ಹರಡಿಕೊಳ್ಳುತ್ತವೆ. ಅಧಿಕಾರ, ವಂಚನೆ, ದುರಾಸೆ, ಮೋಸ, ದುರಾಡಳಿತ ಇವು ಢಾಳಾಗಿ ಕಾಣಿಸಿಕೊಳ್ಳುತ್ತವೆ. ನಮ್ಮ ಜೊತೆಗಿನವರ ಜೀವನ ಚಿತ್ರಗಳನ್ನು ನೋಡದಷ್ಟು ನಾವೆಲ್ಲ ಕಳೆದುಹೋಗಿದ್ದೇವೆಯೇ ಎಂಬ ಪ್ರಶ್ನೆಯನ್ನು ಈ ಕಥೆಗಳು ನಮ್ಮಲ್ಲಿ ಮೂಡಿಸುತ್ತವೆ. ಅಹುದಹುದು, ಇಂಥ ಪಾತ್ರಗಳು ನಮ್ಮ ಸುತ್ತಲೂ ಇವೆ, ಇಂಥ ಕಥೆಗಳನ್ನು ನಾವೂ ಕೇಳಿದ್ದೇವೆ ಎಂದಷ್ಟೇ ಅನಿಸಿದ್ದರೆ ಸಾಮಾನ್ಯ ಕಥೆಗಳಾಗಿರುತ್ತಿದ್ದವು. ಆದರೆ ಜಗತ್ತು ಇಷ್ಟೆಲ್ಲ ಚೂರಾಗಿದ್ದಾಗಲೂ, ಚೂರಾದಾಗಲೂ ನಾವು ಗಮನಿಸಲಿಲ್ಲವಲ್ಲ, ಸರಿಪಡಿಸಲು ಯತ್ನಿಸಲಿಲ್ಲವಲ್ಲ ಎಂಬ ಹಳಹಳಿಕೆಯನ್ನು ಈ ಕಥೆಗಳು ಉಳಿಸುತ್ತವೆ. ಇಲ್ಲಿ ಕಥೆಗಾರನೂ, ಕಥೆಯ ಪಾತ್ರಗಳೂ ನಮ್ಮ ಮೇಲೆ ಪಾರಮ್ಯ ಸಾಧಿಸುತ್ತ ಹೋಗುತ್ತವೆ. ರಾಯಚೂರು, ಕೊಪ್ಪಳ ಸುತ್ತಲಿನ ಭಾಷಾ ಸೊಗಡು, ಅಲ್ಲಿಯ ವಸ್ತ್ರವೈವಿಧ್ಯ, ಆಹಾರ ಎಲ್ಲವೂ ಕಥೆಯಲ್ಲಿ ಮೂಡಿ ಬಂದಾಗಲೆಲ್ಲ ಅದನ್ನು ಅನುಭವಿಸುವಂತೆಯೇ ದಟ್ಟವಾಗಿ ಕಥೆಗಳನ್ನು ನಿರೂಪಿಸಲಾಗಿದೆ.</p>.<p>ಮಾಯೆಯೆಂಬುದು ಮಾಯೆಯಲ್ಲ </p><p>ಲೇ: ಹಳೆಮನೆ ರಾಜಶೇಖರ </p><p>ಪ್ರ: ಅಂಕಿತ ಪ್ರಕಾಶನ </p><p>ಸಂ: 9019190502</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಮ್ಮ ನಿಮ್ಮ ಸುತ್ತ ಇರುವ ಚಿತ್ರಗಳನ್ನು ನೋಡಿ ಸುಮ್ಮನಾಗುತ್ತೇವೆ. ಹಾಗೆ ಸುಮ್ಮನಾಗದೇ ತಮ್ಮ ಸುತ್ತಲಿನ ಕಥೆಗಳನ್ನು ಈ ಕಥೆಗಾರ ಅನುಭವಿಸುತ್ತಲೇ ಹೋಗುತ್ತಾರೆ. ಇಲ್ಲಿಯ ಪ್ರತಿಪಾತ್ರಗಳೂ ತಮ್ಮ ಹಿಂದೆ ಹೊಸ ಕಥೆ ಬಚ್ಚಿಟ್ಟುಕೊಂಡಿರುವಂತಿವೆ. ರಾಯಚೂರಿನ ನೆಲದ ಭಾಷೆ, ಬಿಸಿಲಿನ ಬೇಗೆ, ಸಾಲ ಶೂಲವಾಗಿ ಬಲಿ ತೆಗೆದುಕೊಂಡ ಜೀವಗಳು ಎಲ್ಲವೂ ಇಲ್ಲಿ ಕಣ್ಮುಂದೆ ದೃಶ್ಯ ಕಟ್ಟುತ್ತ ಹೋಗುತ್ತವೆ. ಅಂಥ ಚಿತ್ರಕ ಶಕ್ತಿಯ ಕಥೆಗಳು ಈ ಸಂಕಲನದಲ್ಲಿವೆ. ಪ್ರತಿ ಮನುಷ್ಯನಿಗೂ ತುಸು ಪ್ರೀತಿ, ತುಸು ಗುರುತಿಸಿಕೊಳ್ಳುವಿಕೆ ಮತ್ತಿನಿತು ವ್ಯಾಲಿಡೇಷನ್, ಈ ಮೂರು ಗುಣಗಳು ನವಿರಾಗಿ ಕಥೆಗಳಲ್ಲಿ ಹರಡಿಕೊಳ್ಳುತ್ತವೆ. ಅಧಿಕಾರ, ವಂಚನೆ, ದುರಾಸೆ, ಮೋಸ, ದುರಾಡಳಿತ ಇವು ಢಾಳಾಗಿ ಕಾಣಿಸಿಕೊಳ್ಳುತ್ತವೆ. ನಮ್ಮ ಜೊತೆಗಿನವರ ಜೀವನ ಚಿತ್ರಗಳನ್ನು ನೋಡದಷ್ಟು ನಾವೆಲ್ಲ ಕಳೆದುಹೋಗಿದ್ದೇವೆಯೇ ಎಂಬ ಪ್ರಶ್ನೆಯನ್ನು ಈ ಕಥೆಗಳು ನಮ್ಮಲ್ಲಿ ಮೂಡಿಸುತ್ತವೆ. ಅಹುದಹುದು, ಇಂಥ ಪಾತ್ರಗಳು ನಮ್ಮ ಸುತ್ತಲೂ ಇವೆ, ಇಂಥ ಕಥೆಗಳನ್ನು ನಾವೂ ಕೇಳಿದ್ದೇವೆ ಎಂದಷ್ಟೇ ಅನಿಸಿದ್ದರೆ ಸಾಮಾನ್ಯ ಕಥೆಗಳಾಗಿರುತ್ತಿದ್ದವು. ಆದರೆ ಜಗತ್ತು ಇಷ್ಟೆಲ್ಲ ಚೂರಾಗಿದ್ದಾಗಲೂ, ಚೂರಾದಾಗಲೂ ನಾವು ಗಮನಿಸಲಿಲ್ಲವಲ್ಲ, ಸರಿಪಡಿಸಲು ಯತ್ನಿಸಲಿಲ್ಲವಲ್ಲ ಎಂಬ ಹಳಹಳಿಕೆಯನ್ನು ಈ ಕಥೆಗಳು ಉಳಿಸುತ್ತವೆ. ಇಲ್ಲಿ ಕಥೆಗಾರನೂ, ಕಥೆಯ ಪಾತ್ರಗಳೂ ನಮ್ಮ ಮೇಲೆ ಪಾರಮ್ಯ ಸಾಧಿಸುತ್ತ ಹೋಗುತ್ತವೆ. ರಾಯಚೂರು, ಕೊಪ್ಪಳ ಸುತ್ತಲಿನ ಭಾಷಾ ಸೊಗಡು, ಅಲ್ಲಿಯ ವಸ್ತ್ರವೈವಿಧ್ಯ, ಆಹಾರ ಎಲ್ಲವೂ ಕಥೆಯಲ್ಲಿ ಮೂಡಿ ಬಂದಾಗಲೆಲ್ಲ ಅದನ್ನು ಅನುಭವಿಸುವಂತೆಯೇ ದಟ್ಟವಾಗಿ ಕಥೆಗಳನ್ನು ನಿರೂಪಿಸಲಾಗಿದೆ.</p>.<p>ಮಾಯೆಯೆಂಬುದು ಮಾಯೆಯಲ್ಲ </p><p>ಲೇ: ಹಳೆಮನೆ ರಾಜಶೇಖರ </p><p>ಪ್ರ: ಅಂಕಿತ ಪ್ರಕಾಶನ </p><p>ಸಂ: 9019190502</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>