ಬಾನ್ಸುರಿಯ ಮೇರು ಶಿಖರ ಪಂ. ಹರಿಪ್ರಸಾದ್ ಚೌರಾಸಿಯ ಅವರ ಗರಡಿಯಲ್ಲಿ ಪಳಗಿರುವ ರಾಕೇಶ್ ಚೌರಾಸಿಯ ಬಾಲ ಪ್ರತಿಭೆ. ಬಾನ್ಸುರಿಯಲ್ಲಿ ಸ್ವರ, ತಾಳ, ಲಯ ಮಾಧುರ್ಯವನ್ನು ಹದವರಿತಂತೆ ಮೂಡಿಸುತ್ತಾ ಭಾವದಲೆಯನ್ನು ಶ್ರವಣಾನಂದಕರವಾಗಿ ಪ್ರಸ್ತುತಪಡಿಸುವ ಪರಿ ಅನನ್ಯ. ಅವರು ತಮ್ಮ ಸಂಗೀತ ಯಾನದ ಅನುಭವಗಳನ್ನು ಹಂಚಿಕೊಂಡರು...
ಡಿ. 10ಕ್ಕೆ ಜುಗಲ್ಬಂದಿ
ಬೆಂಗಳೂರಿನ ವಿವಿಢ್ ಆರ್ಟ್ಸ್ ಸಾಂಸ್ಕೃತಿಕ ಸಂಘಟನೆ ಡಿ. 10ರಂದು ಚೌಡಯ್ಯ ಸ್ಮಾರಕ ಭವನದಲ್ಲಿ ‘ಉತ್ತರ–ದಕ್ಷಿಣ ಜುಗಲ್ಬಂದಿ’ ಕಛೇರಿ ಆಯೋಜಿಸಿದೆ. ಬಾನ್ಸುರಿ ವಾದಕರಾದ ಪಂ. ರಾಕೇಶ್ ಚೌರಾಸಿಯ ಹಾಗೂ ಕೊಳಲು ವಾದಕ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯ ಅವರಿಂದ ಹಿಂದೂಸ್ತಾನಿ–ಕರ್ನಾಟಕ ಶಾಸ್ತ್ರೀಯ ವೇಣುವಾದನ ಕೇಳುಗರನ್ನು ಸಮ್ಮೋಹನಗೊಳಿಸಲಿದೆ. ಸಂಜೆ 6,30ರಿಂದ ಕಛೇರಿ ಆರಂಭ. ಪ್ರವೇಶ ಶುಲ್ಕವಿದೆ. ಟಿಕೆಟ್ಗಳು ಬುಕ್ ಮೈ ಶೋನಲ್ಲಿ ಲಭ್ಯ ಇವೆ.