ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಂಗದ ಕತ್ತಲೆ...

Last Updated 22 ಡಿಸೆಂಬರ್ 2018, 19:46 IST
ಅಕ್ಷರ ಗಾತ್ರ

ಪದ್ಮರಾಜ ದಂಡಾವತಿ ಅವರು ‘ಪ್ರಜಾವಾಣಿ’ಯಲ್ಲಿ ಬರೆದ ಅಂಕಣ ಬರಹಗಳ ಸಂಕಲನ ‘ಸುರಂಗದ ಕತ್ತಲೆ...’ ಇದರಲ್ಲಿನ ಬರಹಗಳನ್ನು ಅವರು ಐದು ವಿಭಾಗಗಳಲ್ಲಿ ನೀಡಿದ್ದಾರೆ. ಸಮಾಜ, ಸಾಹಿತ್ಯ, ಸಂಸ್ಕೃತಿ, ಮಾಧ್ಯಮ, ರಾಜಕೀಯ, ಶಿಕ್ಷಣ... ಹೀಗೆ ದಂಡಾವತಿ ಅವರ ಬರಹಗಳ ಹರವು ದೊಡ್ಡದು. ಅವರ ಎಲ್ಲ ಬರಹಗಳ ಪ್ರಾತಿನಿಧಿಕ ರೂಪದಂತೆ ಇದೆ ಈ ಪುಸ್ತಕ.

ಪತ್ರಕರ್ತನಲ್ಲಿರುವ ಖಚಿತ ನಿಲುವು ಪುಸ್ತಕದ ಬರಹಗಳಲ್ಲಿ ಕಾಣುವ ಗುಣ. ಓದುಗನ ಮೇಲೆ ವಿಚಾರ ‘ಹೇರದ’, ವಿಷಯ ‘ಹೇಳುವ’ ವಿನ್ಯಾಸದಲ್ಲಿವೆ ಇಲ್ಲಿನ ಬರವಣಿಗೆಗಳು. ಇದನ್ನು ವಿಶೇಷವಾಗಿ, ರಾಜಕೀಯ ಸಂಸ್ಕೃತಿಯ ಆಸಕ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ತಮಗಾಗೇ ಬರೆದ ಕೃತಿಯೆಂಬಂತೆ ಓದಿಕೊಳ್ಳಬಹುದು.

ಸುರಂಗದ ಕತ್ತಲೆ...

ಲೇ: ಡಾ. ಪದ್ಮರಾಜ ದಂಡಾವತಿ

ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಬೆಲೆ: ₹ 300

ಪುಟ: 368

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT