ಪದ್ಮರಾಜ ದಂಡಾವತಿ ಅವರು ‘ಪ್ರಜಾವಾಣಿ’ಯಲ್ಲಿ ಬರೆದ ಅಂಕಣ ಬರಹಗಳ ಸಂಕಲನ ‘ಸುರಂಗದ ಕತ್ತಲೆ...’ ಇದರಲ್ಲಿನ ಬರಹಗಳನ್ನು ಅವರು ಐದು ವಿಭಾಗಗಳಲ್ಲಿ ನೀಡಿದ್ದಾರೆ. ಸಮಾಜ, ಸಾಹಿತ್ಯ, ಸಂಸ್ಕೃತಿ, ಮಾಧ್ಯಮ, ರಾಜಕೀಯ, ಶಿಕ್ಷಣ... ಹೀಗೆ ದಂಡಾವತಿ ಅವರ ಬರಹಗಳ ಹರವು ದೊಡ್ಡದು. ಅವರ ಎಲ್ಲ ಬರಹಗಳ ಪ್ರಾತಿನಿಧಿಕ ರೂಪದಂತೆ ಇದೆ ಈ ಪುಸ್ತಕ.