ರಾಜಕಾರಣಿಗಳು ದೇವರ ಅಡ್ಡೆಯಲ್ಲೂ ಹ್ಯಂಗೆಂಗಾಡ್ತರೆ ಅನ್ನದ್ಕೆ ತುರೇಮಣೆ ಒಂದು ಕಥೆ ಹೇಳಿದರು. ರಾಜಕಾರಣಿಗಳು ತಾವು ಊರೊಟ್ಟಿನ ಕೆಲಸ ಮಾಡದ್ರಿಂದ ಸ್ವರ್ಗ ಗ್ಯಾರಂಟಿ ಅಂತ ಕೊಚ್ಚಿಗ್ಯತರಲ್ಲ! ದೇವರ ಟೈಮಾಫೀಸಲ್ಲಿ ಜನರ ನಿರಾಧಾರ್ ನಂಬರಿಗೆ ಲಾಗಿನ್ ಆಗಿ ಹಣೆಬರಹ ಸ್ಕ್ಯಾನ್ ಮಾಡಿ, ಜ್ಞಾನ್ ನಂಬರ್ ಇದ್ದೋರನ್ನ ಸ್ವರ್ಗಕ್ಕೆ ಇಲ್ಲದೋರನ್ನ ನರಕಕ್ಕೆ ಕಳಗುಸ್ತಿದ್ದರಂತೆ. ಆದರೆ ರಾಜಕಾರಣಿಗಳಿಗೆ ಜ್ಞಾನ್ ನಂಬರೇ ಇಲ್ಲದೇ ಡೈರೆಕ್ಟಾಗಿ ನರಕಕ್ಕೆ ಹೋಯ್ತಿದ್ದರಂತೆ!